<p><strong>ಸುಂಟಿಕೊಪ್ಪ:</strong> ಗದ್ದೆಗಳು ಉಳಿಯಬೇಕಾದರೆ ಊರವರು ಒಂದಾಗಬೇಕು. ಆಗ ಇಂತಹ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗಲಿದೆ ಎಂದು ಶಾಸಕ ಡಾ.ಮಂತರ್ಗೌಡ ಹೇಳಿದರು.</p>.<p>ಸಮೀಪದ ಗದ್ದೆಹಳ್ಳದ ವೈ.ಯಂ.ಕರುಂಬಯ್ಯ ಅವರ ಗದ್ದೆಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾದ ‘ಗದ್ದೆಹಳ್ಳಲಿ ಗದ್ದೆ ಆಟ’ದ ಸಾಂಪ್ರಾದಾಯಿಕ ಕ್ರೀಡಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಇಂದಿನ ಯುವಜನಾಂಗ ಗದ್ದೆನಾಟಿ ಮಾಡುವ ಬಗ್ಗೆ ಕಾಳಜಿ ಇಲ್ಲದಿದ್ದರೂ ಹಿರಿಯರ ಮುಖಾಂತರ ಇಂತಹ ಕೆಸರು ಗದ್ದೆಯಲ್ಲಿ ಆಟವಾಡಲು ಅವಕಾಶ ಸಿಕ್ಕಿರುವುದು ಎಲ್ಲರ ಪುಣ್ಯ. ಕ್ರೀಡಾಕೂಟದಿಂದ ಜಾತಿ, ಧರ್ಮ ದೂರವಾಗಿ ಬಾಂಧವ್ಯ ಮೂಡಲು ಸಹಕಾರಿಯಾಗಲಿದೆ. ಯಾವುದೇ ಮೈದಾನದ ಅವಶ್ಯಕತೆ ಇಲ್ಲದೇ ಗದ್ದೆಯೇ ಗ್ರಾಮೀಣ ಕ್ರೀಡೆಗೆ ಮೈದಾನವಾಗಿದೆ ಎಂದರು.</p>.<p>ಬಿಜೆಪಿ ಮುಖಂಡ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ಕೆಸರು ಗದ್ದೆ ಕ್ರೀಡಾಕೂಟ ಎಂಬುದು ಪ್ರಕೃತಿಯ ಮಣ್ಣು ಚಿಕಿತ್ಸೆಯಾಗಿದ್ದು, ನಮ್ಮ ಹಿರಿಯರು ಆಯಾ ಕಾಲಘಟ್ಟದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತಹ ಕ್ರೀಡೆಯ ಮೂಲಕ ಅಡಿಪಾಯ ಹಾಕಿಕೊಟ್ಟಿದ್ದಾರೆ’ ಎಂದು ಹೇಳಿದರು.</p>.<p>ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಜಾತಿ, ಮತ, ಜನಾಂಗಗಳ ನಡುವೆ ವಿವಿಧತೆಯಲ್ಲಿ ಏಕತೆಯನ್ನು ತರಲು ಕ್ರೀಡಾಕೂಟ ಪ್ರಬಲವಾದ ಸಾಧನ. ಇಂತಹ ಕ್ರೀಡಾಕೂಟವನ್ನು ಮುಂದುವರೆಸಿ ಹೋಗುವುದರ ಮೂಲಕ ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸುವಂತಾಗಬೇಕು ಎಂದರು.</p>.<p>ಭಾರತೀಯ ಮಹಿಳಾ ಬಾಸ್ಕೆಟ್ಬಾಲ್ ತಂಡದ ಆಟಗಾರ್ತಿ, ಏಕಲವ್ಯ ಪ್ರಶಸ್ತಿ ವಿಜೇತೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ಪರಿಗಣಿತ ನವನೀತಾ ಕುಯಮುಡಿ ಅವರನ್ನು ಗೌರವಿಸಲಾಯಿತು.</p>.<p>ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಉಪಾಧ್ಯಕ್ಷೆ ಶಿವಮ್ಮ, ಸದಸ್ಯೆ ಮಂಜುಳಾ, ಆಯೋಜಕ ತಂಡದ ನಿಡ್ಯಮನೆ ತೃಶಾಲ್ ಸನ್ಮಾನ್, ಪಟ್ಟಡಮನೆ ಹರ್ಷ, ಬೈಮನ ಚರಣ್, ಮೀನಾ ಚೇತನ್, ಎ.ಬಿ.ಸುಮನಾ, ಭಾರ್ಗವ ಭಾಗವಹಿಸಿದ್ದರು.</p>.<p><strong>ಸ್ಪರ್ಧೆಯ ವಿಜೇತರು:</strong></p>.<p><strong>ಹಗ್ಗಜಗ್ಗಾಟ (ಮಹಿಳೆಯರು):</strong> ಗದೆಹಳ್ಳ ಮಹಿಳೆ ತಂಡ (ಪ್ರ), ಬಾಳೇಕಾಡು ತಂಡ (ದ್ವಿ), ಹಗ್ಗಜಗ್ಗಾಟ <strong>(ಪುರುಷರು):</strong> ಕಾರ್ಗಿಲ್ ತಂಡ (ಪ್ರ), ಡಾಲ್ಫಿನ್ ತಂಡ (ದ್ವಿ).</p>.<p><strong>ಓಟದ ಸ್ಪರ್ಧೆ:</strong> ಬಾಲಕಿಯರ ಮತ್ತು ಬಾಲಕರ ವಿಭಾಗ (12-17): ಜಗನ್, ಜಾನ್ವಿಕಾ (ಪ್ರ), ವೈ.ಸಿ.ಹೇಮಂತ್, ಲಿಪಿಕಾ (ದ್ವಿ), ವಿನಯ, ಸುಕನ್ಯಾ (ತೃ).</p>.<p><strong>ಬಾಲಕಿಯರ ವಿಭಾಗ (6-11):</strong> ಶಾಮನಿ, ಕೋಶಲ್ ನಿಡ್ಯಮಲೆ (ದ್ವಿ), ಶನಿಫ್ (ತೃ)</p>.<p><strong>ಪುರುಷರು (18-24):</strong> ಪ್ರಸಾದ್ (ಪ್ರ),ಅರ್ಪಿತ್ (ದ್ವಿ) ರಝಿಕ್ (ತೃ).</p>.<p><strong>ಮಹಿಳೆಯರು, ಪುರುಷರು (25 ತುಂಬಿದವರು):</strong> ಕರಿಯಪ್ಪ, ಸ್ಮಿತಾ (ಪ್ರ), ಸನ್ಮಾನ್, ನೋಬಿ ರನ್ರಥಾ(ದ್ವಿ), ಮನಮೋಹನ್, ತಾರಾ (ತೃ).</p>.<p><strong>ಮಹಿಳೆಯರ ನಡೆಯುವ ಸ್ಪರ್ಧೆ (50):</strong> ಮಂಜುಳಾ (ಪ್ರ), ರೀಟಾ (ದ್ವಿ), ಪಾರ್ವತಿ(ತೃ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಂಟಿಕೊಪ್ಪ:</strong> ಗದ್ದೆಗಳು ಉಳಿಯಬೇಕಾದರೆ ಊರವರು ಒಂದಾಗಬೇಕು. ಆಗ ಇಂತಹ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗಲಿದೆ ಎಂದು ಶಾಸಕ ಡಾ.ಮಂತರ್ಗೌಡ ಹೇಳಿದರು.</p>.<p>ಸಮೀಪದ ಗದ್ದೆಹಳ್ಳದ ವೈ.ಯಂ.ಕರುಂಬಯ್ಯ ಅವರ ಗದ್ದೆಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾದ ‘ಗದ್ದೆಹಳ್ಳಲಿ ಗದ್ದೆ ಆಟ’ದ ಸಾಂಪ್ರಾದಾಯಿಕ ಕ್ರೀಡಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಇಂದಿನ ಯುವಜನಾಂಗ ಗದ್ದೆನಾಟಿ ಮಾಡುವ ಬಗ್ಗೆ ಕಾಳಜಿ ಇಲ್ಲದಿದ್ದರೂ ಹಿರಿಯರ ಮುಖಾಂತರ ಇಂತಹ ಕೆಸರು ಗದ್ದೆಯಲ್ಲಿ ಆಟವಾಡಲು ಅವಕಾಶ ಸಿಕ್ಕಿರುವುದು ಎಲ್ಲರ ಪುಣ್ಯ. ಕ್ರೀಡಾಕೂಟದಿಂದ ಜಾತಿ, ಧರ್ಮ ದೂರವಾಗಿ ಬಾಂಧವ್ಯ ಮೂಡಲು ಸಹಕಾರಿಯಾಗಲಿದೆ. ಯಾವುದೇ ಮೈದಾನದ ಅವಶ್ಯಕತೆ ಇಲ್ಲದೇ ಗದ್ದೆಯೇ ಗ್ರಾಮೀಣ ಕ್ರೀಡೆಗೆ ಮೈದಾನವಾಗಿದೆ ಎಂದರು.</p>.<p>ಬಿಜೆಪಿ ಮುಖಂಡ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ಕೆಸರು ಗದ್ದೆ ಕ್ರೀಡಾಕೂಟ ಎಂಬುದು ಪ್ರಕೃತಿಯ ಮಣ್ಣು ಚಿಕಿತ್ಸೆಯಾಗಿದ್ದು, ನಮ್ಮ ಹಿರಿಯರು ಆಯಾ ಕಾಲಘಟ್ಟದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತಹ ಕ್ರೀಡೆಯ ಮೂಲಕ ಅಡಿಪಾಯ ಹಾಕಿಕೊಟ್ಟಿದ್ದಾರೆ’ ಎಂದು ಹೇಳಿದರು.