<p><strong>ಮಡಿಕೇರಿ:</strong> ಮಳೆಹಾನಿ ಸಂತ್ರಸ್ತರಿಗೆ ಚೇರಂಡ ಕುಟುಂಬಸ್ಥರು, 15 ಮಂದಿ ಸಂತ್ರಸ್ತರಿಗೆ ₹ 1.50 ಲಕ್ಷ ನೆರವು ನೀಡಿದರು.</p>.<p>ನಗರದ ಫೋರ್ಟ್ ಮರ್ಕರ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿ ಸಂತ್ರಸ್ತ ಕುಟುಂಬಕ್ಕೆ ₹ 10 ಸಾವಿರದಂತೆ ಕುಟುಂಬದ ಹಿರಿಯರಾದ ಚೇರಂಡ ಉತ್ತಯ್ಯ ಚೆಕ್ ಹಸ್ತಾಂತರಿಸಿದರು.</p>.<p>ಪ್ರಕೃತಿ ವಿಕೋಪದಿಂದ ಸಾವು–ನೋವು ಸಂಭವಿಸಿದೆ. ವಿವಿಧ ಸಂಘ ಸಂಸ್ಥೆಗಳು ತಕ್ಷಣದಲ್ಲಿ ಸಂತ್ರಸ್ತರ ನೋವಿಗೆ ಸ್ಪಂದಿಸಿರುವುದು ಶ್ಲಾಘನೀಯ. ಸಂತ್ರಸ್ತರು ತಮಗೆ ದೊರೆತ ಸಹಾಯಧನವನ್ನು ಸದುಯೋಗಪಡಿಸಿಕೊಂಡು ನೋವನ್ನು ಮರೆತು ಹೊಸ ಜೀವನವನ್ನು ಆರಂಭಿಸಬೇಕು ಎಂದು ಕರೆ ನೀಡಿದರು.</p>.<p>ಪ್ರಮುಖರಾದ ಡಾ.ಸೂರ್ಯಮುದ್ದಪ್ಪ ಮಾತನಾಡಿ, ಸಂತ್ರಸ್ತರು ಸಂಕಷ್ಟ ಎದುರಾಗಿದೆ ಎಂಬ ಕಾರಣಕ್ಕಾಗಿ ಎದೆಗುಂದದೆ, ಧೈರ್ಯದಿಂದ ಮುನ್ನುಗ್ಗಬೇಕು. ಸಂಘ– ಸಂಸ್ಥೆಗಳು ನೀಡುವ ಸಹಕಾರದ ಜತೆಗೆ ತಮ್ಮ ಶಕ್ತಿ ಸಾಮರ್ಥ್ಯವನ್ನು ಬಳಸಿಕೊಂಡು ಮತ್ತೆ ಎಂದಿನಂತಾಗಬೇಕು ಎಂದರು.</p>.<p>ಪತ್ರಕರ್ತ ಮಹೇಶ್ ನಾಚಯ್ಯ ಮಾತನಾಡಿ, ಪ್ರಕೃತಿ ವಿಕೋಪದ ಸಂದರ್ಭ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿ ವಿವಿಧ ಭಾಗಗಳಿಂದ ಪರಿಹಾರ ಹರಿದು ಬಂದಿದ್ದರೂ ತಮಗೆ ಇನ್ನೂ ಪರಿಹಾರ ದೊರೆತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿರುವುದು ವಿಷಾದನೀಯ ಎಂದರು.</p>.<p>ಗಣೇಶ್ ಗಣಪತಿ, ಚೋಟು ಕಾರ್ಯಪ್ಪ, ಜಪ್ಪು ದೇವಯ್ಯ, ಶಿವಾಜಿ ಸೋಮಯ್ಯ, ಜಿಮ್ಮಿ ಅಚ್ಚಯ್ಯ, ದೇವಯ್ಯ, ಗಿರೀಶ್ ಪೂಣಚ್ಚ, ಸಂಪತ್, ಬೋಪಣ್ಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಮಳೆಹಾನಿ ಸಂತ್ರಸ್ತರಿಗೆ ಚೇರಂಡ ಕುಟುಂಬಸ್ಥರು, 15 ಮಂದಿ ಸಂತ್ರಸ್ತರಿಗೆ ₹ 1.50 ಲಕ್ಷ ನೆರವು ನೀಡಿದರು.