<p><strong>ಮುಳಬಾಗಿಲು:</strong> ‘ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಸಮೃದ್ಧ ಬೆಳೆ ಬೆಳೆದಿದ್ದು ರಸಗೊಬ್ಬರ ಅಭಾವ ತಲೆದೋರಿದೆ. ಟಿಎಪಿಸಿಎಂಎಸ್ನಿಂದ ವಿವಿಧ ಮಾದರಿ ರಸಗೊಬ್ಬರವನ್ನು ರೈತರಿಗೆ ನೀಡುತ್ತಿದ್ದು, ಅವಶ್ಯಕತೆ ಇರುವಷ್ಟೇ ಖರೀದಿ ಮಾಡಿದರೆ ಇತರರಿಗೆ ಅನುಕೂಲವಾಗುತ್ತದೆ’ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಕೊತ್ತೂರು ಜಿ. ಮಂಜುನಾಥ್ ತಿಳಿಸಿದರು.</p>.<p>ಟಿಎಪಿಸಿಎಂಎಸ್ ಆವರಣದಲ್ಲಿ ಗುರುವಾರ ಮಾತನಾಡಿದ ಅವರು, ಯೂರಿಯಾ ಮತ್ತು ಡಿಎಪಿ ಗೊಬ್ಬರಕ್ಕೆ ಅಭಾವ ಉಂಟಾಗಿದೆ. ಆದರೆ, ಯೂರಿಯಾ ಬೇರೆ ಕಡೆಯಿಂದ ದಾಸ್ತಾನು ತರಿಸಲಾಗಿದೆ. ಪ್ರತಿ ಕುಟುಂಬಕ್ಕೆ ಒಂದು ಆಧಾರ್ ಕಾರ್ಡ್ ಸಂಖ್ಯೆ ಪಡೆದು, ಒಬ್ಬ ರೈತನಿಗೆ 5 ಮೂಟೆ ಯೂರಿಯಾ ಖರೀದಿಗೆ ಅವಕಾಶ ಮಾಡಲಾಗಿದೆ ಎಂದುತಿಳಿಸಿದರು.</p>.<p>ಈಗಾಗಲೇ, ₹ 33 ಕೋಟಿ ನಷ್ಟದಲ್ಲಿರುವ ಕೋಚಿಮುಲ್ ಇಬ್ಭಾಗ ಮಾಡಿದರೆ ನಷ್ಟವನ್ನು ಎರಡು ಒಕ್ಕೂಟಗಳು ಸಮಪಾಲು ಮಾಡಿಕೊಳ್ಳಬೇಕು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು:</strong> ‘ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಸಮೃದ್ಧ ಬೆಳೆ ಬೆಳೆದಿದ್ದು ರಸಗೊಬ್ಬರ ಅಭಾವ ತಲೆದೋರಿದೆ. ಟಿಎಪಿಸಿಎಂಎಸ್ನಿಂದ ವಿವಿಧ ಮಾದರಿ ರಸಗೊಬ್ಬರವನ್ನು ರೈತರಿಗೆ ನೀಡುತ್ತಿದ್ದು, ಅವಶ್ಯಕತೆ ಇರುವಷ್ಟೇ ಖರೀದಿ ಮಾಡಿದರೆ ಇತರರಿಗೆ ಅನುಕೂಲವಾಗುತ್ತದೆ’ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಕೊತ್ತೂರು ಜಿ. ಮಂಜುನಾಥ್ ತಿಳಿಸಿದರು.</p>.<p>ಟಿಎಪಿಸಿಎಂಎಸ್ ಆವರಣದಲ್ಲಿ ಗುರುವಾರ ಮಾತನಾಡಿದ ಅವರು, ಯೂರಿಯಾ ಮತ್ತು ಡಿಎಪಿ ಗೊಬ್ಬರಕ್ಕೆ ಅಭಾವ ಉಂಟಾಗಿದೆ. ಆದರೆ, ಯೂರಿಯಾ ಬೇರೆ ಕಡೆಯಿಂದ ದಾಸ್ತಾನು ತರಿಸಲಾಗಿದೆ. ಪ್ರತಿ ಕುಟುಂಬಕ್ಕೆ ಒಂದು ಆಧಾರ್ ಕಾರ್ಡ್ ಸಂಖ್ಯೆ ಪಡೆದು, ಒಬ್ಬ ರೈತನಿಗೆ 5 ಮೂಟೆ ಯೂರಿಯಾ ಖರೀದಿಗೆ ಅವಕಾಶ ಮಾಡಲಾಗಿದೆ ಎಂದುತಿಳಿಸಿದರು.</p>.<p>ಈಗಾಗಲೇ, ₹ 33 ಕೋಟಿ ನಷ್ಟದಲ್ಲಿರುವ ಕೋಚಿಮುಲ್ ಇಬ್ಭಾಗ ಮಾಡಿದರೆ ನಷ್ಟವನ್ನು ಎರಡು ಒಕ್ಕೂಟಗಳು ಸಮಪಾಲು ಮಾಡಿಕೊಳ್ಳಬೇಕು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>