<p><strong>ಮಡಿಕೇರಿ</strong>: ಅನುದಾನ ಮೊದಲೇ ಸಿಗಬೇಕು, ರಸ್ತೆಗಳ ದುರಸ್ತಿಯಾಗಬೇಕು, ಪೊಲೀಸರು ಅಂತಿಮ ಹಂತದಲ್ಲಿ ಹೊಸ ನಿಯಮಗಳನ್ನು ಹೇರುವುದು ಬೇಡ, ಎಂಬಿತ್ಯಾದಿ ಒತ್ತಾಯಗಳು ಇಲ್ಲಿ ಗುರುವಾರ ನಡೆದ ದಸರಾ ದಶಮಂಟಪ ಸಮಿತಿ ಸಭೆಯಲ್ಲಿ ಕೇಳಿ ಬಂದವು.</p>.<p>ಮಾತನಾಡಿದ ಬಹಳಷ್ಟು ಮಂದಿ, ಪೊಲೀಸರು ಹೇರುವ ಬಿಗಿ ನಿಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರವಲ್ಲ, ರಸ್ತೆಗಳ ದುರಾವಸ್ಥೆಯ ಬಗ್ಗೆಯೂ ಕಿಡಿಕಾರಿದರು.</p>.<p>ದಶಮಂಟಪಗಳಿಗೆ ಹಾಗೂ ಕರಗ ಸಮಿತಿಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಈ ಅನುದಾನವನ್ನು ಮೊದಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.</p>.<p>‘ದಸರಾ ಸಮಿತಿಗೆ ನಗರಸಭೆಯ ಅಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ. ಆದರೆ, ಈಗ ನಗರಸಭೆ ಅಧ್ಯಕ್ಷ ಸ್ಥಾನ ಖಾಲಿ ಇದೆ. ಹಾಗಾಗಿ, ಜಿಲ್ಲಾಧಿಕಾರಿ ಇದರ ಅಧ್ಯಕ್ಷರಾಗಲಿದ್ದಾರೆ. ಅವರಿಗೆ ಮೊದಲೆ ದಸರಾ ದಶಮಂಟಪಗಳ ಸಂಪ್ರದಾಯವನ್ನು ಮನವರಿಕೆ ಮಾಡಿಸಬೇಕು’ ಎಂದು ಬಹುತೇಕ ಸದಸ್ಯರು ಆಗ್ರಹಿಸಿದರು.</p>.<p>ಡಿ.ಜೆ ಸಂಗೀತಕ್ಕೆ ಕಡಿವಾಣ ಹೇರುವುದು ಸರಿಯಲ್ಲ. ಕನಿಷ್ಠ ಒಂದು ದಿನದ ಮಟ್ಟಿಗೆ ಮಾತ್ರ ವಿಶೇಷ ಸಂದರ್ಭ ಎಂದು ಪರಿಗಣಿಸಿ ಪೊಲೀಸರು ಹಾಗೂ ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಸದಸ್ಯರು ಮನವಿ ಮಾಡಿದರು.</p>.<p>ದಶಮಂಟಪಗಳು ತಮ್ಮದೇಯಾದ ಬಿಗಿ ನಿಯಮಗಳನ್ನು ರೂಪಿಸಿಕೊಂಡಿವೆ. ಹೀಗಾಗಿ, ಪೊಲೀಸರು ಕೊನೆ ಗಳಿಗೆಯಲ್ಲಿ ಹೊಸದಾಗಿ ನಿಯಮಗಳನ್ನು ಹೇರುವುದು ಬೇಡ ಎಂದರು.</p>.<p>‘ನಗರದ ರಸ್ತೆಗಳೆಲ್ಲವೂ ಗುಂಡಿ ಬಿದ್ದಿವೆ. ದಸರಾ ಅನುದಾನದಲ್ಲಿ ಈ ಗುಂಡಿಗಳನ್ನು ಮುಚ್ಚುವುದು ಬೇಡ. ಗುಂಡಿಗಳನ್ನು ನಗರಸಭೆ ತನ್ನದೇ ಅನುದಾನದಲ್ಲಿ ಮುಚ್ಚಲಿ’ ಎಂದರು.</p>.