<p>ಮೈಸೂರು: ಪ್ರತಿ ತಿಂಗಳ ಮೂರನೇ ಗುರುವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಕುಂದುಕೊರತೆ ವಿಚಾರಣೆ ಮತ್ತು ಫೋನ್ ಇನ್ ಕಾರ್ಯಕ್ರಮದಲ್ಲಿ ಈ ಬಾರಿ ಕುಂದು ಕೊರತೆಗಳು ಕಾಡಿದವು!<br /> <br /> ಕಾರ್ಯಕ್ರಮದ ಆರಂಭದಲ್ಲಿಯೇ ಅತಿ ಮುಖ್ಯವಾಗಿ ಫೋನ್ ಕೈಕೊಟ್ಟರೆ, ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಜಿಲ್ಲಾಧಿಕಾರಿಗಳು ಅಹವಾಲಿನ ಕರೆಗಳನ್ನು ಸ್ವೀಕರಿಸಲು ಆರಂಭಿಸಿದಾಗ, ಸರ್ಕಾರಿ ಇಲಾಖೆಗಳ ನೌಕರರಿಂದಲೇ ಹಲವು ಕರೆಗಳು ಬಂದವು.<br /> <br /> ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಬೆಳಿಗ್ಗೆ ಬಂದ ಮೊದಲ ಕರೆಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ. ಶಿಖಾ ಅವರು ಮಾತನಾಡಿದ್ದು ಆ ಬದಿಯ ವ್ಯಕ್ತಿಗೆ ಕೇಳಿಸದೇ ತೊಂದರೆಯಾಯಿತು. ‘ಹಲೋ ನಮಸ್ಕಾರ ನಾನು ಡಿಸಿ ಮಾತನಾಡ್ತೇನೆ, ನಿಮ್ಮ ಸಮಸ್ಯೆ ಕುರಿತು ಹೇಳಿ’ ಎಂದು ಆತ್ಮೀಯವಾಗಿ ವಿಚಾರಿಸಿದ್ದು, ತಾಂತ್ರಿಕ ದೋಷದ ಕಾರಣ ಆ ಬದಿಯವರಿಗೆ ಕೇಳಿಸಲಿಲ್ಲ.<br /> <br /> ಆಗ ಡಿಸಿಯವರೇ ಸ್ಥಳ ಬದಲಿಸಬೇಕಾಯಿತು. ಪ್ರತಿ ಕಾರ್ಯಕ್ರಮದಲ್ಲಿಯೂ ಡಿಸಿ ಕಚೇರಿಯ ತಹಶೀಲ್ದಾರ ರಂಗನಾಥ್, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರು, ದೂರು ದಾಖಲೆ ಸಿಬ್ಬಂದಿ ಕುಳಿತುಕೊಳ್ಳುವ ಸ್ಥಳವೇ ಈ ಬಾರಿ ಫೋನ್ ಇನ್ ನೇರ ಕಾರ್ಯಕ್ರಮಕ್ಕೆ ಬಳಕೆಯಾಯಿತು. ಇಲ್ಲಿಂದಲೇ ಫೋನ್ ಮೂಲಕ ಜನರ ಅಹವಾಲು ಸ್ವೀಕರಿಸಿದರು.<br /> <br /> ಸರ್ಕಾರಿ ನೌಕರರ ಅಹವಾಲು: ಜಮೀನು ತಕರಾರು, ವಿದ್ಯುತ್, ಒತ್ತುವರಿ ಸಮಸ್ಯೆಗಳ ಕುರಿತು ನಿರಂತರವಾಗಿ ಬಂದ ಕರೆಗಳ ನಡುವೆ ಎರಡು ಕರೆಗಳ ಗಮನ ಸೆಳೆದವು.<br /> <br /> ಅದರಲ್ಲಿ ಒಂದು ಕೃಷಿ ಇಲಾಖೆಯ ನೌಕರ ಮತ್ತು ಇನ್ನೊಂದು ಶಿಕ್ಷಕಿಯಿಂದ ಬಂದ ಕರೆಗಳಾಗಿದ್ವವು. ನಂಜನಗೂಡಿನ ಕೃಷಿ ಇಲಾಖೆಯ ನೌಕರರಿಗೆ ಸಂಬಳ ಬಂದಿಲ್ಲ ಎಂಬ ದೂರು ಆಲಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಅವರನ್ನು ವಿಚಾರಿಸಿದರು.<br /> <br /> ‘ಜಿಲ್ಲಾ ಪಂಚಾಯಿತಿಯಿಂದ ಹಣ ಬಿಡುಗಡೆಯಾಗಿದೆಯೇ ಎಂಬುದನ್ನು ಪರಿಶೀಲಿಸಿ. ಸರ್ಕಾರಿ ನೌಕರರು ಸಾರ್ವಜನಿಕ ಕುಂದುಕೊರತೆ ಕಾರ್ಯಕ್ರಮದಲ್ಲಿ ದೂರು ನೀಡುತ್ತಾರೆ ಎಂದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ನೌಕರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೇ? ಇಂತಹ ಸಣ್ಣಪುಟ್ಟ ತೊಂದರೆಗಳನ್ನು ಇಲಾಖಾಮಟ್ಟದಲ್ಲಿಯೇ ಪರಿಹರಿಸ ಬೇಕು’ ಎಂದು ಹೇಳಿದರು.<br /> <br /> ತದನಂತರವೂ ಸರ್ಕಾರಿ ಶಾಲೆಯ ಶಿಕ್ಷಕಿ ವಿಜಯಲಕ್ಷ್ಮೀ ಅವರು ತಿ. ನರಸೀಪುರದಿಂದ ಕರೆ ಮಾಡಿ, ‘ನನ್ನ ಪತಿ ಡಿ. ಗುಂಪಿನ ನೌಕರರಾಗಿದ್ದಾರೆ. ಅವರ ಎರಡೂ ಮೂತ್ರಪಿಂಡಗಳು ಅನಾರೋಗ್ಯಕ್ಕೆ ತುತ್ತಾಗಿವೆ. ಇಲಾಖೆಯಿಂದ ವೈದ್ಯಕೀಯ ಮುಂಗಡ ಕೋರಿದ್ದೇನೆ.<br /> <br /> ಆದರೆ, ಸಾಕಷ್ಟು ಕಾಲ ಕಳೆದರೂ ಮಂಜೂರಾಗಿಲ್ಲ’ ಎಂದು ದೂರಿದರು. ಕೂಡಲೇ ಸ್ಪಂದಿಸಿದ ಡಿಸಿ ಶಿಖಾ, ‘ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪರಿಶೀಲನೆ ನಡೆಸಿ, ಕೂಡಲೇ ಮುಂಗಡ ಮಂಜೂರು ಮಾಡಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.<br /> <br /> ಅಕ್ರಮ ಗಣಿಗಾರಿಕೆ: ಹೆಗ್ಗಡದೇವನಕೋಟೆ ತಾಲ್ಲೂಕಿನ ಕೊಡಚಿ ಗ್ರಾಮದ ಸಮೀಪ ನಡೆಯುತ್ತಿದೆ ಎನ್ನಲಾದ ಅಕ್ರಮ ಕಲ್ಲು ಗಣಿಗಾರಿಕೆಯ ಕುರಿತು ಎಂ. ಡಿ. ಕುಮಾರಸ್ವಾಮಿ ಅವರ ದೂರು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಗಣಿಗಾರಿಕೆ ನಿರ್ಬಂಧಿಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಪ್ರತಿ ತಿಂಗಳ ಮೂರನೇ ಗುರುವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಕುಂದುಕೊರತೆ ವಿಚಾರಣೆ ಮತ್ತು ಫೋನ್ ಇನ್ ಕಾರ್ಯಕ್ರಮದಲ್ಲಿ ಈ ಬಾರಿ ಕುಂದು ಕೊರತೆಗಳು ಕಾಡಿದವು!<br /> <br /> ಕಾರ್ಯಕ್ರಮದ ಆರಂಭದಲ್ಲಿಯೇ ಅತಿ ಮುಖ್ಯವಾಗಿ ಫೋನ್ ಕೈಕೊಟ್ಟರೆ, ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಜಿಲ್ಲಾಧಿಕಾರಿಗಳು ಅಹವಾಲಿನ ಕರೆಗಳನ್ನು ಸ್ವೀಕರಿಸಲು ಆರಂಭಿಸಿದಾಗ, ಸರ್ಕಾರಿ ಇಲಾಖೆಗಳ ನೌಕರರಿಂದಲೇ ಹಲವು ಕರೆಗಳು ಬಂದವು.<br /> <br /> ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಬೆಳಿಗ್ಗೆ ಬಂದ ಮೊದಲ ಕರೆಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ. ಶಿಖಾ ಅವರು ಮಾತನಾಡಿದ್ದು ಆ ಬದಿಯ ವ್ಯಕ್ತಿಗೆ ಕೇಳಿಸದೇ ತೊಂದರೆಯಾಯಿತು. ‘ಹಲೋ ನಮಸ್ಕಾರ ನಾನು ಡಿಸಿ ಮಾತನಾಡ್ತೇನೆ, ನಿಮ್ಮ ಸಮಸ್ಯೆ ಕುರಿತು ಹೇಳಿ’ ಎಂದು ಆತ್ಮೀಯವಾಗಿ ವಿಚಾರಿಸಿದ್ದು, ತಾಂತ್ರಿಕ ದೋಷದ ಕಾರಣ ಆ ಬದಿಯವರಿಗೆ ಕೇಳಿಸಲಿಲ್ಲ.