ಕುಶಾಲನಗರ: (ಕೊಡಗು ಜಿಲ್ಲೆ): ಇಲ್ಲಿನ ದುಬಾರೆ ಹಾಡಿಯಲ್ಲಿ ಸಾಕಾನೆಯೊಂದರ ದಾಳಿಗೆ ಸಿಲುಕಿ ಹಾಡಿ ನಿವಾಸಿ ಬಸಪ್ಪ (28) ಮೃತಪಟ್ಟಿದ್ದಾರೆ.
ಅವರು ಗುರುವಾರ ಬೆಳಿಗ್ಗೆ ಮನೆಯಿಂದ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಆನೆ ದಾಳಿ ಮಾಡಿದೆ. ಸ್ಥಳಕ್ಕೆ ತೆರಳಿದ ಮಾವುತನ ಮೇಲೂ ಆನೆ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡ ಬಸಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.