<p><strong>ಸುಂಟಿಕೊಪ್ಪ: ಇ</strong>ಲ್ಲಿ ನಡೆಯುತ್ತಿರುವ ಮಿಡ್ ಸಿಟಿ ಮೂರನೇ ವರ್ಷದ 5 ಆಟಗಾರರ ರಾಷ್ಟ್ರಮಟ್ಟದ ಉದ್ಘಾಟನಾ ಟೂರ್ನಿಯಲ್ಲಿ ಗೋವಾ ತಂಡ ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.</p>.<p>ಶುಕ್ರವಾರ ರಾತ್ರಿ ನಡೆದ ಉದ್ಘಾಟನಾ ಪಂದ್ಯವು ಗೋವಾ ಮತ್ತು ಅತಿಥೇಯ ಮಿಡ್ ಸಿಟಿ ಜೂನಿಯರ್ ತಂಡಗಳ ನಡುವೆ ನಡೆಯಿತು. ಎರಡು ತಂಡಗಳು ಅನುಭವಿ ಆಟಗಾರರನ್ನು ಹೊಂದಿದ್ದು, ಹೊಂದಾಣಿಕೆಯ ಆಟದ ಮೂಲಕ ಎರಡು ತಂಡಗಳ ಆಕರ್ಷಕ ಪ್ರದರ್ಶನಗಳ ಮೂಲಕ ಮನರಂಜನೆ ನೀಡಿದವು.</p>.<p>ಪಂದ್ಯದ ಮೊದಲರ್ಧದಲ್ಲಿ ಗೋವಾ ತಂಡ ಮಿಡ್ ಸಿಟಿ ತಂಡದ ಮೇಲೆ ಹಿಡಿತವನ್ನು ಸಾಧಿಸಿ , 5-0 ಗೋಲುಗಳ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯ ಅರ್ಧದಲ್ಲಿ ಮಿಡ್ ಸಿಟಿ ತಂಡದವರು ಆಕರ್ಷಕ ಆಟದೊಂದಿಗೆ ಗೋವಾ ತಂಡಕ್ಕೆ 2 ಗೋಲುಗಳ ಆಘಾತ ನೀಡಿದರು. ಆದರೆ, ಕೊನೆಯ 5 ನಿಮಿಷದಲ್ಲಿ 2 ಗೋಲುಗಳನ್ನು ಬಾರಿಸಿ, ಕೊನೆಯಲ್ಲಿ 7-2 ಗೋಲುಗಳಿಂದ ಗೋವಾ ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.<br /><br />ಪಂದ್ಯಕ್ಕೂ ಮೊದಲು ಕೊಡಗು ಜಿಲ್ಲಾಧಿಕಾರಿಯ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಚಾಲನೆ ನೀಡಿದರು.ರಾಷ್ಟ್ರೀಯ ಆಟಗಾರರನ್ನು ಪರಿಚಯಿಸಿ ಮೈದಾನ ಸ್ಫೂರ್ತಿಯ ನೆಲವಾಗಿದೆ ಎಂದರು.</p>.<p>ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಕಡಗದಾಳು ಪಂಚಾಯತಿ ಮಾಜಿ ಅಧ್ಯಕ್ಷ ಜಯಣ್ಣ, ಬ್ಲೂಬಾಯ್ಸ್ ಯುವಕ ಸಂಘದ ವ್ಯವಸ್ಥಾಪಕ ಟಿ.ವಿ.ಪ್ರಸನ್ನ ಕ್ರೀಡಾಪಟುಗಳನ್ನು ಪರಿಚಯಿಸಿದರು. ಗೆದ್ದ ತಂಡಕ್ಕೆ ₹2 ಲಕ್ಷ ಬಹುಮಾನ ನೀಡುತ್ತಿರುವುದು ಇತಿಹಾಸ ಸೃಷ್ಟಿಸಿದೆ ಎಂದು ಪಿ.ಆರ್.