ಉತ್ಸವಕ್ಕೂ ಎರಡು ದಿನ ಮೊದಲು ಭಕ್ತರು ಸಾಂಪ್ರದಾಯಿಕ ಆಚರಣೆಯಾಗಿ ನಾಯಿಯ ಮೂರ್ತಿಗಳ ಹರಕೆ ಸಲ್ಲಿಸಿದರು. ಮೇ ತಿಂಗಳ ಮೂರು ಮತ್ತು ನಾಲ್ಕರಂದು ಮತ್ತೊಮ್ಮೆ ಉತ್ಸವ ಜರುಗಲಿದೆ. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಚೆಟ್ಟೀರ ಶ್ಯಾಂ ಬೋಪಣ್ಣ, ತಕ್ಕಮುಖ್ಯಸ್ಥ ಕೊಂಡೀರ ಪೊನ್ನಣ್ಣ ವಾರ್ಷಿಕ ಉತ್ಸವದ ನೇತೃತ್ವ ವಹಿಸಿದ್ದರು. ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.