<p><strong>ಕುಶಾಲನಗರ:</strong> ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ರೈತ ಸಹಕಾರ ಭವನದಲ್ಲಿ ಭಾನುವಾರ ನಡೆದ ರೋಟರಿ ಹತ್ತು ವಲಯ ಸಮಿತಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಂದರ್ಭ 200 ರೋಟರಿ ಸದಸ್ಯರು ನೇತ್ರದಾನಕ್ಕೆ ಹೆಸರು ನೋಂದಾಯಿತಿಸಿಕೊಂಡರು.<br /> <br /> ಇದಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರವನ್ನು ವಲಯ ಆರರ ರೋಟರಿ ಸಂಸ್ಥೆ ಗವರ್ನರ್ ರವೀಂದ್ರ ರೈ ಉದ್ಘಾಟಿಸಿದರು.<br /> <br /> ಬಳಿಕ ಮಾತನಾಡಿದ ಅವರು, ರಾಜ್ಯದಾದ್ಯಂತ ಹತ್ತು ರೋಟರಿ ವಲಯ ಸಂಸ್ಥೆಗಳಿದ್ದು, ಅವುಗಳು ಆಯಾ ವಲಯಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಆದರೆ ಒಂದು ವಲಯದ ರೋಟರಿ ಕುಟುಂಬಗಳೊಂದಿಗೆ ಮತ್ತೊಂದು ವಲಯಗಳ ಕುಟುಂಬ ಸದಸ್ಯರ ಪರಿಚಯವೇ ಆಗುವುದಿಲ್ಲ.<br /> <br /> ಅಂತಹ ಅವಕಾಶಗಳಿಂದನು ವಂಚಿತರಾಗಬಾರದೆಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಬೆಂಗಳೂರಿನ ನಯನ ಜ್ಯೋತಿ ಟ್ರಸ್ಟ್ನ ಪ್ರಮುಖ ಎಸ್. ಜಯರಾಮ್ ನೇತ್ರದಾನದ ಮಹತ್ವ ಕುರಿತು ರೋಟರಿ ಸದಸ್ಯರಿಗೆ ಮಾಹಿತಿ ನೀಡಿದರು. ರೋಟರಿಯ 200 ಸದಸ್ಯರು ನೇತ್ರದಾನಕ್ಕೆ ಹೆಸರು ನೋಂದಾಯಿಸಿದರು. ನಂತರ ವಿವಿಧ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆಗಳು ನಡೆದವು.<br /> <br /> ಅಧ್ಯಕ್ಷತೆಯನ್ನು ಕುಶಾಲನಗರ ರೋಟರಿ ಅಧ್ಯಕ್ಷ ಶಾಜಿ ಕೆ. ಜಾರ್ಜ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೋಟರಿ ವಲಯ 4 ರ ಸಹಾಯಕ ಗವರ್ನರ್ ಡಾ. ಅರವಿಂದ ಭಟ್, ವಲಯ 1ರ ಸಹಾಯಕ ಗವರ್ನರ್ ಕೆ.ಟಿ.ಎಂ. ಭಟ್, ಡಾ.ಮಧುಕರ್ ಇದ್ದರು. ಕಾರ್ಯದರ್ಶಿ ಜವಹಾರ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಶಾಲನಗರ:</strong> ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ರೈತ ಸಹಕಾರ ಭವನದಲ್ಲಿ ಭಾನುವಾರ ನಡೆದ ರೋಟರಿ ಹತ್ತು ವಲಯ ಸಮಿತಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಂದರ್ಭ 200 ರೋಟರಿ ಸದಸ್ಯರು ನೇತ್ರದಾನಕ್ಕೆ ಹೆಸರು ನೋಂದಾಯಿತಿಸಿಕೊಂಡರು.<br /> <br /> ಇದಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರವನ್ನು ವಲಯ ಆರರ ರೋಟರಿ ಸಂಸ್ಥೆ ಗವರ್ನರ್ ರವೀಂದ್ರ ರೈ ಉದ್ಘಾಟಿಸಿದರು.<br /> <br /> ಬಳಿಕ ಮಾತನಾಡಿದ ಅವರು, ರಾಜ್ಯದಾದ್ಯಂತ ಹತ್ತು ರೋಟರಿ ವಲಯ ಸಂಸ್ಥೆಗಳಿದ್ದು, ಅವುಗಳು ಆಯಾ ವಲಯಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಆದರೆ ಒಂದು ವಲಯದ ರೋಟರಿ ಕುಟುಂಬಗಳೊಂದಿಗೆ ಮತ್ತೊಂದು ವಲಯಗಳ ಕುಟುಂಬ ಸದಸ್ಯರ ಪರಿಚಯವೇ ಆಗುವುದಿಲ್ಲ.<br /> <br /> ಅಂತಹ ಅವಕಾಶಗಳಿಂದನು ವಂಚಿತರಾಗಬಾರದೆಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಬೆಂಗಳೂರಿನ ನಯನ ಜ್ಯೋತಿ ಟ್ರಸ್ಟ್ನ ಪ್ರಮುಖ ಎಸ್. ಜಯರಾಮ್ ನೇತ್ರದಾನದ ಮಹತ್ವ ಕುರಿತು ರೋಟರಿ ಸದಸ್ಯರಿಗೆ ಮಾಹಿತಿ ನೀಡಿದರು. ರೋಟರಿಯ 200 ಸದಸ್ಯರು ನೇತ್ರದಾನಕ್ಕೆ ಹೆಸರು ನೋಂದಾಯಿಸಿದರು. ನಂತರ ವಿವಿಧ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆಗಳು ನಡೆದವು.<br /> <br /> ಅಧ್ಯಕ್ಷತೆಯನ್ನು ಕುಶಾಲನಗರ ರೋಟರಿ ಅಧ್ಯಕ್ಷ ಶಾಜಿ ಕೆ. ಜಾರ್ಜ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೋಟರಿ ವಲಯ 4 ರ ಸಹಾಯಕ ಗವರ್ನರ್ ಡಾ. ಅರವಿಂದ ಭಟ್, ವಲಯ 1ರ ಸಹಾಯಕ ಗವರ್ನರ್ ಕೆ.ಟಿ.ಎಂ. ಭಟ್, ಡಾ.ಮಧುಕರ್ ಇದ್ದರು. ಕಾರ್ಯದರ್ಶಿ ಜವಹಾರ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>