<p><strong>ಮಡಿಕೇರಿ:</strong> ದಸರಾ ಪ್ರಯುಕ್ತ ನಗರದಲ್ಲಿ ನಡೆದ ಜಿಲ್ಲಾಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಮಡಿಕೇರಿಯ ತಫೀಮಾ ತಾಜ್ ಫ್ರೆಂಡ್ಸ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.</p>.<p>ಮಡಿಕೇರಿ ದಸರಾ ಕ್ರೀಡಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಮಂಗಳವಾರ ಸಂಜೆ ನಡೆದಿತ್ತು.<br />ಕ್ರೀಡಾಕೂಟದಲ್ಲಿ ಮೈಸೂರು, ಮಂಗಳೂರು, ಪುತ್ತೂರು, ಸುಳ್ಯ ಹಾಗೂ ಸ್ಥಳೀಯ ಆಟಗಾರನ್ನೊಳಗೊಂಡಂತೆ 12 ತಂಡಗಳು ಪ್ರಶಸ್ತಿ ಸುತ್ತಿಗಾಗಿ ಸೆಣಸಾಟ ನಡೆಸಿದವು.</p>.<p>ಫೈನಲ್ ಪಂದ್ಯಾದಲ್ಲಿ ತಫೀಮ ತಾಜ ಫ್ರೆಂಡ್ಸ್ ಮಡಿಕೇರಿ ಮತ್ತು ಜೆಬಿಎಸ್ಸಿ ಕುಶಾಲನಗರ ತಂಡಗಳು ಪ್ರವೇಶ ಪಡೆಯಿತು.</p>.<p>ಮೊದಲಾರ್ಧದಲ್ಲಿ ಕುಶಾಲನಗರ ತಂಡ 10–1 ಮುನ್ನಡೆ ಸಾಧಿಸಿತು. ನಂತರ, ದ್ವಿತೀಯಾರ್ಧದಲ್ಲಿ ಸೂಪರ್ ರೈಡ್ ಹಾಗೂ ಅತ್ಯತ್ತಮ ಟ್ಯಾಕಲ್ಗಳ ಮೂಲಕ ಮಡಿಕೇರಿ ತಂಡ 21–13 ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ಆಯಿತು. ಜೆಬಿಎಸ್ಸಿ ಕುಶಾಲನಗರ ತಂಡವು, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.</p>.<p>ಶಾಂತಿನಿಕೇತನ(ಎ) ತಂಡ ತೃತೀಯ ಸ್ಥಾನ, ದೇವರಕೊಲ್ಲಿ ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡವು. ತೀರ್ಪುಗಾರರಾಗಿ ಆನಂದ್, ಹಂಡ್ಲಿ ಕೃಷ್ಣ, ಪ್ರವೀಣ್, ನಾಗರಾಜು, ತೇಜಸ್, ಪ್ರಸನ್ನ ಕುಮಾರ್, ರಾಘವೇಂದ್ರ ಶೆಟ್ಟಿ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ದಸರಾ ಪ್ರಯುಕ್ತ ನಗರದಲ್ಲಿ ನಡೆದ ಜಿಲ್ಲಾಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಮಡಿಕೇರಿಯ ತಫೀಮಾ ತಾಜ್ ಫ್ರೆಂಡ್ಸ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.</p>.<p>ಮಡಿಕೇರಿ ದಸರಾ ಕ್ರೀಡಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಮಂಗಳವಾರ ಸಂಜೆ ನಡೆದಿತ್ತು.<br />ಕ್ರೀಡಾಕೂಟದಲ್ಲಿ ಮೈಸೂರು, ಮಂಗಳೂರು, ಪುತ್ತೂರು, ಸುಳ್ಯ ಹಾಗೂ ಸ್ಥಳೀಯ ಆಟಗಾರನ್ನೊಳಗೊಂಡಂತೆ 12 ತಂಡಗಳು ಪ್ರಶಸ್ತಿ ಸುತ್ತಿಗಾಗಿ ಸೆಣಸಾಟ ನಡೆಸಿದವು.</p>.<p>ಫೈನಲ್ ಪಂದ್ಯಾದಲ್ಲಿ ತಫೀಮ ತಾಜ ಫ್ರೆಂಡ್ಸ್ ಮಡಿಕೇರಿ ಮತ್ತು ಜೆಬಿಎಸ್ಸಿ ಕುಶಾಲನಗರ ತಂಡಗಳು ಪ್ರವೇಶ ಪಡೆಯಿತು.</p>.<p>ಮೊದಲಾರ್ಧದಲ್ಲಿ ಕುಶಾಲನಗರ ತಂಡ 10–1 ಮುನ್ನಡೆ ಸಾಧಿಸಿತು. ನಂತರ, ದ್ವಿತೀಯಾರ್ಧದಲ್ಲಿ ಸೂಪರ್ ರೈಡ್ ಹಾಗೂ ಅತ್ಯತ್ತಮ ಟ್ಯಾಕಲ್ಗಳ ಮೂಲಕ ಮಡಿಕೇರಿ ತಂಡ 21–13 ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ಆಯಿತು. ಜೆಬಿಎಸ್ಸಿ ಕುಶಾಲನಗರ ತಂಡವು, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.</p>.<p>ಶಾಂತಿನಿಕೇತನ(ಎ) ತಂಡ ತೃತೀಯ ಸ್ಥಾನ, ದೇವರಕೊಲ್ಲಿ ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡವು. ತೀರ್ಪುಗಾರರಾಗಿ ಆನಂದ್, ಹಂಡ್ಲಿ ಕೃಷ್ಣ, ಪ್ರವೀಣ್, ನಾಗರಾಜು, ತೇಜಸ್, ಪ್ರಸನ್ನ ಕುಮಾರ್, ರಾಘವೇಂದ್ರ ಶೆಟ್ಟಿ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>