<p>‘ಕರಗ ಸಮಿತಿಗಳಿಗೆ ಜಿಎಸ್ಟಿ ನಿಯಮದಿಂದ ತೊಂದರೆಯಾಗುತ್ತಿದ್ದು, ಇದನ್ನು ಸರಿಪಡಿಸಬೇಕು’ ಎಂದು ಕರಗ ಸಮಿತಿ ಮುಖಂಡರು ವಿಷಯ ಪ್ರಸ್ತಾಪಿಸಿದರು.</p>.<p>ಅಂತಿಮವಾಗಿ ₹ 3 ಕೋಟಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲು, ಡಿ.ಜೆ ಬಳಕೆ ಕುರಿತು ಹಾಗೂ ರಸ್ತೆ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಯವರಲ್ಲಿ ಚರ್ಚಿಸಲು, ಬೀದಿ ದೀಪಗಳ ದುರಸ್ತಿ, ಪಂಪಿನ ಕೆರೆ ಸ್ವಚ್ಛತೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸಮಿತಿಯಿಂದ ಪತ್ರ ಬರೆಯಲು ತೀರ್ಮಾನಿಸಲಾಯಿತು.</p>.<p>ದಶಮಂಟಪ ಸಮಿತಿ ಅಧ್ಯಕ್ಷ ಬಿ.ಸಿ.ಜಗದೀಶ್, ಪ್ರಕಾಶ್ ಆಚಾರ್ಯ, ಅರುಣ್ ಶೆಟ್ಟಿ, ಮಂಜುನಾಥ್, ಸುಕುಮಾರ್, ಕಾರ್ಯಾಧ್ಯಕ್ಷ ಬಿ.ಕೆ.ಜಗದೀಶ್, ಮುಖಂಡರಾದ ಉಮೇಶ್, ಸದಾ ಮುದ್ದಪ್ಪ, ಪ್ರಭುರೈ, ಬಿ.ಪಿ.ಡಿಶು, ಕೂಪದಿರ ಅಯ್ಯಪ್ಪ, ಮಧುರಯ್ಯ, ಚಾಮಿ, ಮಂಜುನಾಥ್, ಮುದ್ದರಾಜ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಅನುದಾನ ಮೊದಲೇ ಸಿಗಬೇಕು, ರಸ್ತೆಗಳ ದುರಸ್ತಿಯಾಗಬೇಕು, ಪೊಲೀಸರು ಅಂತಿಮ ಹಂತದಲ್ಲಿ ಹೊಸ ನಿಯಮಗಳನ್ನು ಹೇರುವುದು ಬೇಡ, ಎಂಬಿತ್ಯಾದಿ ಒತ್ತಾಯಗಳು ಇಲ್ಲಿ ಗುರುವಾರ ನಡೆದ ದಸರಾ ದಶಮಂಟಪ ಸಮಿತಿ ಸಭೆಯಲ್ಲಿ ಕೇಳಿ ಬಂದವು.</p>.<p>ಮಾತನಾಡಿದ ಬಹಳಷ್ಟು ಮಂದಿ, ಪೊಲೀಸರು ಹೇರುವ ಬಿಗಿ ನಿಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರವಲ್ಲ, ರಸ್ತೆಗಳ ದುರಾವಸ್ಥೆಯ ಬಗ್ಗೆಯೂ ಕಿಡಿಕಾರಿದರು.</p>.<p>ದಶಮಂಟಪಗಳಿಗೆ ಹಾಗೂ ಕರಗ ಸಮಿತಿಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಈ ಅನುದಾನವನ್ನು ಮೊದಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.</p>.<p>‘ದಸರಾ ಸಮಿತಿಗೆ ನಗರಸಭೆಯ ಅಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ. ಆದರೆ, ಈಗ ನಗರಸಭೆ ಅಧ್ಯಕ್ಷ ಸ್ಥಾನ ಖಾಲಿ ಇದೆ. ಹಾಗಾಗಿ, ಜಿಲ್ಲಾಧಿಕಾರಿ ಇದರ ಅಧ್ಯಕ್ಷರಾಗಲಿದ್ದಾರೆ. ಅವರಿಗೆ ಮೊದಲೆ ದಸರಾ ದಶಮಂಟಪಗಳ ಸಂಪ್ರದಾಯವನ್ನು ಮನವರಿಕೆ ಮಾಡಿಸಬೇಕು’ ಎಂದು ಬಹುತೇಕ ಸದಸ್ಯರು ಆಗ್ರಹಿಸಿದರು.