ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಅವರು ನೀಡಿರುವ ವರದಿಯಲ್ಲಿನ ಅಂಶದಂತೆ ಕಟ್ಟಡಗಳ ರಚನೆ ಸಂಬಂಧ ಅಸ್ಥಿರ ಪ್ರದೇಶದಲ್ಲಿ ಭೂಪರಿವರ್ತನೆಗೆ ಅವಕಾಶ ಇಲ್ಲ. ನದಿ, ಹಳ್ಳಗಳಿಂದ 10 ಮೀಟರ್ ದೂರದಲ್ಲಿ ಮನೆ ನಿರ್ಮಿಸಬೇಕು. ತೀವ್ರತರವಾದ ಇಳಿಜಾರು, ಕಣಿವೆ ಪ್ರದೇಶಗಳಲ್ಲಿ ಮನೆ ನಿರ್ಮಾಣ ಅತ್ಯಂತ ಅಪಾಯಕಾರಿ. ಅಲ್ಲಿ ಭೂಪರಿವರ್ತನೆ ಮಾಡಬಾರದು. 2018ರ ಮಳೆಗಾಲದಲ್ಲಿ ಅನಾಹುತವಾದ ಸ್ಥಳದಲ್ಲಿ ಮನೆ ನಿರ್ಮಾಣ ಅಪಾಯಕಾರಿ ಆಗಿದ್ದು, ಅಂತಹ ಸ್ಥಳವನ್ನು ಪರಿಗಣಿಸಬಾರದು. ಸರ್ಕಾರದಿಂದ ಈ ಆದೇಶದಿಂದ ಮನೆಯಿಲ್ಲದವರು ಸ್ವಂತ ಸೂರು ಹೊಂದಲು ಅನುಕೂಲ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.