<p><strong>ಮಡಿಕೇರಿ</strong>: ‘ಇಂದು ಪತ್ರಕರ್ತರು ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಹಾಗೂ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ’ ಎಂದು ಲೇಖಕ ಹಾಗೂ ಹೋರಾಟಗಾರ ಸಿದ್ದನಗೌಡ ಪಾಟೀಲ ಕರೆ ನೀಡಿದರು.</p>.<p>ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ‘ಕೊಡಗು ಪತ್ರಿಕಾ ಭವನದ 21ನೇ ವಾರ್ಷಿಕೋತ್ಸವ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಈಗ ಮಾಧ್ಯಮಗಳು ಕಾರ್ಪೋ ರೇಟ್ ಉದ್ಯಮಿಗಳ ವಶವಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದ ಅವರು, ‘ಪತ್ರಕರ್ತರು ದಿನಗೂಲಿಗಳಾಗಿ ಕಾರ್ಯ ನಿರ್ವಹಿಸಬೇಕಿದೆ. ಇದರ ಮಧ್ಯೆಯೂ ಅವರು ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸಬೇಕಿದೆ’ ಎಂದರು.</p>.<p>‘ಕೋಮು ಸಂಘರ್ಷದ ಸಮಯ ದಲ್ಲಿ ಮತ್ತೊಂದು ಮನೆಗೆ ಸಂಘರ್ಷ ಹರಡದ ಹಾಗೆ ಎಚ್ಚರಿಕೆಯಿಂದ ಸುದ್ದಿ ಬರೆಯಬೇಕು. ‘ನಮ್ಮಲ್ಲೇ ಮೊದಲು’ ಎಂಬ ಧಾವಂತದಲ್ಲಿ ಅಮಾನವೀಯ ವಾಗಿ ವರ್ತಿಸಬಾರದು’ ಎಂದು ಕಿವಿಮಾತು ಹೇಳಿದರು.</p>.<p>‘ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ₹ 10 ಲಕ್ಷ ಕೋಟಿ ಬಂಡವಾಳ ಹರಿದು ಬಂತು ಎಂದು ವರ್ಣರಂಜಿತವಾಗಿ ವರದಿ ಮಾಡುವ ವೇಳೆ ಸರ್ಕಾರ ಉದ್ಯಮಿಗಳ ₹ 10 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿತು ಎಂಬ ಅಂಶವನ್ನೂ ಗಣನೆಗೆ ತೆಗೆದುಕೊಳ್ಳಬೇಕಿತ್ತು. ದೊಡ್ಡ ಕಾರಿಡಾರ್ ನಿರ್ಮಾಣ ವೇಳೆ ಆಪೋಶನ ಗೊಳ್ಳುವ ಕೃಷಿಭೂಮಿ, ಜಲಮೂಲಗಳ ವರದಿಯೂ ಇರಬೇಕು’ ಎಂದರು.</p>.<p>‘ಯಾವುದೇ ತಾಲ್ಲೂಕುಗಳ 20 ಕಿ.ಮೀ ವ್ಯಾಪ್ತಿಯಲ್ಲಿರುವ ಭೂಮಿ ಇಂದು ರೈತರ ಬಳಿ ಇಲ್ಲ. ಕೃಷಿಯಿಂದ ಜಿಡಿಪಿಗೆ ಬರುತ್ತಿರುವ ವರಮಾನ ಕುಸಿಯುತ್ತಿದೆ. ಇದಕ್ಕಾಗಿ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆದಾರರ ಪ್ರವೇಶಕ್ಕೆ ಅವಕಾಶ ನೀಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಪತ್ರಿಕೋದ್ಯಮ ಎನ್ನುವುದಕ್ಕಿಂತ ಪತ್ರಿಕಾ ರಂಗ ಎನ್ನುವುದು ಸೂಕ್ತ. ಪತ್ರಿಕಾ ಕ್ಷೇತ್ರವು ಯಾವತ್ತೂ ಜನ ಸಮುದಾಯಕ್ಕೆ ಉತ್ತರಾಯಿತ್ವವನ್ನು ಹೊಂದಿರಬೇಕು’ ಎಂದು ಹೇಳಿದರು.</p>.<p>ಕೌಸರ್ ರಚಿಸಿದ ಪತ್ರಿಕಾಭವನ ಮ್ಯಾನೆಜಿಂಗ್ ಟ್ರಸ್ಟಿಯಾಗಿದ್ದ ದಿವಂಗತ ಮನುಶೆಣೈ ಅವರ ಡಿಜಿಟಲ್ ಕಲಾಕೃತಿಯನ್ನು ಪತ್ರಿಕಾಭವನ ಟ್ರಸ್ಟ್ಗೆ ಹಸ್ತಾಂತರಿಸಲಾಯಿತು. ಮುನುಶೆಣೈ ನಿಧನಕ್ಕೆ ಸಂತಾಪ ಸೂಚಿಸಲಾಯಿತು.</p>.<p>ಟ್ರಸ್ಟ್ನ ಸ್ಥಾಪಕ ವ್ಯವಸ್ಥಾಪನಾ ಟ್ರಸ್ಟಿ ಟಿ.ಪಿ.ರಮೇಶ್, ಪತ್ರಕರ್ತ ಕೆ.ವಿ.ಪರಮೇಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್, ಪ್ರಧಾನ ಕಾರ್ಯದರ್ಶಿ ಉಜ್ವಲ್ರಂಜಿತ್, ಟ್ರಸ್ಟ್ ಖಜಾಂಚಿ ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಟ್ರಸ್ಟಿ ಎಚ್.ಟಿ.ಅನಿಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ‘ಇಂದು ಪತ್ರಕರ್ತರು ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಹಾಗೂ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ’ ಎಂದು ಲೇಖಕ ಹಾಗೂ ಹೋರಾಟಗಾರ ಸಿದ್ದನಗೌಡ ಪಾಟೀಲ ಕರೆ ನೀಡಿದರು.</p>.<p>ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ‘ಕೊಡಗು ಪತ್ರಿಕಾ ಭವನದ 21ನೇ ವಾರ್ಷಿಕೋತ್ಸವ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಈಗ ಮಾಧ್ಯಮಗಳು ಕಾರ್ಪೋ ರೇಟ್ ಉದ್ಯಮಿಗಳ ವಶವಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದ ಅವರು, ‘ಪತ್ರಕರ್ತರು ದಿನಗೂಲಿಗಳಾಗಿ ಕಾರ್ಯ ನಿರ್ವಹಿಸಬೇಕಿದೆ. ಇದರ ಮಧ್ಯೆಯೂ ಅವರು ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸಬೇಕಿದೆ’ ಎಂದರು.</p>.<p>‘ಕೋಮು ಸಂಘರ್ಷದ ಸಮಯ ದಲ್ಲಿ ಮತ್ತೊಂದು ಮನೆಗೆ ಸಂಘರ್ಷ ಹರಡದ ಹಾಗೆ ಎಚ್ಚರಿಕೆಯಿಂದ ಸುದ್ದಿ ಬರೆಯಬೇಕು. ‘ನಮ್ಮಲ್ಲೇ ಮೊದಲು’ ಎಂಬ ಧಾವಂತದಲ್ಲಿ ಅಮಾನವೀಯ ವಾಗಿ ವರ್ತಿಸಬಾರದು’ ಎಂದು ಕಿವಿಮಾತು ಹೇಳಿದರು.</p>.<p>‘ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ₹ 10 ಲಕ್ಷ ಕೋಟಿ ಬಂಡವಾಳ ಹರಿದು ಬಂತು ಎಂದು ವರ್ಣರಂಜಿತವಾಗಿ ವರದಿ ಮಾಡುವ ವೇಳೆ ಸರ್ಕಾರ ಉದ್ಯಮಿಗಳ ₹ 10 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿತು ಎಂಬ ಅಂಶವನ್ನೂ ಗಣನೆಗೆ ತೆಗೆದುಕೊಳ್ಳಬೇಕಿತ್ತು. ದೊಡ್ಡ ಕಾರಿಡಾರ್ ನಿರ್ಮಾಣ ವೇಳೆ ಆಪೋಶನ ಗೊಳ್ಳುವ ಕೃಷಿಭೂಮಿ, ಜಲಮೂಲಗಳ ವರದಿಯೂ ಇರಬೇಕು’ ಎಂದರು.</p>.<p>‘ಯಾವುದೇ ತಾಲ್ಲೂಕುಗಳ 20 ಕಿ.ಮೀ ವ್ಯಾಪ್ತಿಯಲ್ಲಿರುವ ಭೂಮಿ ಇಂದು ರೈತರ ಬಳಿ ಇಲ್ಲ. ಕೃಷಿಯಿಂದ ಜಿಡಿಪಿಗೆ ಬರುತ್ತಿರುವ ವರಮಾನ ಕುಸಿಯುತ್ತಿದೆ. ಇದಕ್ಕಾಗಿ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆದಾರರ ಪ್ರವೇಶಕ್ಕೆ ಅವಕಾಶ ನೀಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಪತ್ರಿಕೋದ್ಯಮ ಎನ್ನುವುದಕ್ಕಿಂತ ಪತ್ರಿಕಾ ರಂಗ ಎನ್ನುವುದು ಸೂಕ್ತ. ಪತ್ರಿಕಾ ಕ್ಷೇತ್ರವು ಯಾವತ್ತೂ ಜನ ಸಮುದಾಯಕ್ಕೆ ಉತ್ತರಾಯಿತ್ವವನ್ನು ಹೊಂದಿರಬೇಕು’ ಎಂದು ಹೇಳಿದರು.</p>.<p>ಕೌಸರ್ ರಚಿಸಿದ ಪತ್ರಿಕಾಭವನ ಮ್ಯಾನೆಜಿಂಗ್ ಟ್ರಸ್ಟಿಯಾಗಿದ್ದ ದಿವಂಗತ ಮನುಶೆಣೈ ಅವರ ಡಿಜಿಟಲ್ ಕಲಾಕೃತಿಯನ್ನು ಪತ್ರಿಕಾಭವನ ಟ್ರಸ್ಟ್ಗೆ ಹಸ್ತಾಂತರಿಸಲಾಯಿತು. ಮುನುಶೆಣೈ ನಿಧನಕ್ಕೆ ಸಂತಾಪ ಸೂಚಿಸಲಾಯಿತು.</p>.<p>ಟ್ರಸ್ಟ್ನ ಸ್ಥಾಪಕ ವ್ಯವಸ್ಥಾಪನಾ ಟ್ರಸ್ಟಿ ಟಿ.ಪಿ.ರಮೇಶ್, ಪತ್ರಕರ್ತ ಕೆ.ವಿ.ಪರಮೇಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್, ಪ್ರಧಾನ ಕಾರ್ಯದರ್ಶಿ ಉಜ್ವಲ್ರಂಜಿತ್, ಟ್ರಸ್ಟ್ ಖಜಾಂಚಿ ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಟ್ರಸ್ಟಿ ಎಚ್.ಟಿ.ಅನಿಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>