ಶ್ರದ್ಧಾಭಕ್ತಿಯ ದೈವರಾಧನೆಗೆ ವಿಜೃಂಭಣೆಯ ಅಗತ್ಯವೇ ಇಲ್ಲ. ಕೊಡಗಿನಲ್ಲಿ ಬಹಳಷ್ಟು ಮಂದಿ ತುಳು ಭಾಷಿಕರು ಇದ್ದಾರೆ. ಇಲ್ಲೆಲ್ಲ ತುಳುನಾಡಿನ ದೈವನರ್ತಕರನ್ನು ಇಲ್ಲಿಗೆ ಕರೆಸಿ ನಿಯಮಾನುಸಾರ ದೈವರಾಧನೆ ನಡೆಸಲಾಗುತ್ತಿದೆ. ಆದರೆ, ಮೈಸೂರು, ಬೆಂಗಳೂರು, ಶಿವಮೊಗ್ಗ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಇತರೆಡೆ ಮನಸೋಇಚ್ಛೆ, ಬೇಕಾಬಿಟ್ಟಿಯಾಗಿ ದೈವರಾಧನೆ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.