ಹೋಬಳಿಯ ಉಂಬಳಿ ಬೆಟ್ಟದಿಂದ ಕಟ್ಟೆಪುರ ಅರಣ್ಯಕ್ಕೆ ಬಂದು ನೆಲೆಸುವ ಸಲಗ ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಕೋಣಿಗನಹಳ್ಳಿ, ಬಸವನಾರೆ, ಮನುಗನಹಳ್ಳಿ, ನಿಲುವಾಗಿಲು-ಬೆಸೂರು ಗ್ರಾಮಗಳ ರೈತರ ಗದ್ದೆ, ತೋಟಗಳಿಗೆ ಲಗ್ಗೆ ಇಟ್ಟು ಬೆಳೆಗಳನ್ನು ತಿಂದು ಹಾನಿಪಡಿಸುತ್ತಿದೆ. ಬಾಲ ತ್ರಿಪುರಸುಂದರಿ ಅಮ್ಮನವರ ದೇವಾಲಯ ಆವರಣದಲ್ಲಿ ಸಂಚರಿಸುತ್ತಿದ್ದರೂ ಅಲ್ಲಿ ಬರುವ ಭಕ್ತ ಜನರಿಗೆ ತೊಂದರೆ ಕೊಡುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.