<p><strong>ಮಡಿಕೇರಿ:</strong> ‘ಬೆಳಕಿನ ದಸರೆ’ಯಲ್ಲಿ ನಡೆಯುವ ದಶಮಂಟಪಗಳ ಶೋಭಾಯಾತ್ರೆಯಲ್ಲಿ 3ನೇಯದಾಗಿ ಹೊರಡುವ ಮಂಟಪ ದಂಡಿನ ಮಾರಿಯಮ್ಮ ಮಂಟಪ ಸಮಿತಿಯದ್ದು. ಈಗ ಈ ಸಮಿತಿ ಶತಮಾನೋತ್ಸವದ ಹೊಸ್ತಿಲಲ್ಲಿದೆ. 94 ವರ್ಷಗಳಿಂದ ಮಂಟಪ ಹೊರಡಿಸುತ್ತಿರುವ ಈ ಸಮಿತಿ ಇದೀಗ 95ನೇ ವರ್ಷಕ್ಕೆ ಕಾಲಿರಿಸಿದೆ.</p>.<p>ಈ ಬಾರಿ ‘ಶಿವನಿಂದ ಅಂಧಾಸುರನ ವಧೆ’ ಎಂಬ ಕಥಾಪ್ರಸಂಗವನ್ನು ಪ್ರಸ್ತುತಿಗಾಗಿ ಆಯ್ದುಕೊಂಡಿದೆ. ಒಟ್ಟು 14 ಕಲಾಕೃತಿಗಳಿದ್ದು, ಅವುಗಳಲ್ಲಿ ಒಂದು ಕಲಾಕೃತಿ ಬೃಹದ್ದಾಕಾರವಾಗಿದ್ದು, ಜನಮನವನ್ನು ಸೂರೆಗೊಳ್ಳಲಿದೆ. ಈ ಕಲಾಕೃತಿಗಳನ್ನು ಇಲ್ಲಿನ ಆನಂದ್ ಆರ್ಟ್ಸ್ನವರು ರೂಪಿಸುತ್ತಿದ್ದಾರೆ.</p>.<p>ದಿನೇಶ್ ನಾಯರ್ ಅವರ ಚಲವನವಲನ, ದಿಂಡಿಗಲ್ಲಿನ ಜೇಮ್ಸ್ ಅವರ ಲೈಟಿಂಗ್ಸ್, ಮುರುಳಿ ಅವರ ಫೈರ್ ವರ್ಕ್ಸ್, ಎವಿಎಂ ಸೌಂಡ್ ಸ್ಟುಡಿಯೊ, ಮಂಗಳೂರಿನ ವಿಕಾಸ್ ಅವರಿಂದ ಎಡಿಟಿಂಗ್ ಇದೆ ಎಂದು ಸಮಿತಿಯ ಸಹ ಖಜಾಂಚಿ ಅಭಿಜಿತ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಅಧ್ಯಕ್ಷ ನಾಗರಾಜ್ ಅವರು ಮಾತನಾಡಿ, ‘ಈ ಬಾರಿ ಅತಿ ವಿಶಿಷ್ಟವಾಗಿ ಮಂಟಪದ ಕಥಾಪ್ರದರ್ಶನ ಇರಲಿದೆ’ ಎಂದರು</p>.<p>ಜಂಟಿ ಅಧ್ಯಕ್ಷರಾಗಿ ನಾಗರಾಜ್, ಕಿಶೋರ್ಬಾಬು, ಕಾರ್ಯದರ್ಶಿಯಾಗಿ ಎಂ.ಎಸ್.ಸತೀಶ್, ಖಜಾಂಚಿಯಾಗಿ ಪವನ್ ಕಾರ್ಯನಿರ್ವಹಿಸುತ್ತಿದ್ದಾರೆ.</p>.<p>ಕಳೆದ ವರ್ಷ ಪ್ರದರ್ಶಿಸಿದ್ದ ‘ಕೌಶಿಕ ಮಹಾತ್ಮೆ’, ಅದಕ್ಕೂ ಮುಂಚಿನ ವರ್ಷದಲ್ಲಿ ‘ಪರಶಿವನಿಂದ ಜಲಂಧರನ ಸಂಹಾರ’ ಕಥಾನಕ ಹಾಗೂ ಅದಕ್ಕೂ ಮುಂಚಿನ ವರ್ಷದಲ್ಲಿ ಪ್ರದರ್ಶಿಸಿದ್ದ ‘ಭೂಲೋಕ ರಕ್ಷಣೆಗೆ ಪಾರ್ವತಿಯಿಂದ ಶಾಕಾಂಬರಿ ರೂಪ’ ಧರಿಸಿದ ಕಥಾನಕವು ಜನಮನಸೂರೆಗೊಂಡಿತ್ತು.</p>.<p>***</p>.<p><strong>‘ಆನಂದ ರಾಮಾಯಣ’ದಲ್ಲಿ ದೊಡ್ಡ ಸಂಖ್ಯೆ ಕಲಾಕೃತಿಗಳು!</strong></p>.<p>ದಶಮಂಟಪಗಳ ಶೋಭಾಯಾತ್ರೆಯಲ್ಲಿ 4ನೇಯದಾಗಿ ತೆರಳುವ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ಈ ಬಾರಿ ತನ್ನ 63ನೇ ಮಂಟಪೋತ್ಸವದ ಸಂಭ್ರಮದಲ್ಲಿದೆ.</p>.<p>ಈ ಬಾರಿ ‘ಆನಂದ ರಾಮಾಯಣ’ ಕಥಾವಸ್ತುವನ್ನು ಪ್ರದರ್ಶನಕ್ಕಾಗಿ ಆಯ್ದುಕೊಂಡಿದೆ. ಇದರ ಬಹುದೊಡ್ಡ ವಿಶೇಷ ಎಂದರೆ, 23 ಕಲಾಕೃತಿಗಳಿರುವುದು. ಇಷ್ಟು ದೊಡ್ಡ ಸಂಖ್ಯೆ ಕಲಾಕೃತಿಗಳು ನಿಜಕ್ಕೂ ಅತ್ಯಮೋಘ ಎನಿಸಲು ಕಸರತ್ತುಗಳು ನಡೆಯುತ್ತಿವೆ.</p>.<p>ಈ ಕಲಾಕೃತಿಗಳಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ, ರಾಕ್ಷಸ ವೃಂದ ಹೀಗೆ ಸಾಲು ಸಾಲು ಕಲಾಕೃತಿಗಳು ಇರಲಿವೆ. ಈ ಕಲಾಕೃತಿಗಳ ಪೈಕಿ ಕುಂಭಕರ್ಣ ಕಲಾಕೃತಿಯೂ ಇದ್ದು, ಇದು ಸಹ ಸೂಜಿಗಲ್ಲಿನಂತೆ ಸೆಳೆಯುವ ಸಂಭವ ಇದೆ. ಈ ಎಲ್ಲ ಕಲಾಕೃತಿಗಳೆಲ್ಲವೂ ಮಡಿಕೇರಿ ಮತ್ತು ಮೈಸೂರು ಸಮೀಪದ ಉದ್ಭೂರಿನಲ್ಲಿ ರಚನೆಯಾಗುತ್ತಿದೆ.</p>.<p>ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮಂಡಳಿಯ ಅಧ್ಯಕ್ಷ ಜಗದೀಶ್, ‘ಈ ಬಾರಿ ಮಂಟಪದ ಪ್ರದರ್ಶನ ಅತ್ಯಂತ ವಿಶೇಷವಾಗಿರಲಿದೆ’ ಎಂದರು.</p>.<p>ಕಳೆದ ಬಾರಿ ಮಂಡಲಿಯು ‘ಅರುಣಾಸುರ ವಧೆ’ ಹಾಗೂ ಅದಕ್ಕೂ ಮುಂಚಿನ ವರ್ಷದಲ್ಲಿ ‘ಶ್ರೀ ಕಟೀಲ್ ಕ್ಷೇತ್ರ ಮಹಾತ್ಮೆ’ಯ ಕಥಾ ಪ್ರಸಂಗವನ್ನು ಅತ್ಯಂತ ವೈಭವೋಪೇತವಾಗಿ ಪ್ರದರ್ಶಿಸಿ ಗಮನ ಸೆಳೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ‘ಬೆಳಕಿನ ದಸರೆ’ಯಲ್ಲಿ ನಡೆಯುವ ದಶಮಂಟಪಗಳ ಶೋಭಾಯಾತ್ರೆಯಲ್ಲಿ 3ನೇಯದಾಗಿ ಹೊರಡುವ ಮಂಟಪ ದಂಡಿನ ಮಾರಿಯಮ್ಮ ಮಂಟಪ ಸಮಿತಿಯದ್ದು. ಈಗ ಈ ಸಮಿತಿ ಶತಮಾನೋತ್ಸವದ ಹೊಸ್ತಿಲಲ್ಲಿದೆ. 