ಹಿರಿಯ ತಲೆಮಾರಿನ ಗಿರಿಜನರು ಕಾಫಿ ತೋಟದ ಕೆಲಸ ಮಾಡುತ್ತಿದ್ದರೆ, ಯುವ ತಲೆಮಾರಿನವರು ಚಾಲನೆ, ಮೆಕ್ಯಾನಿಕ್ ಮತ್ತಿತರ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿಡುವ ವಾಹನ ಸಾಲ ಸೌಲಭ್ಯ ಪಡೆದುಕೊಂಡು ಆಟೋ ಮೊದಲಾದ ವಾಹನಗಳನ್ನು ಕೆಲವರು ಬಾಡಿಗೆ ಓಡಿಸುತ್ತಿದ್ದಾರೆ. ಲಾಕ್ಡೌನ್ನಿಂದ ಇದೆಲ್ಲ ನಿಂತು ಹೊಗಿದೆ. ಬದುಕಿಗೆ ಪರ್ಯಾಯ ಮಾರ್ಗವಿಲ್ಲದೇ ಪರತಪಿಸುತ್ತಿದ್ದಾರೆ.