<p><strong>ಮಡಿಕೇರಿ: </strong>ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿಗರ ಅಚ್ಚುಮೆಚ್ಚಿನ ಹತ್ತು ಹಲವು ಸ್ಥಳಗಳಿವೆ. ಇದರಲ್ಲಿ ರಾಜಾಸೀಟ್ ಪಾರ್ಕ್ ಕೂಡ ಒಂದಾಗಿದೆ. ಈ ಸ್ಥಳದಿಂದ ರಮಣೀಯ ನಿಸರ್ಗ ಸೌಂದರ್ಯವನ್ನು ಸವಿಯಬಹುದಾಗಿದೆ. ಇದರ ಜೊತೆ ಇಲ್ಲಿರುವ ಸಂಗೀತ ಕಾರಂಜಿ ಹಲವು ವರ್ಷಗಳಿಂದ ಆಕರ್ಷಣೀಯ ಪ್ರಮುಖ ಸ್ಥಳವಾಗಿತ್ತು.<br /> <br /> ಆದರೆ, ಕಳೆದ ಎರಡು ತಿಂಗಳಿನಿಂದ ಸಂಗೀತ ಕಾರಂಜಿಯಿಂದ ಸಂಗೀತವೂ ಹೊರಹೊಮ್ಮುತ್ತಿಲ್ಲ, ಕಾರಂಜಿಯೂ ಇಲ್ಲ. ತೋಟಗಾರಿಕಾ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ಉದ್ಯಾನವು ಸೂಕ್ತ ನಿರ್ವಹಣೆಯಿಲ್ಲದೇ ಸೊರಗಿದೆ. <br /> <br /> ಪ್ರವಾಸಿಗರ ಪ್ರಮುಖ ಆಕರ್ಷಣೀಯವಾಗಿದ್ದ ಸಂಗೀತ ಕಾರಂಜಿ ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಣ ತೆತ್ತು ಉದ್ಯಾನದ ಒಳಗೆ ಬರುವ ಪ್ರವಾಸಿಗರು ನಿರಾಶೆಯಿಂದಲೇ ಮರಳುವಂತಾಗುತ್ತಿದೆ. ಪ್ರವಾಸೋದ್ಯಮ ರಂಗದಲ್ಲಿ ಕೊಡಗು ಜಿಲ್ಲೆಗೆ ಇರುವ ಹೆಸರಿಗೆ ಇದು ಕಳಂಕ ಮೂಡಿಸದೇ ಇರದು.<br /> <br /> ಮೇಲಿಂದ ಮೇಲೆ ರಿಪೇರಿ<br /> ಏಪ್ರಿಲ್ ತಿಂಗಳಿನಲ್ಲಿಯೂ ಸಂಗೀತ ಕಾರಂಜಿ ಸ್ತಬ್ಧವಾಗಿದ್ದ ಸಂದರ್ಭದಲ್ಲಿ ಅದರ ರಿಪೇರಿಗೆಂದು ಸ್ಪಂದಿಸಿದ ಈ ಉದ್ಯಾನದ ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಅವರು ತಾತ್ಕಾಲಿಕ ರಿಪೇರಿಗೆಂದು ಹಣ ಬಿಡುಗಡೆ ಮಾಡಿದ್ದರು.<br /> <br /> ಇದಾದ ಕೆಲದಿನಗಳ ನಂತರ ಪುನಃ ಸಂಗೀತ ಕಾರಂಜಿ ಬಂದ್ ಆಗಿದೆ. ಮುಖ್ಯವಾಗಿ ಇದರ ನಿರ್ವಹಣೆಗೆ ವಿಶೇಷ ಪರಿಣತರ ಅಗತ್ಯವಿದೆ. ಧ್ವನಿ, ಬೆಳಕು ಹಾಗೂ ನೀರಿನ ಕಾರಂಜಿಯನ್ನು ನಿಭಾಯಿಸಬಲ್ಲವರು ಕಷ್ಟದಲ್ಲಿ ದೊರೆಯುತ್ತಿದ್ದಾರೆ. ಹೀಗಾಗಿ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ ಎಂದು ಉದ್ಯಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಹೇಳಿದರು.<br /> <br /> <strong>ಸಮಿತಿಯೇ ಇಲ್ಲ</strong><br /> ಇದುವರೆಗೆ ರಾಜಾಸೀಟ್ ಉದ್ಯಾನವನ್ನು ನಿರ್ವಹಿಸಲು ಉದ್ಯಾನ ಸಮಿತಿಯೇ ರಚನೆಯಾಗಿಲ್ಲ. ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಬೇಕೆಂದು ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಇದುವರೆಗೆ ಇದು ಸಾಧ್ಯವಾಗಿಲ್ಲ. ಹೀಗಾಗಿ ಉದ್ಯಾನದ ನಿರ್ವಹಣೆ ನಿರ್ಲಕ್ಷಕ್ಕೆ ಒಳಗಾಗಿದೆ.<br /> <br /> ಕೆಲವು ವರ್ಷಗಳ ಹಿಂದೆ ಸ್ಥಳೀಯ ನಾಗರಿಕರೇ ಸೇರಿಕೊಂಡು ಸಮಿತಿಯೊಂದನ್ನು ರಚಿಸಿಕೊಂಡಿದ್ದರು. ಅದೀಗ ಅಸ್ತಿತ್ವದಲ್ಲಿಲ್ಲ. ಇತ್ತ ತೋಟಗಾರಿಕಾ ಇಲಾಖೆಯವರು ಕೈಚೆಲ್ಲಿ ಕೂತಿದ್ದಾರೆ. ಹೀಗಾಗಿ ಸಂಗೀತ ಕಾರಂಜಿಯಿಂದ ಪುನಃ ಯಾವಾಗ ಸಂಗೀತ ಹಾಗೂ ನೀರಿನ ಕಾರಂಜಿ ಪುಟಿದೇಳುವುದು ಎನ್ನುವುದು ಇಲ್ಲಿನ ಸಾರ್ವಜನಿಕರ ಪ್ರಶ್ನೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ: </strong>ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿಗರ ಅಚ್ಚುಮೆಚ್ಚಿನ ಹತ್ತು ಹಲವು ಸ್ಥಳಗಳಿವೆ. ಇದರಲ್ಲಿ ರಾಜಾಸೀಟ್ ಪಾರ್ಕ್ ಕೂಡ ಒಂದಾಗಿದೆ. ಈ ಸ್ಥಳದಿಂದ ರಮಣೀಯ ನಿಸರ್ಗ ಸೌಂದರ್ಯವನ್ನು ಸವಿಯಬಹುದಾಗಿದೆ. ಇದರ ಜೊತೆ ಇಲ್ಲಿರುವ ಸಂಗೀತ ಕಾರಂಜಿ ಹಲವು ವರ್ಷಗಳಿಂದ ಆಕರ್ಷಣೀಯ ಪ್ರಮುಖ ಸ್ಥಳವಾಗಿತ್ತು.<br /> <br /> ಆದರೆ, ಕಳೆದ ಎರಡು ತಿಂಗಳಿನಿಂದ ಸಂಗೀತ ಕಾರಂಜಿಯಿಂದ ಸಂಗೀತವೂ ಹೊರಹೊಮ್ಮುತ್ತಿಲ್ಲ, ಕಾರಂಜಿಯೂ ಇಲ್ಲ. ತೋಟಗಾರಿಕಾ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ಉದ್ಯಾನವು ಸೂಕ್ತ ನಿರ್ವಹಣೆಯಿಲ್ಲದೇ ಸೊರಗಿದೆ. <br /> <br /> ಪ್ರವಾಸಿಗರ ಪ್ರಮುಖ ಆಕರ್ಷಣೀಯವಾಗಿದ್ದ ಸಂಗೀತ ಕಾರಂಜಿ ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಣ ತೆತ್ತು ಉದ್ಯಾನದ ಒಳಗೆ ಬರುವ ಪ್ರವಾಸಿಗರು ನಿರಾಶೆಯಿಂದಲೇ ಮರಳುವಂತಾಗುತ್ತಿದೆ. ಪ್ರವಾಸೋದ್ಯಮ ರಂಗದಲ್ಲಿ ಕೊಡಗು ಜಿಲ್ಲೆಗೆ ಇರುವ ಹೆಸರಿಗೆ ಇದು ಕಳಂಕ ಮೂಡಿಸದೇ ಇರದು.<br /> <br /> ಮೇಲಿಂದ ಮೇಲೆ ರಿಪೇರಿ<br /> ಏಪ್ರಿಲ್ ತಿಂಗಳಿನಲ್ಲಿಯೂ ಸಂಗೀತ ಕಾರಂಜಿ ಸ್ತಬ್ಧವಾಗಿದ್ದ ಸಂದರ್ಭದಲ್ಲಿ ಅದರ ರಿಪೇರಿಗೆಂದು ಸ್ಪಂದಿಸಿದ ಈ ಉದ್ಯಾನದ ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಅವರು ತಾತ್ಕಾಲಿಕ ರಿಪೇರಿಗೆಂದು ಹಣ ಬಿಡುಗಡೆ ಮಾಡಿದ್ದರು.<br /> <br /> ಇದಾದ ಕೆಲದಿನಗಳ ನಂತರ ಪುನಃ ಸಂಗೀತ ಕಾರಂಜಿ ಬಂದ್ ಆಗಿದೆ. ಮುಖ್ಯವಾಗಿ ಇದರ ನಿರ್ವಹಣೆಗೆ ವಿಶೇಷ ಪರಿಣತರ ಅಗತ್ಯವಿದೆ. ಧ್ವನಿ, ಬೆಳಕು ಹಾಗೂ ನೀರಿನ ಕಾರಂಜಿಯನ್ನು ನಿಭಾಯಿಸಬಲ್ಲವರು ಕಷ್ಟದಲ್ಲಿ ದೊರೆಯುತ್ತಿದ್ದಾರೆ. ಹೀಗಾಗಿ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ ಎಂದು ಉದ್ಯಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಹೇಳಿದರು.<br /> <br /> <strong>ಸಮಿತಿಯೇ ಇಲ್ಲ</strong><br /> ಇದುವರೆಗೆ ರಾಜಾಸೀಟ್ ಉದ್ಯಾನವನ್ನು ನಿರ್ವಹಿಸಲು ಉದ್ಯಾನ ಸಮಿತಿಯೇ ರಚನೆಯಾಗಿಲ್ಲ. ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಬೇಕೆಂದು ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಇದುವರೆಗೆ ಇದು ಸಾಧ್ಯವಾಗಿಲ್ಲ. ಹೀಗಾಗಿ ಉದ್ಯಾನದ ನಿರ್ವಹಣೆ ನಿರ್ಲಕ್ಷಕ್ಕೆ ಒಳಗಾಗಿದೆ.<br /> <br /> ಕೆಲವು ವರ್ಷಗಳ ಹಿಂದೆ ಸ್ಥಳೀಯ ನಾಗರಿಕರೇ ಸೇರಿಕೊಂಡು ಸಮಿತಿಯೊಂದನ್ನು ರಚಿಸಿಕೊಂಡಿದ್ದರು. ಅದೀಗ ಅಸ್ತಿತ್ವದಲ್ಲಿಲ್ಲ. ಇತ್ತ ತೋಟಗಾರಿಕಾ ಇಲಾಖೆಯವರು ಕೈಚೆಲ್ಲಿ ಕೂತಿದ್ದಾರೆ. ಹೀಗಾಗಿ ಸಂಗೀತ ಕಾರಂಜಿಯಿಂದ ಪುನಃ ಯಾವಾಗ ಸಂಗೀತ ಹಾಗೂ ನೀರಿನ ಕಾರಂಜಿ ಪುಟಿದೇಳುವುದು ಎನ್ನುವುದು ಇಲ್ಲಿನ ಸಾರ್ವಜನಿಕರ ಪ್ರಶ್ನೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>