ಅರವತ್ತೋಕ್ಲು ಗ್ರಾಮದ ನಿವಾಸಿಗಳಾದ ಸುಬ್ರಮಣಿ (24), ಮಂಜು (25), ಬೆಳ್ಳಿ (36), ಕರ್ಪ (49), ಕುಶಾಲ (19) ಬಂಧಿತರು. ಸುಬ್ಬಯ್ಯ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಗುರುವಾರ ಸಂಗ್ರಹಣಾ ಕೊಠಡಿಯ ಬಾಗಿಲು ಮುರಿದು ಕಾಳುಮೆಣಸನ್ನು ಕಳವು ಮಾಡಲಾಗಿತ್ತು. ದೂರನ್ನು ಪಡೆದ ಕೇವಲ 24 ಗಂಟೆಗಳಲ್ಲೇ ಆರೋಪಿಗಳನ್ನು ಹೆಡೆಮುರಿ ಕಟ್ಟುವ ಮೂಲಕ ಪೊಲೀಸರು ಚಾಣಾಕ್ಷತೆ ಮೆರೆದಿದ್ದಾರೆ.