ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ಐಗೂರು ಸಮೀಪ ಗುರುವಾರ ರೈಲ್ವೆ ಬ್ಯಾರಿಕೇಡ್ ಅನ್ನು ಕಾಡಾನೆಯೊಂದು ಸಲೀಸಾಗಿ ದಾಟಿದೆ.
ತೋಟಗಳ ಕಡೆಯಿಂದ ಬಂದ ಆನೆ ರೈಲ್ವೆ ಬ್ಯಾರಿಕೇಡ್ನೊಳಗೆ ನುಸುಳಿ ವಾಪಸ್ ಕಾಡಿಗೆ ತೆರಳಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಚೇತನ್, ‘ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಕಾಡಾನೆಯು ರೈಲ್ವೆ ಬ್ಯಾರಿಕೇಡ್ ದಾಟಿದೆ. ಇದು ಮಧ್ಯಮ ಗಾತ್ರದ್ದಾದ್ದರಿಂದ ಸುಲಭವಾಗಿ ಬ್ಯಾರಿಕೇಡ್ನೊಳಗೆ ನುಸುಳಿದೆ’ ಎಂದು ತಿಳಿಸಿದರು.