ವಿರಾಜಪೇಟೆ:ಸಮೀಪದ ಅರಮೇರಿ ಗ್ರಾಮದಲ್ಲಿ ಸೋಮವಾರ ನಿಯಂತ್ರಣ ತಪ್ಪಿ ಸ್ಕೂಟರ್ ಹಳ್ಳಕ್ಕೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಾಕತ್ತೂರು ಸಮೀಪದ ಹುಲಿತಾಳ ಗ್ರಾಮದ ನಿವಾಸಿ ಓಡಿಯಂಡ ಚಂಗಪ್ಪ (60) ಮೃತರು.
ಸೋಮವಾರ ಬೆಳಿಗ್ಗೆ ಚಂಗಪ್ಪ ಅವರು ವಿರಾಜಪೇಟೆ ಸಮೀಪದ ಕಂಡಂಗಾಲ ಗ್ರಾಮದಲ್ಲಿರುವ ತಮ್ಮ ಮಗಳ ಮನೆಗೆ ತೆರಳುವಾಗ ಮಡಿಕೇರಿ-ವಿರಾಜಪೇಟೆ ಮುಖ್ಯರಸ್ತೆ ಬದಿಯ ಹಳ್ಳಕ್ಕೆ ಸ್ಕೂಟರ್ ಬಿದ್ದಿದೆ. ಸ್ಥಳದಲ್ಲೇ ಚಂಗಪ್ಪ ಅವರು ಮೃತಪಟ್ಟಿದ್ದಾರೆ.
ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಮೃತದೇಹ ಒಪ್ಪಿಸಲಾಗಿದೆ.