ಗೋಣಿಕೊಪ್ಪಲು: ಓದಿದ್ದು ನೆನಪಿನಲ್ಲಿ ಉಳಿಯುತ್ತಿಲ್ಲ ಎಂಬ ಆತಂಕದಿಂದ ದ್ವಿತೀಯ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಅರುವತ್ತೊಕ್ಕಲುವಿನಲ್ಲಿ ಶನಿವಾರ ಜರುಗಿದೆ. ದರ್ಶಿನಿ (17) ಮೃತ ಯುವತಿ.
ಇವರು ಕಾವೇರಿ ಕಾಲೇಜಿನಲ್ಲಿ ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮನೆಯಲ್ಲಿ ಚೂಡಿದಾರ್ ವೇಲ್ ಬಳಸಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. 10ನೇ ತರಗತಿಯಲ್ಲಿ 472 ಅಂಕ ಪಡೆದಿದ್ದರು.
ಈಚೆಗೆ ದ್ವಿತೀಯ ಪಿಯು ಪೂರ್ವಸಿದ್ಧತಾ ಪರೀಕ್ಷೆ ಮುಗಿಸಿದ್ದರು. ಕೃತ್ಯಕ್ಕೆ ಮುನ್ನ ‘ನನ್ನ ಸಾವಿಗೆ ನಾನೆ ಕಾರಣ. ಓದಿದ್ದು ನೆನಪಿನಲ್ಲಿ ಉಳಿಯದ ಕಾರಣ ಬೇಸರದಿಂದ ನೇಣು ಬಿಗಿದುಕೊಳ್ಳುತ್ತಿದ್ದೇನೆ' ಎಂದು ಪತ್ರ ಬರೆದಿಟ್ಟಿದ್ದಾರೆ.
ಇವರು, ಅರವತ್ತೊಕ್ಕಲು ನಿವಾಸಿ ಶ್ರೀನಿವಾಸ್ ಪುತ್ರ. ಸಬ್ ಇನ್ಸ್ಪೆಕ್ಟರ್ ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ.