<p> ಗೋಣಿಕೊಪ್ಪಲು : ಮಿರಿಮಿರಿ ಮಿಂಚುವ ಬಣ್ಣದ ಬಟ್ಟೆ ತೊಟ್ಟ ಮಹಿಳೆಯರು, ದಟ್ಟಿಕುಪ್ಪಸ ತೊಟ್ಟ ಪುರುಷರು ಹಾಡಿನ ತಾಳಕ್ಕೆ ಹೆಜ್ಜೆಹಾಕುತ್ತಾ ಪೊನ್ನಂಪೇಟೆ ನಿನಾದ ಶಾಲೆಯ ಆವರಣದಲ್ಲಿ ನರ್ತಿಸಿದ ನೃತ್ಯ ಮನಮೋಹಕವಾಗಿತ್ತು.<br /> <br /> ಗೋಣಿಕೊಪ್ಪಲು ಮುಳಿಯ ಜ್ಯುವೆಲರ್ಸ್ ಹಾಗೂ ಪೊನ್ನಂಪೇಟೆ ನಿನಾದ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಭಾನುವಾರ ನಡೆದ ಕೊಡವ ಕುಟುಂಬಗಳ ನಡುವಿನ `ಉಮ್ಮತ್ ಬೊಳಕ್~ ಕೊಡವ ಸಾಂಸ್ಕೃತಿಕ ನೃತ್ಯ ಸ್ಪರ್ಧೆ ಅತ್ಯಂತ ಆಕರ್ಷಕವಾಗಿದ್ದು ಪ್ರೇಕ್ಷಕರಿಗೆ ಮುದನೀಡಿತು. ಮೈಸೂರು, ಬೆಂಗಳೂರು ಹಾಗೂ ಕೊಡಗಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಉಮ್ಮತ್ತಾಟ್ ಮತ್ತು ಬೊಳಕಾಟ್ ನೃತ್ಯವನ್ನು ವಿವಿಧ ಬಗೆಯಲ್ಲಿ ಅಭಿವ್ಯಕ್ತಿಸಿದರು.<br /> <br /> ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ತಂಡಗಳು ಒಂದಕ್ಕಿಂತ ಒಂದು ಮಿಗಿಲಾಗಿದ್ದವು. ಮುಕ್ಕೋಡ್ಲುವಿನ ಕಾಳಚಂಡ ಪಳಂಗಪ್ಪ ಅವರ ತಂಡ ಬೊಳಕಾಟ್ ನೃತ್ಯವನ್ನು ಅತ್ಯುತ್ತಮವಾಗಿ ನರ್ತಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಬಾಳೋಪಾಟ್ ಹಾಡಿಗೆ ತಕ್ಕಂತೆ ಹೆಜ್ಜೆಹಾಕಿ ಪ್ರಾಚೀನ ಕೊಡವ ಸಂಸ್ಕೃತಿಯ ನೃತ್ಯಕ್ಕೆ ಜೀವ ತುಂಬಿದರು.<br /> <br /> ಕಾರ್ಯಕ್ರಮ ಉದ್ಘಾಟಿಸಿದ ಮಡಿಕೇರಿಯ ನಿವೃತ್ತ ಪ್ರಾಂಶುಪಾಲರಾದ ಡಾ.ಪುಷ್ಪ ಕುಟ್ಟಣ್ಣ ಮಾತನಾಡಿ ಸಂಸ್ಕೃತಿಯ ಉಳಿವಿಗೆ ಎಲ್ಲರ ಸಹಕಾರ ಅಗತ್ಯ. ಕೇವಲ ಒಂದು ಜನಾಂಗಕ್ಕೆ ಸಂಸ್ಕೃತಿಯನ್ನು ಸೀಮಿತಗೊಳಿಸಿದರೆ ಅದು ಬೆಳೆಯಲಾರದು. ಸಮುದಾಯದ ಎಲ್ಲ ಜನರಿಗೆ ಕಲಿಸಿದಾಗ ಮಾತ್ರ ಉಳಿಯಲು ಸಾಧ್ಯ ಎಂದು ಹೇಳಿದರು.<br /> <br /> ತುಳು ಅಕಾಡೆಮಿ ತುಳು ಭಾಷೆ ಗೊತ್ತಿರುವ ಎಲ್ಲರಿಗೂ ತುಳು ಸಂಸ್ಕೃತಿ ಕಲಿಸುತ್ತಿದೆ. ಇಂತಹದ್ದೆ ಭಾವನೆ ಕೊಡವ ಸಾಹಿತ್ಯ ಅಕಾಡೆಮಿಗೂ ಇರಬೇಕು. ಎಲ್ಲರನ್ನು ಸೇರಿಸಿಕೊಂಡು ಮುಂದುವರಿದರೆ ಅದೇ ದೇಶದ ದೊಡ್ಡ ಶಕ್ತಿ ಎಂದು ಅಭಿಪ್ರಾಯಪಟ್ಟರು.