ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ರೈಲ್ವೆ ಬ್ಯಾರಿಕೇಡ್‌ನೊಳಗೆ ನುಸುಳಿದ ಕಾಡಾನೆ

Published 14 ಮಾರ್ಚ್ 2024, 15:14 IST
Last Updated 14 ಮಾರ್ಚ್ 2024, 15:14 IST
ಅಕ್ಷರ ಗಾತ್ರ

ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ಐಗೂರು ಸಮೀಪ ಗುರುವಾರ ರೈಲ್ವೆ ಬ್ಯಾರಿಕೇಡ್‌ ಅನ್ನು ಕಾಡಾನೆಯೊಂದು ಸಲೀಸಾಗಿ ದಾಟಿದೆ.

ತೋಟಗಳ ಕಡೆಯಿಂದ ಬಂದ ಆನೆ ರೈಲ್ವೆ ಬ್ಯಾರಿಕೇಡ್‌ನೊಳಗೆ ನುಸುಳಿ ವಾಪಸ್ ಕಾಡಿಗೆ ತೆರಳಿದೆ.

ಈ ಬಗ್ಗೆ ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಚೇತನ್, ‘ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಕಾಡಾನೆಯು ರೈಲ್ವೆ ಬ್ಯಾರಿಕೇಡ್ ದಾಟಿದೆ. ಇದು ಮಧ್ಯಮ ಗಾತ್ರದ್ದಾದ್ದರಿಂದ ಸುಲಭವಾಗಿ ಬ್ಯಾರಿಕೇಡ್‌ನೊಳಗೆ ನುಸುಳಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT