<p><strong>ಕುಶಾಲನಗರ: </strong>ಕೂಡ್ಲೂರು ಕೈಗಾರಿಕೆ ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಮತ್ತು ತಯಾರಿಕಾ ಕೇಂದ್ರದ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ನೌಕರರು ಮತ್ತು ಸ್ಥಳೀಯರ ನಡುವೆ ಗುರುವಾರ ಪರಸ್ಪರ ವಾಗ್ವಾದ ಹಾಗೂ ಮಾತಿನ ಚಕಮಕಿ ನಡೆಯಿತು.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿ.ಪಂ.ಸದಸ್ಯ ಎಸ್.ಎನ್.ರಾಜಾರಾವ್, ಈ ಕೇಂದ್ರವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು.<br /> <br /> ಕೇಂದ್ರದ ಕೆಲವು ನೌಕರರು ಮೂಲಸೌಕರ್ಯಗಳ ಕೊರತೆಯಿರುವ ಹಿನ್ನೆಲೆಯಲ್ಲಿ ಈ ಕೇಂದ್ರವನ್ನು ಸೌಲಭ್ಯವುಳ್ಳ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಕೇತ್ರದ ಜಿ.ಪಂ.ಸದಸ್ಯೆ ಚಿತ್ರಕಲಾ ಬುಧವಾರ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಬೇಡಿಕೆ ಮುಂದಿಟ್ಟ ಹಿನ್ನೆಲೆಯಲ್ಲಿ ಕೇಂದ್ರದ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪರ -ವಿರೋಧ ಚರ್ಚೆ ನಡೆದ ಹಿನ್ನೆಲೆಯಲ್ಲಿ ಈ ಗೊಂದಲ ಏರ್ಪಟ್ಟಿತ್ತು.<br /> <br /> ಮುಳ್ಳುಸೋಗೆ ಗ್ರಾ.ಪಂ.ಸದಸ್ಯ ಎಂ.ಎಸ್.ರಾಜೇಶ್ ಸೇರಿದಂತೆ ಸ್ಥಳೀಯ ಕೆಲವರು ಕೇಂದ್ರದ ನೌಕರರಿಗೆ ಸೂಕ್ತ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಬೇಡಿಕೆ ಇಟ್ಟ ಕಾರಣ ಕೇಂದ್ರದ ನೌಕರರಲ್ಲಿ ಎರಡು ಗುಂಪುಗಳಾಗಿ ಚರ್ಚೆ ವಿಕೋಪಕ್ಕೆ ತಿರುಗಿತು ಎನ್ನಲಾಗಿದೆ.<br /> <br /> ಈ ಸಂದರ್ಭ ಜಿ.ಪಂ.ಸದಸ್ಯ ರಾಜಾರಾವ್ ಮತ್ತು ಗ್ರಾ.ಪಂ.ಸದಸ್ಯ ಎಂ.ಎಸ್. ರಾಜೇಶ್, ಗ್ರಾಮಸ್ಥರ ನಡುವೆ ಪರಸ್ಪರ ವಾದ -ವಿವಾದ ಮುಂದುವರೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಸ್ಥಳಕ್ಕಾಗಮಿಸಿದ ಸಿಪಿಐ ಬಿ.ಬಸವರಾಜ್, ಪಿಎಸ್ಐ ಆರ್.ಜಿ.ಚನ್ನೇಗೌಡ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ಸಂದರ್ಭ ಸ್ಥಳದಲ್ಲಿ ಗ್ರಾಪಂ.ಸದಸ್ಯ ಅರುಣ್, ಗ್ರಾ.ಪಂ.ಮಾಜಿ ಸದಸ್ಯ ಎನ್.ಕೆ.ಚಂದ್ರಶೇಖರ್, ಸ್ಥಳೀಯರಾದ ಎಂ.ಟಿ.ಮೂಡ್ಲಿಗೌಡ, ಹೇಮಂತ್ಕುಮಾರ್, ಅರುಣ್ಕುಮಾರ್, ಸಣ್ಣಪ್ಪ ಸೇರಿದಂತೆ ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.