<p>ಮಡಿಕೇರಿ: ಯಶಸ್ವಿನಿ ಯೋಜನೆಯು ರಾಜ್ಯದ ಗ್ರಾಮೀಣ ಸಹಕಾರಿ ರೈತ ಸದಸ್ಯರು, ಸ್ವಸಹಾಯ ಗುಂಪುಗಳ ಸದಸ್ಯರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗಾಗಿಯೇ ರೂಪುಗೊಂಡಿರುವ ಒಂದು ಸ್ವಯಂ ನಿಧಿ ಶಸ್ತ್ರಚಿಕಿತ್ಸಾ ಯೋಜನೆಯಾಗಿದೆ. <br /> <br /> ಈ ಯೋಜನೆಯನ್ನು ರಾಷ್ಟ್ರದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. 2003-04ನೇ ಸಾಲಿನಿಂದ ಈ ಯೋಜನೆ ಕಾರ್ಯ ರೂಪಕ್ಕೆ ಬಂದಿದ್ದು, ಕಳೆದ ಎಂಟು ವರ್ಷಗಳಿಂದಲೂ ಯಶಸ್ವಿಯಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿದ 6 ತಿಂಗಳ ನಂತರ ಮುಖ್ಯ ಸದಸ್ಯ ಮತ್ತು ಅವನ ಕುಟುಂಬದ ಅವಲಂಬಿತ ಎಲ್ಲ ಸದಸ್ಯರು ಅವರ ಸಹಕಾರ ಸಂಘಗಳಲ್ಲಿ ನಿಗದಿತ ವಂತಿಗೆಯನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು. <br /> <br /> ಈ ಯೋಜನೆಯಲ್ಲಿ ಸುಮಾರು 1,608 ವಿವಿಧ ಕಾಯಿಲೆಗಳಿಗೆ ರಾಜ್ಯದ ಸುಮಾರು 5,00 ಅಂಗೀಕೃತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ. ಈ ಯೋಜನೆಯ ನೇರ ಜವಾಬ್ದಾರಿ ಬೆಂಗಳೂರಿನ ಯಶಸ್ವಿನಿ ಆರೋಗ್ಯ ಟ್ರಸ್ಟ್ಗೆ ಸೇರಿದೆ. ಈ ಯೋಜನೆಯಲ್ಲಿ ನೋಂದಣಿಯಾಗಲು ಗರಿಷ್ಠ ವಯೋಮಿತಿ 75 ವರ್ಷ. 50 ವರ್ಷ ಮೀರಿದ ಸ್ತ್ರೀಯರಿಗೆ ಗರ್ಭಕೋಶ ಚಿಕಿತ್ಸೆ ಪಡೆಯಲು ಅವಕಾಶವಿದೆ. ಕೊಡಗು ಜಿಲ್ಲೆಯಲ್ಲಿ ವೈವಸ್ ಆಸ್ಪತ್ರೆ, ಮಡಿಕೇರಿ, ಆತ್ರೇಯ ಆಸ್ಪತ್ರೆ, ವಿರಾಜಪೇಟೆ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ 2011-12ನೇ ಸಾಲಿನಿಂದ ಅಮ್ಮತ್ತಿಯ ಆರ್ಐಎಚ್ಪಿ ಆಸ್ಪತ್ರೆ, ಗೋಣಿಕೊಪ್ಪಲಿನ ಲೈಫ್ ಲೈನ್ ಆಸ್ಪತ್ರೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ.<br /> <br /> 2010-11ನೇ ಸಾಲಿಗೆ ರಾಜ್ಯದ ವಿವಿಧ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಕೊಡಗು ಜಿಲ್ಲೆಯ 5,55 ಜನ ಫಲಾನುಭವಿಗಳು ರೂ. 