ಸುನಿಲ್ ಕುಮಾರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಂಟಿಕೊಪ್ಪ: ಇ</strong>ಲ್ಲಿ ನಡೆಯುತ್ತಿರುವ ಮಿಡ್ ಸಿಟಿ ಮೂರನೇ ವರ್ಷದ 5 ಆಟಗಾರರ ರಾಷ್ಟ್ರಮಟ್ಟದ ಉದ್ಘಾಟನಾ ಟೂರ್ನಿಯಲ್ಲಿ ಗೋವಾ ತಂಡ ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.</p>.<p>ಶುಕ್ರವಾರ ರಾತ್ರಿ ನಡೆದ ಉದ್ಘಾಟನಾ ಪಂದ್ಯವು ಗೋವಾ ಮತ್ತು ಅತಿಥೇಯ ಮಿಡ್ ಸಿಟಿ ಜೂನಿಯರ್ ತಂಡಗಳ ನಡುವೆ ನಡೆಯಿತು. ಎರಡು ತಂಡಗಳು ಅನುಭವಿ ಆಟಗಾರರನ್ನು ಹೊಂದಿದ್ದು, ಹೊಂದಾಣಿಕೆಯ ಆಟದ ಮೂಲಕ ಎರಡು ತಂಡಗಳ ಆಕರ್ಷಕ ಪ್ರದರ್ಶನಗಳ ಮೂಲಕ ಮನರಂಜನೆ ನೀಡಿದವು.</p>.<p>ಪಂದ್ಯದ ಮೊದಲರ್ಧದಲ್ಲಿ ಗೋವಾ ತಂಡ ಮಿಡ್ ಸಿಟಿ ತಂಡದ ಮೇಲೆ ಹಿಡಿತವನ್ನು ಸಾಧಿಸಿ , 5-0 ಗೋಲುಗಳ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯ ಅರ್ಧದಲ್ಲಿ ಮಿಡ್ ಸಿಟಿ ತಂಡದವರು ಆಕರ್ಷಕ ಆಟದೊಂದಿಗೆ ಗೋವಾ ತಂಡಕ್ಕೆ 2 ಗೋಲುಗಳ ಆಘಾತ ನೀಡಿದರು. ಆದರೆ, ಕೊನೆಯ 5 ನಿಮಿಷದಲ್ಲಿ 2 ಗೋಲುಗಳನ್ನು ಬಾರಿಸಿ, ಕೊನೆಯಲ್ಲಿ 7-2 ಗೋಲುಗಳಿಂದ ಗೋವಾ ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.<br /><br />ಪಂದ್ಯಕ್ಕೂ ಮೊದಲು ಕೊಡಗು ಜಿಲ್ಲಾಧಿಕಾರಿಯ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಚಾಲನೆ ನೀಡಿದರು.ರಾಷ್ಟ್ರೀಯ ಆಟಗಾರರನ್ನು ಪರಿಚಯಿಸಿ ಮೈದಾನ ಸ್ಫೂರ್ತಿಯ ನೆಲವಾಗಿದೆ ಎಂದರು.</p>.<p>ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಕಡಗದಾಳು ಪಂಚಾಯತಿ ಮಾಜಿ ಅಧ್ಯಕ್ಷ ಜಯಣ್ಣ, ಬ್ಲೂಬಾಯ್ಸ್ ಯುವಕ ಸಂಘದ ವ್ಯವಸ್ಥಾಪಕ ಟಿ.ವಿ.ಪ್ರಸನ್ನ ಕ್ರೀಡಾಪಟುಗಳನ್ನು ಪರಿಚಯಿಸಿದರು. ಗೆದ್ದ ತಂಡಕ್ಕೆ ₹2 ಲಕ್ಷ ಬಹುಮಾನ ನೀಡುತ್ತಿರುವುದು ಇತಿಹಾಸ ಸೃಷ್ಟಿಸಿದೆ ಎಂದು ಪಿ.ಆರ್.ಸುನಿಲ್ ಕುಮಾರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>