94 ವರ್ಷಗಳಿಂದ ಮಂಟಪ ಹೊರಡಿಸುತ್ತಿರುವ ಈ ಸಮಿತಿ ಇದೀಗ 95ನೇ ವರ್ಷಕ್ಕೆ ಕಾಲಿರಿಸಿದೆ.</p>.<p>ಈ ಬಾರಿ ‘ಶಿವನಿಂದ ಅಂಧಾಸುರನ ವಧೆ’ ಎಂಬ ಕಥಾಪ್ರಸಂಗವನ್ನು ಪ್ರಸ್ತುತಿಗಾಗಿ ಆಯ್ದುಕೊಂಡಿದೆ. ಒಟ್ಟು 14 ಕಲಾಕೃತಿಗಳಿದ್ದು, ಅವುಗಳಲ್ಲಿ ಒಂದು ಕಲಾಕೃತಿ ಬೃಹದ್ದಾಕಾರವಾಗಿದ್ದು, ಜನಮನವನ್ನು ಸೂರೆಗೊಳ್ಳಲಿದೆ. ಈ ಕಲಾಕೃತಿಗಳನ್ನು ಇಲ್ಲಿನ ಆನಂದ್ ಆರ್ಟ್ಸ್ನವರು ರೂಪಿಸುತ್ತಿದ್ದಾರೆ.</p>.<p>ದಿನೇಶ್ ನಾಯರ್ ಅವರ ಚಲವನವಲನ, ದಿಂಡಿಗಲ್ಲಿನ ಜೇಮ್ಸ್ ಅವರ ಲೈಟಿಂಗ್ಸ್, ಮುರುಳಿ ಅವರ ಫೈರ್ ವರ್ಕ್ಸ್, ಎವಿಎಂ ಸೌಂಡ್ ಸ್ಟುಡಿಯೊ, ಮಂಗಳೂರಿನ ವಿಕಾಸ್ ಅವರಿಂದ ಎಡಿಟಿಂಗ್ ಇದೆ ಎಂದು ಸಮಿತಿಯ ಸಹ ಖಜಾಂಚಿ ಅಭಿಜಿತ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಅಧ್ಯಕ್ಷ ನಾಗರಾಜ್ ಅವರು ಮಾತನಾಡಿ, ‘ಈ ಬಾರಿ ಅತಿ ವಿಶಿಷ್ಟವಾಗಿ ಮಂಟಪದ ಕಥಾಪ್ರದರ್ಶನ ಇರಲಿದೆ’ ಎಂದರು</p>.<p>ಜಂಟಿ ಅಧ್ಯಕ್ಷರಾಗಿ ನಾಗರಾಜ್, ಕಿಶೋರ್ಬಾಬು, ಕಾರ್ಯದರ್ಶಿಯಾಗಿ ಎಂ.ಎಸ್.ಸತೀಶ್, ಖಜಾಂಚಿಯಾಗಿ ಪವನ್ ಕಾರ್ಯನಿರ್ವಹಿಸುತ್ತಿದ್ದಾರೆ.</p>.<p>ಕಳೆದ ವರ್ಷ ಪ್ರದರ್ಶಿಸಿದ್ದ ‘ಕೌಶಿಕ ಮಹಾತ್ಮೆ’, ಅದಕ್ಕೂ ಮುಂಚಿನ ವರ್ಷದಲ್ಲಿ ‘ಪರಶಿವನಿಂದ ಜಲಂಧರನ ಸಂಹಾರ’ ಕಥಾನಕ ಹಾಗೂ ಅದಕ್ಕೂ ಮುಂಚಿನ ವರ್ಷದಲ್ಲಿ ಪ್ರದರ್ಶಿಸಿದ್ದ ‘ಭೂಲೋಕ ರಕ್ಷಣೆಗೆ ಪಾರ್ವತಿಯಿಂದ ಶಾಕಾಂಬರಿ ರೂಪ’ ಧರಿಸಿದ ಕಥಾನಕವು ಜನಮನಸೂರೆಗೊಂಡಿತ್ತು.