</p>.<p>ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಜಾತಿ, ಮತ, ಜನಾಂಗಗಳ ನಡುವೆ ವಿವಿಧತೆಯಲ್ಲಿ ಏಕತೆಯನ್ನು ತರಲು ಕ್ರೀಡಾಕೂಟ ಪ್ರಬಲವಾದ ಸಾಧನ. ಇಂತಹ ಕ್ರೀಡಾಕೂಟವನ್ನು ಮುಂದುವರೆಸಿ ಹೋಗುವುದರ ಮೂಲಕ ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸುವಂತಾಗಬೇಕು ಎಂದರು.</p>.<p>ಭಾರತೀಯ ಮಹಿಳಾ ಬಾಸ್ಕೆಟ್ಬಾಲ್ ತಂಡದ ಆಟಗಾರ್ತಿ, ಏಕಲವ್ಯ ಪ್ರಶಸ್ತಿ ವಿಜೇತೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ಪರಿಗಣಿತ ನವನೀತಾ ಕುಯಮುಡಿ ಅವರನ್ನು ಗೌರವಿಸಲಾಯಿತು.</p>.<p>ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಉಪಾಧ್ಯಕ್ಷೆ ಶಿವಮ್ಮ, ಸದಸ್ಯೆ ಮಂಜುಳಾ, ಆಯೋಜಕ ತಂಡದ ನಿಡ್ಯಮನೆ ತೃಶಾಲ್ ಸನ್ಮಾನ್, ಪಟ್ಟಡಮನೆ ಹರ್ಷ, ಬೈಮನ ಚರಣ್, ಮೀನಾ ಚೇತನ್, ಎ.ಬಿ.ಸುಮನಾ, ಭಾರ್ಗವ ಭಾಗವಹಿಸಿದ್ದರು.</p>.<p><strong>ಸ್ಪರ್ಧೆಯ ವಿಜೇತರು:</strong></p>.<p><strong>ಹಗ್ಗಜಗ್ಗಾಟ (ಮಹಿಳೆಯರು):</strong> ಗದೆಹಳ್ಳ ಮಹಿಳೆ ತಂಡ (ಪ್ರ), ಬಾಳೇಕಾಡು ತಂಡ (ದ್ವಿ), ಹಗ್ಗಜಗ್ಗಾಟ <strong>(ಪುರುಷರು):</strong> ಕಾರ್ಗಿಲ್ ತಂಡ (ಪ್ರ), ಡಾಲ್ಫಿನ್ ತಂಡ (ದ್ವಿ).</p>.<p><strong>ಓಟದ ಸ್ಪರ್ಧೆ:</strong> ಬಾಲಕಿಯರ ಮತ್ತು ಬಾಲಕರ ವಿಭಾಗ (12-17): ಜಗನ್, ಜಾನ್ವಿಕಾ (ಪ್ರ), ವೈ.ಸಿ.ಹೇಮಂತ್, ಲಿಪಿಕಾ (ದ್ವಿ), ವಿನಯ, ಸುಕನ್ಯಾ (ತೃ).</p>.<p><strong>ಬಾಲಕಿಯರ ವಿಭಾಗ (6-11):</strong> ಶಾಮನಿ, ಕೋಶಲ್ ನಿಡ್ಯಮಲೆ (ದ್ವಿ), ಶನಿಫ್ (ತೃ)</p>.<p><strong>ಪುರುಷರು (18-24):</strong> ಪ್ರಸಾದ್ (ಪ್ರ),ಅರ್ಪಿತ್ (ದ್ವಿ) ರಝಿಕ್ (ತೃ).</p>.<p><strong>ಮಹಿಳೆಯರು, ಪುರುಷರು (25 ತುಂಬಿದವರು):</strong> ಕರಿಯಪ್ಪ, ಸ್ಮಿತಾ (ಪ್ರ), ಸನ್ಮಾನ್, ನೋಬಿ ರನ್ರಥಾ(ದ್ವಿ), ಮನಮೋಹನ್, ತಾರಾ (ತೃ).</p>.<p><strong>ಮಹಿಳೆಯರ ನಡೆಯುವ ಸ್ಪರ್ಧೆ (50):</strong> ಮಂಜುಳಾ (ಪ್ರ), ರೀಟಾ (ದ್ವಿ), ಪಾರ್ವತಿ(ತೃ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>