ಗುಣಮಟ್ಟದ ಕಾಮಗಾರಿ ಮಾಡಿದರೆ ಈ ಬಗೆಯ ಗುಂಡಿಗಳು ಬೀಳುವುದಿಲ್ಲ. ಈಗ ಕೊಡಗಿನಲ್ಲಿ ರಸ್ತೆ ಕಾಮಗಾರಿ ಎಂಬುದು ಲಾಭದಾಯಕ ಕೆಲಸ ಎಂಬಂತಾಗಿದೆ. ಗುಣಮಟ್ಟವನ್ನು ಖಾತರಿ ಮಾಡುವಂತಹ ವ್ಯವಸ್ಥೆಯೇ ಇಲ್ಲ. ಇನ್ನಾದರೂ ಇಡೀ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡು ಗುಣಮಟ್ಟದ ಕಾಮಗಾರಿಯತ್ತ ಚಿತ್ತಹರಿಸಿದರೆ ರಸ್ತೆಗಳ ಸ್ಥಿತಿ ಈ ರೀತಿಯಾಗುವುದಿಲ್ಲ.ಗೀತಾ ಗಿರೀಶ್ ಆರ್ಥಿಕ ಸಲಹೆಗಾರರು
ಮಡಿಕೇರಿ ನಗರಸಭೆ ವ್ಯಾಪ್ತಿಗೆ ಬರುವ ಸಂತ ಜೋಸೆಫರ ಶಾಲೆಯ ಸುತ್ತಮುತ್ತಲಿನ ರಸ್ತೆಗಳು ಕಿರಿದಾಗಿದ್ದು ಹೊಂಡಗುಂಡಿಗಳಿಂದ ಕೂಡಿದೆ. ವಾಹನಗಳ ಓಡಾಟ ಜಾಸ್ತಿ ಇದ್ದು ವಾಹನ ಚಾಲಕರು ಮಾತ್ರವಲ್ಲದೇ ಪಾದಚಾರಿಗಳಿಗೂ ಈ ರಸ್ತೆ ಪ್ರಯಾಣ ಕಷ್ಟವಾಗುತ್ತಿದೆ. ಮೇ ತಿಂಗಳಿನ ಮಳೆಯಲ್ಲೇ ನಡೆದ ರಸ್ತೆ ಕಾಮಗಾರಿ ಮಳೆಯೊಂದಿಗೇ ತೊಳೆದು ಹೋಗಿದೆ. ಕೊಡಗಿನಂತಹ ಮಳೆಪೀಡಿತ ಪ್ರದೇಶಗಳ ರಸ್ತೆ ಕೆಲಸಗಳಿಗೆ ಸೂಕ್ತವಾದ ನೂತನ ತಂತ್ರಜ್ಞಾನ ಬಳಸುವ ಅವಶ್ಯಕತೆ ಇದೆ. ಇಲ್ಲದಿದ್ದಲ್ಲಿ ಪ್ರತೀ ವರ್ಷ ರಸ್ತೆ ಕಾಮಗಾರಿ ಎಂಬ ಪ್ರಹಸನ ನಡೆಯುತ್ತಲೇ ಇರುತ್ತದೆ. ಕೆದಂಬಾಡಿ ಕಾಂಚನ ಗೌಡ ಉಪನ್ಯಾಸಕಿ.
ಕೊಡಗು ಜಿಲ್ಲೆಯಲ್ಲಿನ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳಿಗೆ ಈಗಾಗಲೇ ‘ವೆಟ್ ಮಿಕ್ಸ್’ ಹಾಕಲಾಗಿದೆ. ಆದರೆ ಅದು ಸುರಿಯುತ್ತಿರುವ ಮಳೆಗೆ ನಿಲ್ಲುತ್ತಿಲ್ಲ. ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮತ್ತೆ ಗುಂಡಿ ಬೀಳುತ್ತಿದೆ ಇಬ್ರಾಹಿಂ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್. ಕಾಂಕ್ರೀಟ್ ರಸ್ತೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಮಡಿಕೇರಿ ನಗರದಲ್ಲಿ ಒಟ್ಟು 30 ಕಿ.ಮೀ ಉದ್ದದ ಕಾಂಕ್ರೀಟ್ ರಸ್ತೆಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗ ಮುಖ್ಯರಸ್ತೆಯಲ್ಲಿರುವ ಗುಂಡಿಗಳನ್ನು ‘ವೆಟ್ ಮಿಕ್ಸ್’ ಹಾಕಿ ಗುಂಡಿ ಮುಚ್ಚುತ್ತಿದ್ದೇವೆ. ಈಗಾಗಲೆ 6 ಲೋಡ್ನಷ್ಟು ವೆಟ್ ಮಿಕ್ಸ್ ಹಾಕಿದ್ದೇವೆ. ಆದರೆ ಬಡಾವಣೆಗಳ ರಸ್ತೆಯ ಗುಂಡಿಗಳಿಗೆ ಇನ್ನೂ ಹಾಕಲು ಶುರು ಮಾಡಿಲ್ಲ.ಎಚ್.ಆರ್.ರಮೇಶ್ ಮಡಿಕೇರಿ ನಗರಸಭೆ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.