</p>.<p>***</p>.<p><strong>‘ಆನಂದ ರಾಮಾಯಣ’ದಲ್ಲಿ ದೊಡ್ಡ ಸಂಖ್ಯೆ ಕಲಾಕೃತಿಗಳು!</strong></p>.<p>ದಶಮಂಟಪಗಳ ಶೋಭಾಯಾತ್ರೆಯಲ್ಲಿ 4ನೇಯದಾಗಿ ತೆರಳುವ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ಈ ಬಾರಿ ತನ್ನ 63ನೇ ಮಂಟಪೋತ್ಸವದ ಸಂಭ್ರಮದಲ್ಲಿದೆ.</p>.<p>ಈ ಬಾರಿ ‘ಆನಂದ ರಾಮಾಯಣ’ ಕಥಾವಸ್ತುವನ್ನು ಪ್ರದರ್ಶನಕ್ಕಾಗಿ ಆಯ್ದುಕೊಂಡಿದೆ. ಇದರ ಬಹುದೊಡ್ಡ ವಿಶೇಷ ಎಂದರೆ, 23 ಕಲಾಕೃತಿಗಳಿರುವುದು. ಇಷ್ಟು ದೊಡ್ಡ ಸಂಖ್ಯೆ ಕಲಾಕೃತಿಗಳು ನಿಜಕ್ಕೂ ಅತ್ಯಮೋಘ ಎನಿಸಲು ಕಸರತ್ತುಗಳು ನಡೆಯುತ್ತಿವೆ.</p>.<p>ಈ ಕಲಾಕೃತಿಗಳಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ, ರಾಕ್ಷಸ ವೃಂದ ಹೀಗೆ ಸಾಲು ಸಾಲು ಕಲಾಕೃತಿಗಳು ಇರಲಿವೆ. ಈ ಕಲಾಕೃತಿಗಳ ಪೈಕಿ ಕುಂಭಕರ್ಣ ಕಲಾಕೃತಿಯೂ ಇದ್ದು, ಇದು ಸಹ ಸೂಜಿಗಲ್ಲಿನಂತೆ ಸೆಳೆಯುವ ಸಂಭವ ಇದೆ. ಈ ಎಲ್ಲ ಕಲಾಕೃತಿಗಳೆಲ್ಲವೂ ಮಡಿಕೇರಿ ಮತ್ತು ಮೈಸೂರು ಸಮೀಪದ ಉದ್ಭೂರಿನಲ್ಲಿ ರಚನೆಯಾಗುತ್ತಿದೆ.</p>.<p>ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮಂಡಳಿಯ ಅಧ್ಯಕ್ಷ ಜಗದೀಶ್, ‘ಈ ಬಾರಿ ಮಂಟಪದ ಪ್ರದರ್ಶನ ಅತ್ಯಂತ ವಿಶೇಷವಾಗಿರಲಿದೆ’ ಎಂದರು.</p>.<p>ಕಳೆದ ಬಾರಿ ಮಂಡಲಿಯು ‘ಅರುಣಾಸುರ ವಧೆ’ ಹಾಗೂ ಅದಕ್ಕೂ ಮುಂಚಿನ ವರ್ಷದಲ್ಲಿ ‘ಶ್ರೀ ಕಟೀಲ್ ಕ್ಷೇತ್ರ ಮಹಾತ್ಮೆ’ಯ ಕಥಾ ಪ್ರಸಂಗವನ್ನು ಅತ್ಯಂತ ವೈಭವೋಪೇತವಾಗಿ ಪ್ರದರ್ಶಿಸಿ ಗಮನ ಸೆಳೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>