ಕುಟ್ಟಪ್ಪ ಹಸವನ್ನು ಮೇಯಲೆಂದು ಗದ್ದೆ ಬಯಲಿನಲ್ಲಿ ಕಟ್ಟಿ ಹಾಕಿದ್ದರು. ಅರಣ್ಯದಿಂದ ಬಹಳ ದೂರದಲ್ಲಿರುವ ಕಿರುಗೂರು ಮತ್ತೂರಿನಲ್ಲಿ ಯಾವುದೇ ಹುಲಿ ಭಯವಿರಲಿಲ್ಲ. ಆದರೆ ಕಾಫಿ ತೋಟದ ಒಳಗೆ ನುಸುಳಿ ಬಂದಿರುವ ಹುಲಿ ಹಸುವನ್ನು ಬಲಿ ತಗೆದುಕೊಂಡಿರುವುದು ಈ ಭಾಗದ ಜನತೆಗೆ ತೀವ್ರ ಆತಂಕ ಮೂಡಿಸಿದೆ. ಪೊನ್ನಂಪೇಟೆ ತಾಲ್ಲೂಕಿನಲ್ಲಿ ಎರಡು ದಿನಗಳ ಅವಧಿಯಲ್ಲಿ ಹುಲಿ ದಾಳಿಗೆ ಎರಡು ಜಾನುವಾರುಗಳನ್ನು ಬಲಿಯಾದಂತಾಗಿದೆ.