<br /> <br /> ಮುಳಿಯ ಜ್ಯುವೆಲರ್ಸ್ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ ಸಮಾಜದಿಂದ ಗಳಿಸಿದ್ದನ್ನು ಮರಳಿ ಸಮಾಜಕ್ಕೆ ತಲುಪಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಂಸ್ಕೃತಿಯ ಉಳಿವಿಗೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.<br /> <br /> ಪರಿಸರವನ್ನು ಕಾಡುತ್ತಿರುವ ಪ್ಲಾಸ್ಟಿಕ್ ನಿಷೇದದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಹಾಗೂ ಕಿವುಡು ಮತ್ತು ಮೂಖ ಮಕ್ಕಳಿಗೆ ಚಿಕಿತ್ಸೆ ನೀಡುವ ಪ್ರಮುಖ ಕಾರ್ಯಕ್ರಮಗಳನ್ನು ಮುಂದೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.<br /> <br /> ನಿನಾದ ಸಂಸ್ಥೆಯ ಕಾರ್ಯದರ್ಶಿ ಚೇಂದಿರ ಬೋಪಣ್ಣ, ಕಾರ್ಯಕ್ರಮ ಸಂಯೋಜಕ ತೀತಿರ ಸೋಮಣ್ಣ, ತೀತಿರ ಬೋಪಣ್ಣ ಹಾಜರಿದ್ದರು. ನಿನಾದ ಸಂಸ್ಥೆಯ ಅಧ್ಯಕ್ಷೆ ನಿರ್ಮಲಾ ಬೋಪಣ್ಣ ಸ್ವಾಗತಿಸಿದರು. ಮದ್ರೀರ ಗಣಪತಿ, ಸಣ್ಣುವಂಡ ನೀರಜ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> ಗೋಣಿಕೊಪ್ಪಲು : ಮಿರಿಮಿರಿ ಮಿಂಚುವ ಬಣ್ಣದ ಬಟ್ಟೆ ತೊಟ್ಟ ಮಹಿಳೆಯರು, ದಟ್ಟಿಕುಪ್ಪಸ ತೊಟ್ಟ ಪುರುಷರು ಹಾಡಿನ ತಾಳಕ್ಕೆ ಹೆಜ್ಜೆಹಾಕುತ್ತಾ ಪೊನ್ನಂಪೇಟೆ ನಿನಾದ ಶಾಲೆಯ ಆವರಣದಲ್ಲಿ ನರ್ತಿಸಿದ ನೃತ್ಯ ಮನಮೋಹಕವಾಗಿತ್ತು.<br /> <br /> ಗೋಣಿಕೊಪ್ಪಲು ಮುಳಿಯ ಜ್ಯುವೆಲರ್ಸ್ ಹಾಗೂ ಪೊನ್ನಂಪೇಟೆ ನಿನಾದ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಭಾನುವಾರ ನಡೆದ ಕೊಡವ ಕುಟುಂಬಗಳ ನಡುವಿನ `ಉಮ್ಮತ್ ಬೊಳಕ್~ ಕೊಡವ ಸಾಂಸ್ಕೃತಿಕ ನೃತ್ಯ ಸ್ಪರ್ಧೆ ಅತ್ಯಂತ ಆಕರ್ಷಕವಾಗಿದ್ದು ಪ್ರೇಕ್ಷಕರಿಗೆ ಮುದನೀಡಿತು. ಮೈಸೂರು, ಬೆಂಗಳೂರು ಹಾಗೂ ಕೊಡಗಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಉಮ್ಮತ್ತಾಟ್ ಮತ್ತು ಬೊಳಕಾಟ್ ನೃತ್ಯವನ್ನು ವಿವಿಧ ಬಗೆಯಲ್ಲಿ ಅಭಿವ್ಯಕ್ತಿಸಿದರು.