ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಆನೆ ದಾಳಿಗೆ ಸಿಲುಕಿ ವ್ಯಕ್ತಿ ಸಾವು

Published 4 ಮಾರ್ಚ್ 2024, 4:43 IST
Last Updated 4 ಮಾರ್ಚ್ 2024, 4:43 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿಗೆ ಸಮೀಪದ ನಿಶಾನೆ ಬೆಟ್ಟದ ತಪ್ಪಲಿನಲ್ಲಿ ಆನೆ ದಾಳಿಗೆ ಸಿಲುಕಿ ಅಪ್ಪಚ್ಚು (60) ಎಂಬುವವರು ಮೃತಪಟ್ಟಿದ್ದಾರೆ.

‘ಗಾಳಿಬೀಡು ಸಮೀಪದ ನಿಶಾನೆ ಬೆಟ್ಟದ ತಪ್ಪಲಿನಲ್ಲಿ ಅವಿವಾಹಿತರಾಗಿದ್ದ ಅಪ್ಪಚ್ಚು ಒಬ್ಬರೇ ವಾಸವಿದ್ದರು. ಅಕ್ಕಪಕ್ಕ ಯಾವುದೇ ಮನೆಗಳು ಇರಲಿಲ್ಲ. ಚಾರಣಕ್ಕೆ ಹೋಗಿದ್ದ ಪ್ರವಾಸಿಗರು ಇವರ ಶವವನ್ನು ಕಂಡು ಮಾಹಿತಿ ನೀಡಿದರು. ಶವದ ಅಕ್ಕಪಕ್ಕ ಇದ್ದ ಮರಗಳನ್ನು ಆನೆಯೊಂದು ಉರುಳಿಸಿದ್ದು, ಅದರ ಲದ್ದಿ ಹಾಗೂ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದರಿಂದ ಮೇಲ್ನೋಟಕ್ಕೆ ಅಪ್ಪಚ್ಚು ಅವರು ಆನೆ ದಾಳಿಗೆ ಸಿಲುಕಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT