ತ್ಯಾಜ್ಯದಿಂದ ದುರ್ವಾಸನೆ ಹೊರಹೊಮ್ಮುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸ್ಥಳೀಯರಲ್ಲಿ ರೋಗ ಹರಡುವ ಆಂತಕ ಸೃಷ್ಟಿಯಾಗಿದೆ. ಇನ್ನು ಚಿತ್ರಮಂದಿರದ ದ್ವಾರದ ಎದುರು ಇರುವ ಮೋರಿಗೆ ತಡೆಗೋಡೆ ಅವಶ್ಯಕತೆ ಇದೆ. ಇಲ್ಲಿಗೆ ವಾಹನ ತಿರುಗಿಸುವ ವೇಳೆ ಈ ಚರಂಡಿಗೆ ಬೀಳುವ ಸಾಧ್ಯತೆ ಇದೆ. ಘನ ವಾಹನಗಳು ಸಂಚರಿಸಲು ಹರಸಾಹಸಪಡುವಂತಾಗಿದೆ. ಪಾದಚಾರಿಗಳು ಭಯದಿಂದ ಈ ಸ್ಥಳದಲ್ಲಿ ನಡೆದಾಡುತ್ತಿದ್ದಾರೆ.