ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸೆಮಣೆ ಏರಿದ ಹಾಕಿಪಟು

Last Updated 14 ಡಿಸೆಂಬರ್ 2020, 14:47 IST
ಅಕ್ಷರ ಗಾತ್ರ

ವಿರಾಜಪೇಟೆ: ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಭಾರತ ತಂಡವನ್ನು ಪ್ರತಿನಿಧಿಸಿದ್ದ ಹಾಕಿಪಟು ತಿಮ್ಮಣ್ಣ ಹಾಗೂ ಸಂಸ್ಕೃತಿ ಅವರ ವಿವಾಹ ಸಮೀಪದ ಅನ್ನತ್ತಿಯ ಕೊಡವ ಸಮಾಜದಲ್ಲಿ ಭಾನುವಾರ ನಡೆಯಿತು.

ತಿಮ್ಮಣ್ಣ ಸಮೀಪದ ಮಗ್ಗುಲ ಗ್ರಾಮದ ಪುಲಿಯಂಡ ಲೋಕೇಶ್ ಹಾಗೂ ಲೀಲಾವತಿ ದಂಪತಿ ಪುತ್ರ. ಸಂಸ್ಕೃತಿ ಅವರು ಸಮೀಪದ ಕದನೂರು ಗ್ರಾಮದ ಕುಂಬೇರ ಮನುಕುಮಾರ್ ಹಾಗೂ ಪುಷ್ಪ ದಂಪತಿ ಪುತ್ರಿ.

ವಿವಾಹ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಹಾಕಿ ಆಟಗಾರರಾದ ವಿ.ಆರ್. ರಘುನಾಥ್, ಮೇಕೇರಿರ ನಿತಿನ್, ಚೇಂದಂಡ ನಿಖಿನ್, ಬಾಳೆಯಡ ಪೂಣಚ್ಚ, ಸೋಮೆಯಂಡ ಅಪ್ಪಚ್ಚು, ಕರಿನೆರವಂಡ ಸೋಮಣ್ಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT