ಹೊರ ರಾಜ್ಯ, ಜಿಲ್ಲೆಗಳಿಂದ ಪ್ರವಾಸಕ್ಕೆಂದು ನಗರಕ್ಕೆ ಬರುವವರು ರಾಜಾಸೀಟ್, ರಾಜರಕೋಟೆ, ಗದ್ದುಗೆ, ಅಬ್ಬಿ ಫಾಲ್ಸ್, ಓಂಕಾರೇಶ್ವರ ದೇಗುಲಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಾರೆ. ರಾಜಾಸೀಟ್ ಪಕ್ಕದಲ್ಲೇ ನೆಹರೂ ಮಂಟಪವಿದ್ದರೂ ಪ್ರವಾಸಿಗರ ಕಣ್ಣಿಗೆ ಬೀಳುತ್ತಿಲ್ಲ. ಪಕ್ಕದಲ್ಲೇ ನೆಹರೂ ಮಂಟಪವಿದೆ ಎಂಬ ಒಂದೇ ಒಂದು ನಾಮಫಲಕವೂ ಅಲ್ಲಿ ಕಣ್ಣಿಗೆ ಬೀಳುವುದಿಲ್ಲ. ಅಷ್ಟರಮಟ್ಟಿಗೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ನಗರದ ನಾಗರಿಕರು ದೂರಿದ್ದಾರೆ.