ಭತ್ತದ ಕದಿರು ತೆಗೆಯುವ ಗದ್ದೆ ಬದುವಿನಲ್ಲಿ ಮಾವಿನ ಎಲೆಗಳ ತೋರಣ ಕಟ್ಟಲಾಗಿತ್ತು. ಹಾಲು, ಜೇನುತುಪ್ಪವನ್ನು ಭತ್ತದ ಕದಿರಿನ ಬುಡಕ್ಕೆ ಸುರಿದು ಅಭಿಷೇಕ ಮಾಡಿದರು. ಅರಿಸಿನ ಕುಂಕಮ ಹಚ್ಚಿ, ದೀಪ ಬೆಳಗಿಸಿ ಗಂಧದ ಕಡ್ಡಿಯಿಂದ ಕದಿರಿನ ಬುಡ ಪೂಜಿಸಿದರು. ಬಳಿಕ ಮನಯ ಯಜಮಾನ ಭತ್ತದ ಬದುವಿನಲ್ಲಿ ನಿಂತು ಆಕಾಶದ ಕಡೆಗೆ ಗಾಳಿಯಲ್ಲಿ ಗುಂಡು ಹಾರಿಸಿದರು. ಬಳಿಕ ಭತ್ತದ ಕದಿರು ಕೊಯ್ದು ದಡದಲ್ಲಿದ್ದ ಎಲ್ಲರೂ 'ಪೊಲಿ ಪೊಲಿ ದೇವಾ' ಎಂದು ಸ್ಮರಣೆ ಮಾಡುತ್ತಾ ಗದ್ದೆಯಿಂದ ಮೇಲೆ ಬಂದರು.