ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಸುರಿಯುವ ಭಾರಿ ಮಳೆಯನ್ನು ತಡೆಯುವ ರೀತಿಯಲ್ಲಿ ಸರ್ವಋತು ರಸ್ತೆ ನಿರ್ಮಾಣವಾಗಬೇಕು. ಬೆಟ್ಟದ ಮೇಲೆ ನೀರು ಇಂಗದಂತೆ ತಡೆಯಬೇಕು, ತಡೆಗೋಡೆ ನಿರ್ಮಿಸುವ ವೇಳೆ ಗಟ್ಟಿಯಾದ ತಳಪಾಯ ಹಾಕಬೇಕು, ಆಳಕ್ಕೆ ಬೇರು ಇಳಿಯುವ ಮರ– ಗಿಡ ಬೆಳೆಸಬೇಕು, ಬೆಟ್ಟದಲ್ಲಿ ಬಿರುಕು ಕಾಣಿಸಿದರೆ ಅದನ್ನು ಮುಚ್ಚಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.