ನ.13ರಂದು ಎಸ್.ಎನ್.ರಘು, ಎಚ್.ಆರ್.ಹರೀಶ್ ಕುಮಾರ್ ಅವರು ಮುಸ್ಲಿಂ ಮಹಿಳೆಯರು ಧರಣಿ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ. ಹಿಂದೂ ಸಂಘಟನೆಗಳ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಬಂದಿದೆ ಎಂದು ಆಪಾದಿಸಿ, ಶನಿವಾರಸಂತೆ ಬಂದ್ಗೆ ಕರೆ ನೀಡಿದ್ದರು. ಇಬ್ಬರ ಮಾತಿನಿಂದ ಪ್ರಚೋದನೆಗೆ ಒಳಗಾದ ಗಿರೀಶ್ ತನ್ನ ಮೊಬೈಲ್ನಿಂದ ಧರಣಿ ವಿಡಿಯೊವನ್ನು ವಿವಿಧ ವಾಟ್ಸ್ಆ್ಯಪ್ ಗ್ರೂಪ್ಗಳಿಗೆ ಷೇರ್ ಮಾಡಿ, ಮುಸ್ಲಿಂ ಮಹಿಳೆಯರು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ. ದೇಶ ವಿರೋಧಿಗಳನ್ನು ಬಂಧಿಸಬೇಕು. ಅವರ ವಿರುದ್ಧ ಕೇಸ್ ದಾಖಲಿಸಬೇಕು’ ಎಂದು ಬರೆದಿದ್ದರು. ಅದು ಎಲ್ಲೆಡೆ ಹರಿದಾಡಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.