ಕುಟುಂಬವು ಕರಡ ಗ್ರಾಮದ ಮಲೆತಿರಿಕೆ ಬೆಟ್ಟದಲ್ಲಿನ ದೇವಾಲಯಕ್ಕೆ ಪ್ರಯಾಣಿಸುತ್ತಿತ್ತು. ಬೆಟ್ಟದ ತಪ್ಪಲಿನ ಕಿರಿದಾದ ರಸ್ತೆಯಲ್ಲಿ ಸಾಗುತ್ತಿದ್ದಾಗ ಕಾಡಾನೆ ದಾಳಿ ನಡೆಸಿದೆ. ನಾಲ್ವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಅಪಾಯದಿಂದ ತಪ್ಪಿಸಿಕೊಂಡರು. ಈ ಮಧ್ಯೆ ಆನೆಯು ದಂತದಿಂದ ಕಾರನ್ನು ಜಖಂಗೊಳಿಸಿತು. ದಾರಿಯಲ್ಲಿ ಸಾಗುತ್ತಿದ್ದ ನಾಗರಿಕರು ಕೂಗಿಕೊಂಡ ಪರಿಣಾಮ ಹೆಚ್ಚಿನ ಹಾನಿ ತಪ್ಪಿತು.