<br /> <br /> ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ತಂಡಗಳು ಒಂದಕ್ಕಿಂತ ಒಂದು ಮಿಗಿಲಾಗಿದ್ದವು. ಮುಕ್ಕೋಡ್ಲುವಿನ ಕಾಳಚಂಡ ಪಳಂಗಪ್ಪ ಅವರ ತಂಡ ಬೊಳಕಾಟ್ ನೃತ್ಯವನ್ನು ಅತ್ಯುತ್ತಮವಾಗಿ ನರ್ತಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಬಾಳೋಪಾಟ್ ಹಾಡಿಗೆ ತಕ್ಕಂತೆ ಹೆಜ್ಜೆಹಾಕಿ ಪ್ರಾಚೀನ ಕೊಡವ ಸಂಸ್ಕೃತಿಯ ನೃತ್ಯಕ್ಕೆ ಜೀವ ತುಂಬಿದರು.<br /> <br /> ಕಾರ್ಯಕ್ರಮ ಉದ್ಘಾಟಿಸಿದ ಮಡಿಕೇರಿಯ ನಿವೃತ್ತ ಪ್ರಾಂಶುಪಾಲರಾದ ಡಾ.ಪುಷ್ಪ ಕುಟ್ಟಣ್ಣ ಮಾತನಾಡಿ ಸಂಸ್ಕೃತಿಯ ಉಳಿವಿಗೆ ಎಲ್ಲರ ಸಹಕಾರ ಅಗತ್ಯ. ಕೇವಲ ಒಂದು ಜನಾಂಗಕ್ಕೆ ಸಂಸ್ಕೃತಿಯನ್ನು ಸೀಮಿತಗೊಳಿಸಿದರೆ ಅದು ಬೆಳೆಯಲಾರದು. ಸಮುದಾಯದ ಎಲ್ಲ ಜನರಿಗೆ ಕಲಿಸಿದಾಗ ಮಾತ್ರ ಉಳಿಯಲು ಸಾಧ್ಯ ಎಂದು ಹೇಳಿದರು.<br /> <br /> ತುಳು ಅಕಾಡೆಮಿ ತುಳು ಭಾಷೆ ಗೊತ್ತಿರುವ ಎಲ್ಲರಿಗೂ ತುಳು ಸಂಸ್ಕೃತಿ ಕಲಿಸುತ್ತಿದೆ. ಇಂತಹದ್ದೆ ಭಾವನೆ ಕೊಡವ ಸಾಹಿತ್ಯ ಅಕಾಡೆಮಿಗೂ ಇರಬೇಕು. ಎಲ್ಲರನ್ನು ಸೇರಿಸಿಕೊಂಡು ಮುಂದುವರಿದರೆ ಅದೇ ದೇಶದ ದೊಡ್ಡ ಶಕ್ತಿ ಎಂದು ಅಭಿಪ್ರಾಯಪಟ್ಟರು.<br /> <br /> ಮುಳಿಯ ಜ್ಯುವೆಲರ್ಸ್ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ ಸಮಾಜದಿಂದ ಗಳಿಸಿದ್ದನ್ನು ಮರಳಿ ಸಮಾಜಕ್ಕೆ ತಲುಪಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಂಸ್ಕೃತಿಯ ಉಳಿವಿಗೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.<br /> <br /> ಪರಿಸರವನ್ನು ಕಾಡುತ್ತಿರುವ ಪ್ಲಾಸ್ಟಿಕ್ ನಿಷೇದದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಹಾಗೂ ಕಿವುಡು ಮತ್ತು ಮೂಖ ಮಕ್ಕಳಿಗೆ ಚಿಕಿತ್ಸೆ ನೀಡುವ ಪ್ರಮುಖ ಕಾರ್ಯಕ್ರಮಗಳನ್ನು ಮುಂದೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.<br /> <br /> ನಿನಾದ ಸಂಸ್ಥೆಯ ಕಾರ್ಯದರ್ಶಿ ಚೇಂದಿರ ಬೋಪಣ್ಣ, ಕಾರ್ಯಕ್ರಮ ಸಂಯೋಜಕ ತೀತಿರ ಸೋಮಣ್ಣ, ತೀತಿರ ಬೋಪಣ್ಣ ಹಾಜರಿದ್ದರು. ನಿನಾದ ಸಂಸ್ಥೆಯ ಅಧ್ಯಕ್ಷೆ ನಿರ್ಮಲಾ ಬೋಪಣ್ಣ ಸ್ವಾಗತಿಸಿದರು. ಮದ್ರೀರ ಗಣಪತಿ, ಸಣ್ಣುವಂಡ ನೀರಜ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>