ಕುಶಾಲನಗರ: ಪಟ್ಟಣದ ಬಿ.ಎಂ ರಸ್ತೆಯ ನಿವಾಸಿ ಹೃದಯರೋಗ ತಜ್ಞ ಡಾ.ಕಿರಣ್ ಕಾಳಪ್ಪ ಅವರು ಲೆಫ್ಟಿನೆಂಟ್ ಕರ್ನಲ್ ಹುದ್ದೆಯಿಂದ ಕರ್ನಲ್ ಆಗಿ ಮುಂಬಡ್ತಿ ಹೊಂದಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿರುವ ಕಮಾಂಡೋ ಆಸ್ಪತ್ರೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಡಾ.ಕಿರಣ್ ಅವರು ಇದೀಗ ಮುಂಬಡ್ತಿ ಹೊಂದಿ ಕೊಲ್ಕತ್ತಾದ ಕಮಾಂಡೋ ಆಸ್ಪತ್ರೆಯಲ್ಲಿ ಹೃದಯ ರೋಗ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅವರ ಪತ್ನಿ ಡಾ.ಕಾವ್ಯಶ್ರೀ ದಂತರೋಗ ತಜ್ಞರಾಗಿದ್ದಾರೆ. ಡಾ.ಕಿರಣ್ ಇಲ್ಲಿನ ಹಿರಿಯ ನಾಗರಿಕರಾದ ಚೌಡ್ಲು ಕಾಳಪ್ಪ ಹಾಗೂ ಕಾವೇರಿ ಅವರ ಪುತ್ರ.