ಸಂಘದ ಅಧ್ಯಕ್ಷ ನಿವೃತ್ತ ಹಿರಿಯ ಅರಣ್ಯಾಧಿಕಾರಿ ಸಿದ್ದಪ್ಪ ‘ಬುದ್ಧ’ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ‘ಬುದ್ಧರ ಚಿಂತನೆ ವಿಚಾರ ಹಾಗೂ ಮಾರ್ಗದರ್ಶನದಿಂದ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ’ ಎಂದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಬಿ ಸಿ ರಾಜು, ಕಾರ್ಯದರ್ಶಿ ಯು.ಟಿ.ರಾಮಯ್ಯ ಹಾಗೂ ಸದಸ್ಯರು ಭಾಗವಹಿಸಿದ್ದರು.
ಇದೇ ವೇಳಿ ಬುದ್ಧರ ಜೀವನ ಚರಿತ್ರೆ ಕುರಿತ ಕಿರುಚಿತ್ರ ಹಾಗೂ ವಿಡಿಯೋ ಹಾಡುಗಳನ್ನು ಪ್ರದರ್ಶಿಸಿಸಲಾಯಿತು.