<p><strong>ಸಿದ್ದಾಪುರ:</strong> ರಸ್ತೆ ಬದಿಯಲ್ಲಿದ್ದ ಟೀ ಅಂಗಡಿ ಮೇಲೆ ಕಾಡಾನೆ ದಾಳಿ ನಡೆಸಿದ್ದು, ದಂಪತಿ ಪ್ರಾಣಾಪಾಯದಿಂದ ಪಾರಾದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ.</p>.<p>ಅತ್ತಿಮಂಗಲ ತಿರುವಿನಲ್ಲಿ ಜಬ್ಬಾರ್ ಎಂಬವರು ರಸ್ತೆ ಬದಿಯಲ್ಲಿ ಟೀ ಅಂಗಡಿ ನಡೆಸುತ್ತಿದ್ದು, ಮಂಗಳವಾರ ಬೆಳಿಗ್ಗೆ ಎಂದಿನಂತೆ ಅಂಗಡಿಗೆ ಪತ್ನಿಯೊಂದಿಗೆ ಬಂದಿದ್ದರು. 8.30ಕ್ಕೆ ಸಮೀಪದ ಕಾಫಿ ತೋಟದಿಂದ ಮರಿ ಆನೆಯೊಂದಿಗೆ ಕಾಡಾನೆ ಅಂಗಡಿ ಬಳಿ ಬಂದಿದ್ದು, ಅಂಗಡಿಯಲ್ಲಿದ್ದ ಪದಾರ್ಥಗಳನ್ನು ಎಳೆದು ಜಖಂಗೊಳಿಸಿತು.</p>.<p>ಈ ವೇಳೆ ಜಬ್ಬಾರ್ ಹಾಗೂ ಪತ್ನಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಸಮೀಪದ ಬಸ್ ತಂಗುದಾಣದಲ್ಲಿದ್ದ ಜನರು ಕಿರುಚಿದ ಬಳಿಕ ಕಾಡಾನೆ ಹಾಗೂ ಮರಿ ಸಮೀಪದ ಮೇರಿಲ್ಯಾಂಡ್ ಎಸ್ಟೇಟ್ ಕಡೆಗೆ ಹೋಗಿದೆ. ಈ ವೇಳೆ ಬಸ್ ತಂಗುದಾಣದಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಇದ್ದು, ಕಾಡಾನೆ ಕಂಡು ಭಯಗೊಂಡರು. </p>.<p>ಕಾರ್ ಮೇಲೆ ದಾಳಿ: ಟೀ ಅಂಗಡಿ ದಾಳಿ ನಂತರ ಮೇರಿ ಲ್ಯಾಂಡ್ ತೋಟಕ್ಕೆ ತೆರಳಿದ್ದು, ಮಡಿಕೇರಿಗೆ ಕಾರಿನಲ್ಲಿ ತೆರಳುತ್ತಿದ್ದ ಎಸ್ಟೇಟ್ ಮಾಲೀಕ ಲಿಸ್ಲಿ ಪಿಂಟೋ ಅವರ ಕಾರಿನ ಮೇಲೆ ದಾಳಿ ನಡೆಸಿದೆ. ಕಾಡಾನೆ ಕಂಡು ಕಾರನ್ನು ಹಿಂದಕ್ಕೆ ಚಲಾಯಿಸಿದರೂ, ಬೆನ್ನಟ್ಟಿ ಬಂದ ಆನೆ ದಾಳಿ ನಡೆಸಿದೆ. ಈ ವೇಳೆ ಲಿಸ್ಲಿ ಮೌನವಾಗಿ ಕಾರಿನಲ್ಲೇ ಕುಳಿತಿದ್ದು, ಸ್ವಲ್ಪ ಸಮಯದ ಬಳಿಕ ತೋಟಕ್ಕೆ ತೆರಳಿತು.</p>.<p>ನೆಲ್ಯಹುದಿಕೇರಿ ಭಾಗದಲ್ಲಿ ಹಾಡಹಗಲಲ್ಲೇ ಆನೆಗಳು ಓಡಾಡಿ ದಾಳಿ ನಡೆಸಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಇವುಗಳನ್ನು ಶಾಶ್ವತವಾಗಿ ಕಾಡಿಗೆ ಅಟ್ಟಬೇಕು ಹಾಗೂ ಮರಳಿ ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>ಸ್ಥಳಕ್ಕೆ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕಾಡಾನೆ ಕಾಡಿಗೆ ಅಟ್ಟಲು ಕಾರ್ಯಾಚರಣೆ ಕೈಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿದ್ದಾಪುರ:</strong> ರಸ್ತೆ ಬದಿಯಲ್ಲಿದ್ದ ಟೀ ಅಂಗಡಿ ಮೇಲೆ ಕಾಡಾನೆ ದಾಳಿ ನಡೆಸಿದ್ದು, ದಂಪತಿ ಪ್ರಾಣಾಪಾಯದಿಂದ ಪಾರಾದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ.</p>.<p>ಅತ್ತಿಮಂಗಲ ತಿರುವಿನಲ್ಲಿ ಜಬ್ಬಾರ್ ಎಂಬವರು ರಸ್ತೆ ಬದಿಯಲ್ಲಿ ಟೀ ಅಂಗಡಿ ನಡೆಸುತ್ತಿದ್ದು, ಮಂಗಳವಾರ ಬೆಳಿಗ್ಗೆ ಎಂದಿನಂತೆ ಅಂಗಡಿಗೆ ಪತ್ನಿಯೊಂದಿಗೆ ಬಂದಿದ್ದರು. 8.30ಕ್ಕೆ ಸಮೀಪದ ಕಾಫಿ ತೋಟದಿಂದ ಮರಿ ಆನೆಯೊಂದಿಗೆ ಕಾಡಾನೆ ಅಂಗಡಿ ಬಳಿ ಬಂದಿದ್ದು, ಅಂಗಡಿಯಲ್ಲಿದ್ದ ಪದಾರ್ಥಗಳನ್ನು ಎಳೆದು ಜಖಂಗೊಳಿಸಿತು.</p>.<p>ಈ ವೇಳೆ ಜಬ್ಬಾರ್ ಹಾಗೂ ಪತ್ನಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಸಮೀಪದ ಬಸ್ ತಂಗುದಾಣದಲ್ಲಿದ್ದ ಜನರು ಕಿರುಚಿದ ಬಳಿಕ ಕಾಡಾನೆ ಹಾಗೂ ಮರಿ ಸಮೀಪದ ಮೇರಿಲ್ಯಾಂಡ್ ಎಸ್ಟೇಟ್ ಕಡೆಗೆ ಹೋಗಿದೆ. ಈ ವೇಳೆ ಬಸ್ ತಂಗುದಾಣದಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಇದ್ದು, ಕಾಡಾನೆ ಕಂಡು ಭಯಗೊಂಡರು. </p>.<p>ಕಾರ್ ಮೇಲೆ ದಾಳಿ: ಟೀ ಅಂಗಡಿ ದಾಳಿ ನಂತರ ಮೇರಿ ಲ್ಯಾಂಡ್ ತೋಟಕ್ಕೆ ತೆರಳಿದ್ದು, ಮಡಿಕೇರಿಗೆ ಕಾರಿನಲ್ಲಿ ತೆರಳುತ್ತಿದ್ದ ಎಸ್ಟೇಟ್ ಮಾಲೀಕ ಲಿಸ್ಲಿ ಪಿಂಟೋ ಅವರ ಕಾರಿನ ಮೇಲೆ ದಾಳಿ ನಡೆಸಿದೆ. ಕಾಡಾನೆ ಕಂಡು ಕಾರನ್ನು ಹಿಂದಕ್ಕೆ ಚಲಾಯಿಸಿದರೂ, ಬೆನ್ನಟ್ಟಿ ಬಂದ ಆನೆ ದಾಳಿ ನಡೆಸಿದೆ. ಈ ವೇಳೆ ಲಿಸ್ಲಿ ಮೌನವಾಗಿ ಕಾರಿನಲ್ಲೇ ಕುಳಿತಿದ್ದು, ಸ್ವಲ್ಪ ಸಮಯದ ಬಳಿಕ ತೋಟಕ್ಕೆ ತೆರಳಿತು.</p>.<p>ನೆಲ್ಯಹುದಿಕೇರಿ ಭಾಗದಲ್ಲಿ ಹಾಡಹಗಲಲ್ಲೇ ಆನೆಗಳು ಓಡಾಡಿ ದಾಳಿ ನಡೆಸಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಇವುಗಳನ್ನು ಶಾಶ್ವತವಾಗಿ ಕಾಡಿಗೆ ಅಟ್ಟಬೇಕು ಹಾಗೂ ಮರಳಿ ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>ಸ್ಥಳಕ್ಕೆ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕಾಡಾನೆ ಕಾಡಿಗೆ ಅಟ್ಟಲು ಕಾರ್ಯಾಚರಣೆ ಕೈಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>