ಈ ಕುರಿತು ‘ಪ್ರಜಾವಾಣಿ’ ಮಕ್ಕಳ ದಿನಾಚರಣೆಯ ಪ್ರಯುಕ್ತ ನವೆಂಬರ್ 13ರಂದು ‘ಮಕ್ಕಳಿಗಾಗಿ ಒಂದಿಷ್ಟು ಜಾಗ ಕೊಡಿ...!’ ಎಂಬ ಶೀರ್ಷಿಕೆಯಡಿ ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ವೇಳೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದ ಸಂಸ್ಥೆಯ ಕಾರ್ಯಾಧ್ಯಕ್ಷ ರವೀಂದ್ರ ರೈ ಉದ್ಯಾನವನ್ನು ಆದಷ್ಟು ಶೀಘ್ರ ಸ್ವಚ್ಛಗೊಳಿಸಿ, ಮತ್ತೆ ಮಕ್ಕಳ ಬಳಕೆಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು.