ಕಳೆದ ಅನೇಕ ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳು ಆಟವಾಡಿದ ಮೈದಾನ ಈಗ ಮಣ್ಣಿನ ರಾಶಿ ಹಾಕುವ ಪ್ರದೇಶವಾಗಿ ಮಾರ್ಪಟ್ಟಿರುವುದು ದುರಂತ. ಇದೇ ಮೈದಾನದಲ್ಲಿ ಗಾಂಧಿ ಮಂಟಪ ಮತ್ತು ರಂಗ ಮಂದಿರವೂ ಇದ್ದು, ಯಾವುದಕ್ಕೂ ಗೌರವವಿಲ್ಲದಾಗಿದೆ. ನಗರದಲ್ಲಿ ಮೈದಾನದ ಕೊರತೆ ಕಾಡುತ್ತಿದ್ದು ಇದರ ನಡುವೆಯೇ ಇರುವ ಮೈದಾನವನ್ನು ಕೂಡ ಹಾಳುಗೆಡವಲಾಗುತ್ತಿದೆ. ಗಾಂಧಿ ಮಂಟಪದ ಬಳಿ ಅವೈಜ್ಞಾನಿಕ ರೂಪದಲ್ಲಿ ಬೇಲಿ ನಿರ್ಮಿಸಿ, ಮೈದಾನದ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ. ಅಲ್ಲದೇ ಈ ಬೇಲಿ ಹಾಕುವ ಮಂಟಪದ ಅಂದಕ್ಕೆ ಧಕ್ಕೆ ತರಲಾಗಿದೆ ಎಂದು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.