<br /> <br /> ಆಗ ಡಿಸಿಯವರೇ ಸ್ಥಳ ಬದಲಿಸಬೇಕಾಯಿತು. ಪ್ರತಿ ಕಾರ್ಯಕ್ರಮದಲ್ಲಿಯೂ ಡಿಸಿ ಕಚೇರಿಯ ತಹಶೀಲ್ದಾರ ರಂಗನಾಥ್, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರು, ದೂರು ದಾಖಲೆ ಸಿಬ್ಬಂದಿ ಕುಳಿತುಕೊಳ್ಳುವ ಸ್ಥಳವೇ ಈ ಬಾರಿ ಫೋನ್ ಇನ್ ನೇರ ಕಾರ್ಯಕ್ರಮಕ್ಕೆ ಬಳಕೆಯಾಯಿತು. ಇಲ್ಲಿಂದಲೇ ಫೋನ್ ಮೂಲಕ ಜನರ ಅಹವಾಲು ಸ್ವೀಕರಿಸಿದರು.<br /> <br /> ಸರ್ಕಾರಿ ನೌಕರರ ಅಹವಾಲು: ಜಮೀನು ತಕರಾರು, ವಿದ್ಯುತ್, ಒತ್ತುವರಿ ಸಮಸ್ಯೆಗಳ ಕುರಿತು ನಿರಂತರವಾಗಿ ಬಂದ ಕರೆಗಳ ನಡುವೆ ಎರಡು ಕರೆಗಳ ಗಮನ ಸೆಳೆದವು.<br /> <br /> ಅದರಲ್ಲಿ ಒಂದು ಕೃಷಿ ಇಲಾಖೆಯ ನೌಕರ ಮತ್ತು ಇನ್ನೊಂದು ಶಿಕ್ಷಕಿಯಿಂದ ಬಂದ ಕರೆಗಳಾಗಿದ್ವವು. ನಂಜನಗೂಡಿನ ಕೃಷಿ ಇಲಾಖೆಯ ನೌಕರರಿಗೆ ಸಂಬಳ ಬಂದಿಲ್ಲ ಎಂಬ ದೂರು ಆಲಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಅವರನ್ನು ವಿಚಾರಿಸಿದರು.<br /> <br /> ‘ಜಿಲ್ಲಾ ಪಂಚಾಯಿತಿಯಿಂದ ಹಣ ಬಿಡುಗಡೆಯಾಗಿದೆಯೇ ಎಂಬುದನ್ನು ಪರಿಶೀಲಿಸಿ. ಸರ್ಕಾರಿ ನೌಕರರು ಸಾರ್ವಜನಿಕ ಕುಂದುಕೊರತೆ ಕಾರ್ಯಕ್ರಮದಲ್ಲಿ ದೂರು ನೀಡುತ್ತಾರೆ ಎಂದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ನೌಕರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೇ? ಇಂತಹ ಸಣ್ಣಪುಟ್ಟ ತೊಂದರೆಗಳನ್ನು ಇಲಾಖಾಮಟ್ಟದಲ್ಲಿಯೇ ಪರಿಹರಿಸ ಬೇಕು’ ಎಂದು ಹೇಳಿದರು.<br /> <br /> ತದನಂತರವೂ ಸರ್ಕಾರಿ ಶಾಲೆಯ ಶಿಕ್ಷಕಿ ವಿಜಯಲಕ್ಷ್ಮೀ ಅವರು ತಿ. ನರಸೀಪುರದಿಂದ ಕರೆ ಮಾಡಿ, ‘ನನ್ನ ಪತಿ ಡಿ. ಗುಂಪಿನ ನೌಕರರಾಗಿದ್ದಾರೆ. ಅವರ ಎರಡೂ ಮೂತ್ರಪಿಂಡಗಳು ಅನಾರೋಗ್ಯಕ್ಕೆ ತುತ್ತಾಗಿವೆ. ಇಲಾಖೆಯಿಂದ ವೈದ್ಯಕೀಯ ಮುಂಗಡ ಕೋರಿದ್ದೇನೆ.<br /> <br /> ಆದರೆ, ಸಾಕಷ್ಟು ಕಾಲ ಕಳೆದರೂ ಮಂಜೂರಾಗಿಲ್ಲ’ ಎಂದು ದೂರಿದರು. ಕೂಡಲೇ ಸ್ಪಂದಿಸಿದ ಡಿಸಿ ಶಿಖಾ, ‘ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪರಿಶೀಲನೆ ನಡೆಸಿ, ಕೂಡಲೇ ಮುಂಗಡ ಮಂಜೂರು ಮಾಡಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.<br /> <br /> ಅಕ್ರಮ ಗಣಿಗಾರಿಕೆ: ಹೆಗ್ಗಡದೇವನಕೋಟೆ ತಾಲ್ಲೂಕಿನ ಕೊಡಚಿ ಗ್ರಾಮದ ಸಮೀಪ ನಡೆಯುತ್ತಿದೆ ಎನ್ನಲಾದ ಅಕ್ರಮ ಕಲ್ಲು ಗಣಿಗಾರಿಕೆಯ ಕುರಿತು ಎಂ. ಡಿ. ಕುಮಾರಸ್ವಾಮಿ ಅವರ ದೂರು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಗಣಿಗಾರಿಕೆ ನಿರ್ಬಂಧಿಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>