</p>.<p>ಡಿ.ಜೆ ಸಂಗೀತಕ್ಕೆ ಕಡಿವಾಣ ಹೇರುವುದು ಸರಿಯಲ್ಲ. ಕನಿಷ್ಠ ಒಂದು ದಿನದ ಮಟ್ಟಿಗೆ ಮಾತ್ರ ವಿಶೇಷ ಸಂದರ್ಭ ಎಂದು ಪರಿಗಣಿಸಿ ಪೊಲೀಸರು ಹಾಗೂ ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಸದಸ್ಯರು ಮನವಿ ಮಾಡಿದರು.</p>.<p>ದಶಮಂಟಪಗಳು ತಮ್ಮದೇಯಾದ ಬಿಗಿ ನಿಯಮಗಳನ್ನು ರೂಪಿಸಿಕೊಂಡಿವೆ. ಹೀಗಾಗಿ, ಪೊಲೀಸರು ಕೊನೆ ಗಳಿಗೆಯಲ್ಲಿ ಹೊಸದಾಗಿ ನಿಯಮಗಳನ್ನು ಹೇರುವುದು ಬೇಡ ಎಂದರು.</p>.<p>‘ನಗರದ ರಸ್ತೆಗಳೆಲ್ಲವೂ ಗುಂಡಿ ಬಿದ್ದಿವೆ. ದಸರಾ ಅನುದಾನದಲ್ಲಿ ಈ ಗುಂಡಿಗಳನ್ನು ಮುಚ್ಚುವುದು ಬೇಡ. ಗುಂಡಿಗಳನ್ನು ನಗರಸಭೆ ತನ್ನದೇ ಅನುದಾನದಲ್ಲಿ ಮುಚ್ಚಲಿ’ ಎಂದರು.</p>.<p>‘ಕರಗ ಸಮಿತಿಗಳಿಗೆ ಜಿಎಸ್ಟಿ ನಿಯಮದಿಂದ ತೊಂದರೆಯಾಗುತ್ತಿದ್ದು, ಇದನ್ನು ಸರಿಪಡಿಸಬೇಕು’ ಎಂದು ಕರಗ ಸಮಿತಿ ಮುಖಂಡರು ವಿಷಯ ಪ್ರಸ್ತಾಪಿಸಿದರು.</p>.<p>ಅಂತಿಮವಾಗಿ ₹ 3 ಕೋಟಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲು, ಡಿ.ಜೆ ಬಳಕೆ ಕುರಿತು ಹಾಗೂ ರಸ್ತೆ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಯವರಲ್ಲಿ ಚರ್ಚಿಸಲು, ಬೀದಿ ದೀಪಗಳ ದುರಸ್ತಿ, ಪಂಪಿನ ಕೆರೆ ಸ್ವಚ್ಛತೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸಮಿತಿಯಿಂದ ಪತ್ರ ಬರೆಯಲು ತೀರ್ಮಾನಿಸಲಾಯಿತು.</p>.<p>ದಶಮಂಟಪ ಸಮಿತಿ ಅಧ್ಯಕ್ಷ ಬಿ.ಸಿ.ಜಗದೀಶ್, ಪ್ರಕಾಶ್ ಆಚಾರ್ಯ, ಅರುಣ್ ಶೆಟ್ಟಿ, ಮಂಜುನಾಥ್, ಸುಕುಮಾರ್, ಕಾರ್ಯಾಧ್ಯಕ್ಷ ಬಿ.ಕೆ.ಜಗದೀಶ್, ಮುಖಂಡರಾದ ಉಮೇಶ್, ಸದಾ ಮುದ್ದಪ್ಪ, ಪ್ರಭುರೈ, ಬಿ.ಪಿ.ಡಿಶು, ಕೂಪದಿರ ಅಯ್ಯಪ್ಪ, ಮಧುರಯ್ಯ, ಚಾಮಿ, ಮಂಜುನಾಥ್, ಮುದ್ದರಾಜ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>