ವಿರಾಜಪೇಟೆ: ಸಮೀಪದ ತೋರದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಪರಮೇಶ್ವರ ಅವರ ನಾಯಿ ‘ಟೈಗಾ’ ಪ್ರಾಣಾಪಾಯದಿಂದ ಪಾರಾಗಿದೆ.
ಆ.9ರಂದು ಸಂಭವಿಸಿದ ಭೂಕುಸಿತದಿಂದ ಪರಮೇಶ್ವರ್ ಅವರ ಪತ್ನಿ ಮಮತಾ, ಮಗಳು ಲಿಖಿತಾ ಮೃತಪಟ್ಟಿದ್ದರು. ಮಗ ದರ್ಶನ್ ಹಾಗೂ ಪರಮೇಶ್ವರ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು.
ಇದೇ ಸಂದರ್ಭದಲ್ಲಿ ಮನೆಯಲ್ಲಿದ್ದ ಟೈಗಾ ಬೀರುವಿನಲ್ಲಿ ಸೇರಿಕೊಂಡಿದ್ದರಿಂದ ಅದರ ಪ್ರಾಣ ಉಳಿದಿದೆ. ಕಾರ್ಯಾಚರಣೆ ನಡೆಸುತ್ತಿದ್ದ ಎನ್ಡಿಆರ್ಎಫ್ ಸಿಬ್ಬಂದಿಕಣ್ಣಿಗೆ ನಾಯಿ ಬಿದ್ದಿತ್ತು. ಅದನ್ನು ರಕ್ಷಣೆ ಮಾಡಿದ ಸಿಬ್ಬಂದಿ ಸಮೀಪದ ಕೆದಮುಳ್ಳೂರಿನ ಪುನರ್ವಸತಿ ಕೇಂದ್ರದಲ್ಲಿ ಬಿಟ್ಟಿದ್ದರು.