ಇದೇ ಅರಮನೆಯಲ್ಲಿ ಹಲವು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಲವು ಕಚೇರಿಗಳು, ಶಾಸಕರ ಜನಸಂಪರ್ಕ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಮಂಗಳವಾರ ಮಧ್ಯಾಹ್ನ ಅಷ್ಟು ಜನದಟ್ಟಣೆ ಇರದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಹೆಂಚು ಹಾಗೂ ಚಾವಣಿಗೆ ಅಳವಡಿಸಿದ್ದ ಮರಮುಟ್ಟುಗಳು ಕುಸಿದು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ದೊಡ್ಡ ಶಬ್ದವಾದ ಕಾರಣ ಕಚೇರಿ ಸಿಬ್ಬಂದಿ ಹೊರಗೆ ಓಡಿಬಂದರು. ಪ್ರಕೃತಿ ವಿಕೋಪದ ಸಂದರ್ಭದಲ್ಲೂ ಅರಮನೆ, ಮಣ್ಣಿನ ಕೋಟೆಗೆ ಹಾನಿಯಾಗಿತ್ತು.