58.31 ಲಕ್ಷ ಮೊತ್ತದ ಚಿಕಿತ್ಸಾ ಸೌಲಭ್ಯ ಪಡೆದಿದ್ದಾರೆ. 2011-12ನೇ ಸಾಲಿನಲ್ಲಿ ಒಟ್ಟು 313 ಫಲಾನುಭವಿಗಳು ಒಳರೋಗಿಗಳಾಗಿ ಒಟ್ಟು ರೂ. 34.59 ಲಕ್ಷ ಮೊತ್ತದ ಚಿಕಿತ್ಸೆ ಪಡೆದಿದ್ದಾರೆ. 2011-12ನೇ ಸಾಲಿಗೆ ಈ ಯೋಜನೆಯಡಿಯಲ್ಲಿ ಒಟ್ಟು 52,397 ಜನ ಸದಸ್ಯರನ್ನು ನೋಂದಾಯಿಸಿದ್ದು, ರೂ. 78.15 ಲಕ್ಷ ವಂತಿಗೆ ಸಂಗ್ರಹಿಸಲಾಗಿದೆ. ಈ ಪೈಕಿ 1,536 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರು, 2,653 ಅಲ್ಪಸಂಖ್ಯಾತರು ಇದ್ದಾರೆ.<br /> <br /> ಈ ಯೋಜನೆಯಲ್ಲಿ ನೋಂದಣಿಯಾದ ಅರ್ಹ ಸದಸ್ಯರು ಸಂಬಂಧಿಸಿದ ಸಂಘಗಳಲ್ಲಿ ನೋಂದಣಿಯಾಗಿ ಪಡೆದಿರುವ ದಾಖಲಾತಿಗಳೊಂದಿಗೆ ರಾಜ್ಯದ ಯಾವುದೇ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ. ಸಹಕಾರ ಇಲಾಖೆ ಉಪ ನಿಬಂಧಕ ವೆಂಕಟಸ್ವಾಮಿ ಅಥವಾ ಕಚೇರಿಯಿಂದ ಹೆಚ್ಚಿನ ಮಾಹಿತಿ ಪಡೆಯಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಯಶಸ್ವಿನಿ ಯೋಜನೆಯು ರಾಜ್ಯದ ಗ್ರಾಮೀಣ ಸಹಕಾರಿ ರೈತ ಸದಸ್ಯರು, ಸ್ವಸಹಾಯ ಗುಂಪುಗಳ ಸದಸ್ಯರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗಾಗಿಯೇ ರೂಪುಗೊಂಡಿರುವ ಒಂದು ಸ್ವಯಂ ನಿಧಿ ಶಸ್ತ್ರಚಿಕಿತ್ಸಾ ಯೋಜನೆಯಾಗಿದೆ. <br /> <br /> ಈ ಯೋಜನೆಯನ್ನು ರಾಷ್ಟ್ರದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. 2003-04ನೇ ಸಾಲಿನಿಂದ ಈ ಯೋಜನೆ ಕಾರ್ಯ ರೂಪಕ್ಕೆ ಬಂದಿದ್ದು, ಕಳೆದ ಎಂಟು ವರ್ಷಗಳಿಂದಲೂ ಯಶಸ್ವಿಯಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿದ 6 ತಿಂಗಳ ನಂತರ ಮುಖ್ಯ ಸದಸ್ಯ ಮತ್ತು ಅವನ ಕುಟುಂಬದ ಅವಲಂಬಿತ ಎಲ್ಲ ಸದಸ್ಯರು ಅವರ ಸಹಕಾರ ಸಂಘಗಳಲ್ಲಿ ನಿಗದಿತ ವಂತಿಗೆಯನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು. <br /> <br /> ಈ ಯೋಜನೆಯಲ್ಲಿ ಸುಮಾರು 1,608 ವಿವಿಧ ಕಾಯಿಲೆಗಳಿಗೆ ರಾಜ್ಯದ ಸುಮಾರು 5,00 ಅಂಗೀಕೃತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ. ಈ ಯೋಜನೆಯ ನೇರ ಜವಾಬ್ದಾರಿ ಬೆಂಗಳೂರಿನ ಯಶಸ್ವಿನಿ ಆರೋಗ್ಯ ಟ್ರಸ್ಟ್ಗೆ ಸೇರಿದೆ. ಈ ಯೋಜನೆಯಲ್ಲಿ ನೋಂದಣಿಯಾಗಲು ಗರಿಷ್ಠ ವಯೋಮಿತಿ 75 ವರ್ಷ. 50 ವರ್ಷ ಮೀರಿದ ಸ್ತ್ರೀಯರಿಗೆ ಗರ್ಭಕೋಶ ಚಿಕಿತ್ಸೆ ಪಡೆಯಲು ಅವಕಾಶವಿದೆ. ಕೊಡಗು ಜಿಲ್ಲೆಯಲ್ಲಿ ವೈವಸ್ ಆಸ್ಪತ್ರೆ, ಮಡಿಕೇರಿ, ಆತ್ರೇಯ ಆಸ್ಪತ್ರೆ, ವಿರಾಜಪೇಟೆ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ 2011-12ನೇ ಸಾಲಿನಿಂದ ಅಮ್ಮತ್ತಿಯ ಆರ್ಐಎಚ್ಪಿ ಆಸ್ಪತ್ರೆ, ಗೋಣಿಕೊಪ್ಪಲಿನ ಲೈಫ್ ಲೈನ್ ಆಸ್ಪತ್ರೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ.<br /> <br /> 2010-11ನೇ ಸಾಲಿಗೆ ರಾಜ್ಯದ ವಿವಿಧ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಕೊಡಗು ಜಿಲ್ಲೆಯ 5,55 ಜನ ಫಲಾನುಭವಿಗಳು ರೂ. 58.31 ಲಕ್ಷ ಮೊತ್ತದ ಚಿಕಿತ್ಸಾ ಸೌಲಭ್ಯ ಪಡೆದಿದ್ದಾರೆ. 2011-12ನೇ ಸಾಲಿನಲ್ಲಿ ಒಟ್ಟು 313 ಫಲಾನುಭವಿಗಳು ಒಳರೋಗಿಗಳಾಗಿ ಒಟ್ಟು ರೂ. 34.59 ಲಕ್ಷ ಮೊತ್ತದ ಚಿಕಿತ್ಸೆ ಪಡೆದಿದ್ದಾರೆ. 2011-12ನೇ ಸಾಲಿಗೆ ಈ ಯೋಜನೆಯಡಿಯಲ್ಲಿ ಒಟ್ಟು 52,397 ಜನ ಸದಸ್ಯರನ್ನು ನೋಂದಾಯಿಸಿದ್ದು, ರೂ. 78.15 ಲಕ್ಷ ವಂತಿಗೆ ಸಂಗ್ರಹಿಸಲಾಗಿದೆ. ಈ ಪೈಕಿ 1,536 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರು, 2,653 ಅಲ್ಪಸಂಖ್ಯಾತರು ಇದ್ದಾರೆ.<br /> <br /> ಈ ಯೋಜನೆಯಲ್ಲಿ ನೋಂದಣಿಯಾದ ಅರ್ಹ ಸದಸ್ಯರು ಸಂಬಂಧಿಸಿದ ಸಂಘಗಳಲ್ಲಿ ನೋಂದಣಿಯಾಗಿ ಪಡೆದಿರುವ ದಾಖಲಾತಿಗಳೊಂದಿಗೆ ರಾಜ್ಯದ ಯಾವುದೇ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ. ಸಹಕಾರ ಇಲಾಖೆ ಉಪ ನಿಬಂಧಕ ವೆಂಕಟಸ್ವಾಮಿ ಅಥವಾ ಕಚೇರಿಯಿಂದ ಹೆಚ್ಚಿನ ಮಾಹಿತಿ ಪಡೆಯಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>