</p>.<p>ನಗರದ ಫೋರ್ಟ್ ಮರ್ಕರ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿ ಸಂತ್ರಸ್ತ ಕುಟುಂಬಕ್ಕೆ ₹ 10 ಸಾವಿರದಂತೆ ಕುಟುಂಬದ ಹಿರಿಯರಾದ ಚೇರಂಡ ಉತ್ತಯ್ಯ ಚೆಕ್ ಹಸ್ತಾಂತರಿಸಿದರು.</p>.<p>ಪ್ರಕೃತಿ ವಿಕೋಪದಿಂದ ಸಾವು–ನೋವು ಸಂಭವಿಸಿದೆ. ವಿವಿಧ ಸಂಘ ಸಂಸ್ಥೆಗಳು ತಕ್ಷಣದಲ್ಲಿ ಸಂತ್ರಸ್ತರ ನೋವಿಗೆ ಸ್ಪಂದಿಸಿರುವುದು ಶ್ಲಾಘನೀಯ. ಸಂತ್ರಸ್ತರು ತಮಗೆ ದೊರೆತ ಸಹಾಯಧನವನ್ನು ಸದುಯೋಗಪಡಿಸಿಕೊಂಡು ನೋವನ್ನು ಮರೆತು ಹೊಸ ಜೀವನವನ್ನು ಆರಂಭಿಸಬೇಕು ಎಂದು ಕರೆ ನೀಡಿದರು.</p>.<p>ಪ್ರಮುಖರಾದ ಡಾ.ಸೂರ್ಯಮುದ್ದಪ್ಪ ಮಾತನಾಡಿ, ಸಂತ್ರಸ್ತರು ಸಂಕಷ್ಟ ಎದುರಾಗಿದೆ ಎಂಬ ಕಾರಣಕ್ಕಾಗಿ ಎದೆಗುಂದದೆ, ಧೈರ್ಯದಿಂದ ಮುನ್ನುಗ್ಗಬೇಕು. ಸಂಘ– ಸಂಸ್ಥೆಗಳು ನೀಡುವ ಸಹಕಾರದ ಜತೆಗೆ ತಮ್ಮ ಶಕ್ತಿ ಸಾಮರ್ಥ್ಯವನ್ನು ಬಳಸಿಕೊಂಡು ಮತ್ತೆ ಎಂದಿನಂತಾಗಬೇಕು ಎಂದರು.</p>.<p>ಪತ್ರಕರ್ತ ಮಹೇಶ್ ನಾಚಯ್ಯ ಮಾತನಾಡಿ, ಪ್ರಕೃತಿ ವಿಕೋಪದ ಸಂದರ್ಭ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿ ವಿವಿಧ ಭಾಗಗಳಿಂದ ಪರಿಹಾರ ಹರಿದು ಬಂದಿದ್ದರೂ ತಮಗೆ ಇನ್ನೂ ಪರಿಹಾರ ದೊರೆತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿರುವುದು ವಿಷಾದನೀಯ ಎಂದರು.</p>.<p>ಗಣೇಶ್ ಗಣಪತಿ, ಚೋಟು ಕಾರ್ಯಪ್ಪ, ಜಪ್ಪು ದೇವಯ್ಯ, ಶಿವಾಜಿ ಸೋಮಯ್ಯ, ಜಿಮ್ಮಿ ಅಚ್ಚಯ್ಯ, ದೇವಯ್ಯ, ಗಿರೀಶ್ ಪೂಣಚ್ಚ, ಸಂಪತ್, ಬೋಪಣ್ಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>