<p>ನಾಪೋಕ್ಲು: ಕಾಫಿ ಜೊತೆಗೆ ಉಪ ಉತ್ಪನ್ನವಾದ ಕಾಳು ಮೆಣಸು ಕೂಡಾ ಉದುರ ತೊಡಗಿದೆ. ಸೊರಗು ರೋಗಕ್ಕೆ ತುತ್ತಾದ ಬಳ್ಳಿಗಳು ಇದೀಗ ಮಳೆ ಕಡಿಮೆಯಾಗಿ ಬಿಸಿಲು ಕಾಯುತ್ತಿರುವಂತೆ ಅರಿಶಿಣ ಬಣ್ಣಕ್ಕೆ ತಿರುಗುತ್ತಿದ್ದು, ಬಳ್ಳಿಗಳಿಂದ ಫಸಲು ಅಧಿಕ ಪ್ರಮಾಣದಲ್ಲಿ ಉದುರತೊಡಗಿದೆ. <br /> <br /> ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಳು ಮೆಣಸನ್ನು ತೋಟದ ಉಪಬೆಳೆಯಾಗಿ ಬೆಳೆಯಲಾಗುತ್ತಿದೆ. ಅಡಿಕೆ ತೋಟ ಮತ್ತು ಕಾಫಿ ತೋಟಗಳಲ್ಲಿಯೇ ರಾಜ್ಯದ ಒಟ್ಟು ಕಾಳು ಮೆಣಸಿನ ಶೇ 90ಕ್ಕೂ ಅಧಿಕ ಉತ್ಪಾದನೆಯಾಗುತ್ತಿದೆ. <br /> <br /> ಕಾಫಿ ತೋಟಗಳಲ್ಲಿ ನೆರಳಿನ ಆಶ್ರಯಕ್ಕೆಂದೇ ಬೆಳೆಸುವ ಸಿಲ್ವರ್ ಓಕ್ ಮರಗಳಿಗೆ ಹಾಗೂ ಇತರ ಮರಗಳಿಗೆ ಮೆಣಸಿನ ಬಳ್ಳಿಯನ್ನು ಹಾಗೂ ಅಡಿಕೆ ತೋಟಗಳಲ್ಲಿ ಅಡಿಕೆ ಮರಕ್ಕೆ ಹಬ್ಬಿಸಲಾಗುತ್ತದೆ. ಈ ಎರಡು ತೋಟಗಳ ಉಪಬೆಳೆಯಾಗಿ ಕಾಳು ಮೆಣಸನ್ನು ಕಡಿಮೆ ಖರ್ಚಿನಲ್ಲಿ ಬೆಳೆಸಲು ಸಾಧ್ಯವಿದೆ. ಬಳ್ಳಿಗಳು ಮೇಲೆ ಹಬ್ಬಿದಂತೆ ಕಾಳಜಿ ವಹಿಸಿದರೆ ಸಾಕು. ಪ್ರತ್ಯೇಕವಾದ ಯಾವ ಕೃಷಿಯೂ ಬೇಕಾಗಿಲ್ಲ. ಆದ್ದರಿಂದಲೇ ಕೃಷಿಕರು ಕಾಳು ಮೆಣಸು ಬೆಳೆಯುವತ್ತ ಆಸಕ್ತಿ ವಹಿಸುತ್ತಿದ್ದಾರೆ.<br /> <br /> ಆದರೆ ಬೆಳೆಗಾರರ ಆಸಕ್ತಿಗೆ ತಣ್ಣೀರೆರಚುವಂತೆ ರೋಗಗಳು ಕಾಳು ಮೆಣಸನ್ನು ಕಾಡುತ್ತಿವೆ. ನೆಟ್ಟ ಬಳ್ಳಿಗಳು ಎರಡು ಮೂರು ವರ್ಷಗಳಲ್ಲಿ ಫಸಲು ಕೊಡುವ ಮೊದಲೇ ಸೊರಗಿ ಹೋಗುತ್ತಿವೆ. ಮಳೆಗಾಲದಲ್ಲಿ ಬಳ್ಳಿಗಳಲ್ಲಿ ಕಾಣುತ್ತಿದ್ದ ಫಸಲು ಈಗ ಕಪ್ಪಾಗಿ ಬೆಳೆಯುವ ಹಂತದಲ್ಲಿ ಉದುರಿ ಹೋಗುತ್ತಿವೆ. <br /> <br /> ಹಸಿರೆಲೆಗಳು ಕಪ್ಪಾಗಿ ಫಸಲು ಇಲ್ಲದಾಗಿ ಬಳ್ಳಿ ನಾಶವಾಗುತ್ತಿದ್ದು, ಕೃಷಿಕರ ನಿದ್ದೆಗೆಡಿಸಿದೆ. ಶೀಘ್ರ ಕೊಳೆ ರೋಗ ಕರಿಮೆಣಸಿಗೆ ಬರುವ ಮುಖ್ಯವಾದ ರೋಗ. ಮಳೆಗಾಲದ ಸಮಯದಲ್ಲಿ ಪ್ರಾರಂಭವಾಗುವ ಈ ರೋಗದಲ್ಲಿ ಎಲೆಗಳ ಮೇಲೆ ಕಪ್ಪು ಚುಕ್ಕೆ ಕಂಡು ಬಂದು ನಂತರ ರೋಗ ಹರಡಿ ಎಲೆಗಳು ಪೂರ್ತಿಯಾಗಿ ಉದುರುತ್ತವೆ. ರೆಂಬೆಗಳು ಮುರಿದು ಬೀಳುತ್ತವೆ. ಈ ರೋಗದ ಹತೋಟಿಗೆ ಬೋರ್ಡೋ ದ್ರಾವಣವನ್ನು ವರ್ಷಕ್ಕೆರಡು ಬಾರಿ ಸಿಂಪಡಣೆ ಮಾಡಬೇಕು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸಲಹೆ ನೀಡುತ್ತಾರೆ.<br /> <br /> ಮಳೆ ಕಡಿಮೆಯಾಗುತ್ತಿರುವ ಈ ಅವಧಿಯಲ್ಲಿ ಅಲ್ಲಲ್ಲಿ ಕೃಷಿಕರು ಬೋರ್ಡೋ ದ್ರಾವಣ ಸಿಂಪಡಣೆ ಮಾಡುವುದರಲ್ಲಿ ನಿರತರಾಗಿರುವುದು ಕಂಡು ಬಂದಿದೆ. ಆದರೆ ಬರಿ ಬೋರ್ಡೋ ದ್ರಾವಣ ಸಿಂಪಡಣೆ ಕರಿಮೆಣಸಿಗೆ ಬರುವ ರೋಗಗಳ ನಿಯಂತ್ರಣವಾಗುತ್ತಿಲ್ಲ ಎನ್ನುತ್ತಾರೆ ರೈತರು.<br /> <br /> ಪ್ರಸಕ್ತ ವರ್ಷ ಕಾಳು ಮೆಣಸಿಗೆ ಉತ್ತಮ ದರ ಲಭಿಸುತ್ತಿದೆ. ಈಗ ಮಾರುಕಟ್ಟೆಯಲ್ಲಿ ಕಾಳು ಮೆಣಸಿಗೆ ಕೆ.ಜಿ. ಯೊಂದಕ್ಕೆ ರೂ.300 ದರ. ಉತ್ತಮ ದರವಿರುವುದರಿಂದ ಕಾಳು ಮೆಣಸಿನತ್ತ ಕೃಷಿಕರ ನಿರೀಕ್ಷೆಯೂ ಹೆಚ್ಚಾಗಿದೆ.<br /> <br /> ಈ ವರ್ಷ ಬೇಸಿಗೆಯಲ್ಲಿ ಸಕಾಲದಲ್ಲಿ ಮಳೆ ಆಗಿರುವುದರಿಂದ ಕಾಳು ಮೆಣಸಿನ ಉತ್ತಮ ಫಸಲು ನಿರೀಕ್ಷೆ ಮಾಡಲಾಗಿತ್ತು. ಅದರೆ ಮಳೆಯಿಂದಾಗಿ ಕಾಳು ಮೆಣಸಿಗೆ ಶಿಲೀಂದ್ರ ರೋಗ ಬಂದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಇದರ ತೀವ್ರತೆ ಹೆಚ್ಚಾಗಿದೆ. ಉಪಬೆಳೆಯಾಗಿ ಉತ್ತಮ ಆದಾಯ ಕೊಡುತ್ತಿದ್ದ ಕಾಳು ಮೆಣಸು ಕೂಡಾ ಕೈಕೊಡುತ್ತಿರುವುದರಿಂದ ಮಧ್ಯಮ ವರ್ಗದ ಕೃಷಿಕರು ಚಿಂತಾಕ್ರಾಂತರಾಗಿದ್ದಾರೆ. ಕೆಲವು ಭಾಗಗಳಲ್ಲಿ ಸೊರಗು ರೋಗದಿಂದಾಗಿ ಕಾಳು ಮೆಣಸಿನ ಇಳುವರಿಯಲ್ಲಿ ತೀವ್ರ ಕುಸಿತ ಕಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಪೋಕ್ಲು: ಕಾಫಿ ಜೊತೆಗೆ ಉಪ ಉತ್ಪನ್ನವಾದ ಕಾಳು ಮೆಣಸು ಕೂಡಾ ಉದುರ ತೊಡಗಿದೆ. ಸೊರಗು ರೋಗಕ್ಕೆ ತುತ್ತಾದ ಬಳ್ಳಿಗಳು ಇದೀಗ ಮಳೆ ಕಡಿಮೆಯಾಗಿ ಬಿಸಿಲು ಕಾಯುತ್ತಿರುವಂತೆ ಅರಿಶಿಣ ಬಣ್ಣಕ್ಕೆ ತಿರುಗುತ್ತಿದ್ದು, ಬಳ್ಳಿಗಳಿಂದ ಫಸಲು ಅಧಿಕ ಪ್ರಮಾಣದಲ್ಲಿ ಉದುರತೊಡಗಿದೆ. <br /> <br /> ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಳು ಮೆಣಸನ್ನು ತೋಟದ ಉಪಬೆಳೆಯಾಗಿ ಬೆಳೆಯಲಾಗುತ್ತಿದೆ. ಅಡಿಕೆ ತೋಟ ಮತ್ತು ಕಾಫಿ ತೋಟಗಳಲ್ಲಿಯೇ ರಾಜ್ಯದ ಒಟ್ಟು ಕಾಳು ಮೆಣಸಿನ ಶೇ 90ಕ್ಕೂ ಅಧಿಕ ಉತ್ಪಾದನೆಯಾಗುತ್ತಿದೆ. <br /> <br /> ಕಾಫಿ ತೋಟಗಳಲ್ಲಿ ನೆರಳಿನ ಆಶ್ರಯಕ್ಕೆಂದೇ ಬೆಳೆಸುವ ಸಿಲ್ವರ್ ಓಕ್ ಮರಗಳಿಗೆ ಹಾಗೂ ಇತರ ಮರಗಳಿಗೆ ಮೆಣಸಿನ ಬಳ್ಳಿಯನ್ನು ಹಾಗೂ ಅಡಿಕೆ ತೋಟಗಳಲ್ಲಿ ಅಡಿಕೆ ಮರಕ್ಕೆ ಹಬ್ಬಿಸಲಾಗುತ್ತದೆ. ಈ ಎರಡು ತೋಟಗಳ ಉಪಬೆಳೆಯಾಗಿ ಕಾಳು ಮೆಣಸನ್ನು ಕಡಿಮೆ ಖರ್ಚಿನಲ್ಲಿ ಬೆಳೆಸಲು ಸಾಧ್ಯವಿದೆ. ಬಳ್ಳಿಗಳು ಮೇಲೆ ಹಬ್ಬಿದಂತೆ ಕಾಳಜಿ ವಹಿಸಿದರೆ ಸಾಕು. ಪ್ರತ್ಯೇಕವಾದ ಯಾವ ಕೃಷಿಯೂ ಬೇಕಾಗಿಲ್ಲ. ಆದ್ದರಿಂದಲೇ ಕೃಷಿಕರು ಕಾಳು ಮೆಣಸು ಬೆಳೆಯುವತ್ತ ಆಸಕ್ತಿ ವಹಿಸುತ್ತಿದ್ದಾರೆ.<br /> <br /> ಆದರೆ ಬೆಳೆಗಾರರ ಆಸಕ್ತಿಗೆ ತಣ್ಣೀರೆರಚುವಂತೆ ರೋಗಗಳು ಕಾಳು ಮೆಣಸನ್ನು ಕಾಡುತ್ತಿವೆ. ನೆಟ್ಟ ಬಳ್ಳಿಗಳು ಎರಡು ಮೂರು ವರ್ಷಗಳಲ್ಲಿ ಫಸಲು ಕೊಡುವ ಮೊದಲೇ ಸೊರಗಿ ಹೋಗುತ್ತಿವೆ. ಮಳೆಗಾಲದಲ್ಲಿ ಬಳ್ಳಿಗಳಲ್ಲಿ ಕಾಣುತ್ತಿದ್ದ ಫಸಲು ಈಗ ಕಪ್ಪಾಗಿ ಬೆಳೆಯುವ ಹಂತದಲ್ಲಿ ಉದುರಿ ಹೋಗುತ್ತಿವೆ. <br /> <br /> ಹಸಿರೆಲೆಗಳು ಕಪ್ಪಾಗಿ ಫಸಲು ಇಲ್ಲದಾಗಿ ಬಳ್ಳಿ ನಾಶವಾಗುತ್ತಿದ್ದು, ಕೃಷಿಕರ ನಿದ್ದೆಗೆಡಿಸಿದೆ. ಶೀಘ್ರ ಕೊಳೆ ರೋಗ ಕರಿಮೆಣಸಿಗೆ ಬರುವ ಮುಖ್ಯವಾದ ರೋಗ. ಮಳೆಗಾಲದ ಸಮಯದಲ್ಲಿ ಪ್ರಾರಂಭವಾಗುವ ಈ ರೋಗದಲ್ಲಿ ಎಲೆಗಳ ಮೇಲೆ ಕಪ್ಪು ಚುಕ್ಕೆ ಕಂಡು ಬಂದು ನಂತರ ರೋಗ ಹರಡಿ ಎಲೆಗಳು ಪೂರ್ತಿಯಾಗಿ ಉದುರುತ್ತವೆ. ರೆಂಬೆಗಳು ಮುರಿದು ಬೀಳುತ್ತವೆ. ಈ ರೋಗದ ಹತೋಟಿಗೆ ಬೋರ್ಡೋ ದ್ರಾವಣವನ್ನು ವರ್ಷಕ್ಕೆರಡು ಬಾರಿ ಸಿಂಪಡಣೆ ಮಾಡಬೇಕು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸಲಹೆ ನೀಡುತ್ತಾರೆ.<br /> <br /> ಮಳೆ ಕಡಿಮೆಯಾಗುತ್ತಿರುವ ಈ ಅವಧಿಯಲ್ಲಿ ಅಲ್ಲಲ್ಲಿ ಕೃಷಿಕರು ಬೋರ್ಡೋ ದ್ರಾವಣ ಸಿಂಪಡಣೆ ಮಾಡುವುದರಲ್ಲಿ ನಿರತರಾಗಿರುವುದು ಕಂಡು ಬಂದಿದೆ. ಆದರೆ ಬರಿ ಬೋರ್ಡೋ ದ್ರಾವಣ ಸಿಂಪಡಣೆ ಕರಿಮೆಣಸಿಗೆ ಬರುವ ರೋಗಗಳ ನಿಯಂತ್ರಣವಾಗುತ್ತಿಲ್ಲ ಎನ್ನುತ್ತಾರೆ ರೈತರು.<br /> <br /> ಪ್ರಸಕ್ತ ವರ್ಷ ಕಾಳು ಮೆಣಸಿಗೆ ಉತ್ತಮ ದರ ಲಭಿಸುತ್ತಿದೆ. ಈಗ ಮಾರುಕಟ್ಟೆಯಲ್ಲಿ ಕಾಳು ಮೆಣಸಿಗೆ ಕೆ.ಜಿ. ಯೊಂದಕ್ಕೆ ರೂ.300 ದರ. ಉತ್ತಮ ದರವಿರುವುದರಿಂದ ಕಾಳು ಮೆಣಸಿನತ್ತ ಕೃಷಿಕರ ನಿರೀಕ್ಷೆಯೂ ಹೆಚ್ಚಾಗಿದೆ.<br /> <br /> ಈ ವರ್ಷ ಬೇಸಿಗೆಯಲ್ಲಿ ಸಕಾಲದಲ್ಲಿ ಮಳೆ ಆಗಿರುವುದರಿಂದ ಕಾಳು ಮೆಣಸಿನ ಉತ್ತಮ ಫಸಲು ನಿರೀಕ್ಷೆ ಮಾಡಲಾಗಿತ್ತು. ಅದರೆ ಮಳೆಯಿಂದಾಗಿ ಕಾಳು ಮೆಣಸಿಗೆ ಶಿಲೀಂದ್ರ ರೋಗ ಬಂದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಇದರ ತೀವ್ರತೆ ಹೆಚ್ಚಾಗಿದೆ. ಉಪಬೆಳೆಯಾಗಿ ಉತ್ತಮ ಆದಾಯ ಕೊಡುತ್ತಿದ್ದ ಕಾಳು ಮೆಣಸು ಕೂಡಾ ಕೈಕೊಡುತ್ತಿರುವುದರಿಂದ ಮಧ್ಯಮ ವರ್ಗದ ಕೃಷಿಕರು ಚಿಂತಾಕ್ರಾಂತರಾಗಿದ್ದಾರೆ. ಕೆಲವು ಭಾಗಗಳಲ್ಲಿ ಸೊರಗು ರೋಗದಿಂದಾಗಿ ಕಾಳು ಮೆಣಸಿನ ಇಳುವರಿಯಲ್ಲಿ ತೀವ್ರ ಕುಸಿತ ಕಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>