<p><strong>ಪೊನ್ನಂಪೇಟೆ:</strong> ಕಾಡಾನೆಗಳ ಹಿಂಡೊಂದು ಹುಲ್ಲಿನ ಮೆದೆಗೆ ದಾಳಿ ಮಾಡಿ ನಾಶಗೊಳಿಸಿವೆ.</p>.<p>ಭಾನುವಾರ ರಾತ್ರಿ ಕಿರುಗೂರು ಗ್ರಾಮದ ಕೃಷಿಕ ಕಾಕೇರ ರವಿ ಎಂಬುವವರು ಸಂಗ್ರಹಿಸಿಟ್ಟಿದ ಹುಲ್ಲು ನಾಶ ಮಾಡಿವೆ. ಸುಮಾರು 800 ಹುಲ್ಲಿನ ಕಂತೆ ನಾಶವಾಗಿದ್ದು, ಸುಮಾರು ₹18 ಸಾವಿರ ಹಣ ನಷ್ಟ ಉಂಟಾಗಿದೆ ಎಂದು ಕೃಷಿಕ ರವಿ ತಿಳಿಸಿದ್ದಾರೆ.</p>.<p>ಗ್ರಾಮದಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿರುವ ಮೂರು ಕಾಡಾನೆಗಳು ರಾತ್ರಿ ಹುಲ್ಲಿನ ಮೆದೆಗೆ ದಾಳಿ ನಡೆಸಿವೆ. ಇದರಿಂದ ಸಾಕಷ್ಟು ಹುಲ್ಲು ಕೆಸರಿನಲ್ಲಿ ಹೂತು ಹೋಗಿವೆ. ಒಂದಷ್ಟು ಹುಲ್ಲು ನೀರಿನಲ್ಲಿ ತೋಯ್ದು ಹೋಗಿರುವುದರಿಂದ ಸಂಗ್ರಹಿಸಲು ತೊಂದರೆಯಾಗುತ್ತಿದೆ. ಜಾನುವಾರುಗಳು ಅಹಾರ ಕಳೆದುಕೊಂಡಿದೆ.</p>.<p>ಕಾಡಾನೆಗಳ ಉಪಟಳ ಗ್ರಾಮದಲ್ಲಿನ ತೋಟಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ಕೊರಕುಟ್ಟೀರ ಬೇಬಿ ನಂಜಪ್ಪ, ಪಡಿಞರಂಡ ಗಿರೀಶ್ ಎಂಬುವವರಿಗೆ ಸೇರಿದ ತೋಟದಲ್ಲಿನ ಬಾಳೆ ಗಿಡಗಳನ್ನು ಕೂಡ ನಾಶ ಮಾಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೊನ್ನಂಪೇಟೆ:</strong> ಕಾಡಾನೆಗಳ ಹಿಂಡೊಂದು ಹುಲ್ಲಿನ ಮೆದೆಗೆ ದಾಳಿ ಮಾಡಿ ನಾಶಗೊಳಿಸಿವೆ.</p>.<p>ಭಾನುವಾರ ರಾತ್ರಿ ಕಿರುಗೂರು ಗ್ರಾಮದ ಕೃಷಿಕ ಕಾಕೇರ ರವಿ ಎಂಬುವವರು ಸಂಗ್ರಹಿಸಿಟ್ಟಿದ ಹುಲ್ಲು ನಾಶ ಮಾಡಿವೆ. ಸುಮಾರು 800 ಹುಲ್ಲಿನ ಕಂತೆ ನಾಶವಾಗಿದ್ದು, ಸುಮಾರು ₹18 ಸಾವಿರ ಹಣ ನಷ್ಟ ಉಂಟಾಗಿದೆ ಎಂದು ಕೃಷಿಕ ರವಿ ತಿಳಿಸಿದ್ದಾರೆ.</p>.<p>ಗ್ರಾಮದಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿರುವ ಮೂರು ಕಾಡಾನೆಗಳು ರಾತ್ರಿ ಹುಲ್ಲಿನ ಮೆದೆಗೆ ದಾಳಿ ನಡೆಸಿವೆ. ಇದರಿಂದ ಸಾಕಷ್ಟು ಹುಲ್ಲು ಕೆಸರಿನಲ್ಲಿ ಹೂತು ಹೋಗಿವೆ. ಒಂದಷ್ಟು ಹುಲ್ಲು ನೀರಿನಲ್ಲಿ ತೋಯ್ದು ಹೋಗಿರುವುದರಿಂದ ಸಂಗ್ರಹಿಸಲು ತೊಂದರೆಯಾಗುತ್ತಿದೆ. ಜಾನುವಾರುಗಳು ಅಹಾರ ಕಳೆದುಕೊಂಡಿದೆ.</p>.<p>ಕಾಡಾನೆಗಳ ಉಪಟಳ ಗ್ರಾಮದಲ್ಲಿನ ತೋಟಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ಕೊರಕುಟ್ಟೀರ ಬೇಬಿ ನಂಜಪ್ಪ, ಪಡಿಞರಂಡ ಗಿರೀಶ್ ಎಂಬುವವರಿಗೆ ಸೇರಿದ ತೋಟದಲ್ಲಿನ ಬಾಳೆ ಗಿಡಗಳನ್ನು ಕೂಡ ನಾಶ ಮಾಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>