<br /> <br /> ಈ ಕೇಂದ್ರ ನಡೆಸಲು ಬಾಡಿಗೆಗೆ ನೀಡಿರುವ ಕಟ್ಟಡವನ್ನು ತಕ್ಷಣ ತೆರವುಗೊಳಿಸುವಂತೆ ಕಟ್ಟಡ ಮಾಲೀಕರು ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರದ ಸ್ಥಳಾಂತರದ ಕುರಿತು ವಾದ -ವಿವಾದ ನಡೆಯುತ್ತಿದೆ ಎಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಶಾಲನಗರ: </strong>ಕೂಡ್ಲೂರು ಕೈಗಾರಿಕೆ ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಮತ್ತು ತಯಾರಿಕಾ ಕೇಂದ್ರದ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ನೌಕರರು ಮತ್ತು ಸ್ಥಳೀಯರ ನಡುವೆ ಗುರುವಾರ ಪರಸ್ಪರ ವಾಗ್ವಾದ ಹಾಗೂ ಮಾತಿನ ಚಕಮಕಿ ನಡೆಯಿತು.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿ.ಪಂ.ಸದಸ್ಯ ಎಸ್.ಎನ್.ರಾಜಾರಾವ್, ಈ ಕೇಂದ್ರವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು.<br /> <br /> ಕೇಂದ್ರದ ಕೆಲವು ನೌಕರರು ಮೂಲಸೌಕರ್ಯಗಳ ಕೊರತೆಯಿರುವ ಹಿನ್ನೆಲೆಯಲ್ಲಿ ಈ ಕೇಂದ್ರವನ್ನು ಸೌಲಭ್ಯವುಳ್ಳ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಕೇತ್ರದ ಜಿ.ಪಂ.ಸದಸ್ಯೆ ಚಿತ್ರಕಲಾ ಬುಧವಾರ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಬೇಡಿಕೆ ಮುಂದಿಟ್ಟ ಹಿನ್ನೆಲೆಯಲ್ಲಿ ಕೇಂದ್ರದ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪರ -ವಿರೋಧ ಚರ್ಚೆ ನಡೆದ ಹಿನ್ನೆಲೆಯಲ್ಲಿ ಈ ಗೊಂದಲ ಏರ್ಪಟ್ಟಿತ್ತು.<br /> <br /> ಮುಳ್ಳುಸೋಗೆ ಗ್ರಾ.ಪಂ.ಸದಸ್ಯ ಎಂ.ಎಸ್.ರಾಜೇಶ್ ಸೇರಿದಂತೆ ಸ್ಥಳೀಯ ಕೆಲವರು ಕೇಂದ್ರದ ನೌಕರರಿಗೆ ಸೂಕ್ತ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಬೇಡಿಕೆ ಇಟ್ಟ ಕಾರಣ ಕೇಂದ್ರದ ನೌಕರರಲ್ಲಿ ಎರಡು ಗುಂಪುಗಳಾಗಿ ಚರ್ಚೆ ವಿಕೋಪಕ್ಕೆ ತಿರುಗಿತು ಎನ್ನಲಾಗಿದೆ.<br /> <br /> ಈ ಸಂದರ್ಭ ಜಿ.ಪಂ.ಸದಸ್ಯ ರಾಜಾರಾವ್ ಮತ್ತು ಗ್ರಾ.ಪಂ.ಸದಸ್ಯ ಎಂ.ಎಸ್. ರಾಜೇಶ್, ಗ್ರಾಮಸ್ಥರ ನಡುವೆ ಪರಸ್ಪರ ವಾದ -ವಿವಾದ ಮುಂದುವರೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಸ್ಥಳಕ್ಕಾಗಮಿಸಿದ ಸಿಪಿಐ ಬಿ.ಬಸವರಾಜ್, ಪಿಎಸ್ಐ ಆರ್.ಜಿ.ಚನ್ನೇಗೌಡ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ಸಂದರ್ಭ ಸ್ಥಳದಲ್ಲಿ ಗ್ರಾಪಂ.ಸದಸ್ಯ ಅರುಣ್, ಗ್ರಾ.ಪಂ.ಮಾಜಿ ಸದಸ್ಯ ಎನ್.ಕೆ.ಚಂದ್ರಶೇಖರ್, ಸ್ಥಳೀಯರಾದ ಎಂ.ಟಿ.ಮೂಡ್ಲಿಗೌಡ, ಹೇಮಂತ್ಕುಮಾರ್, ಅರುಣ್ಕುಮಾರ್, ಸಣ್ಣಪ್ಪ ಸೇರಿದಂತೆ ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.<br /> <br /> ಈ ಕೇಂದ್ರ ನಡೆಸಲು ಬಾಡಿಗೆಗೆ ನೀಡಿರುವ ಕಟ್ಟಡವನ್ನು ತಕ್ಷಣ ತೆರವುಗೊಳಿಸುವಂತೆ ಕಟ್ಟಡ ಮಾಲೀಕರು ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರದ ಸ್ಥಳಾಂತರದ ಕುರಿತು ವಾದ -ವಿವಾದ ನಡೆಯುತ್ತಿದೆ ಎಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>