ಎಂದಿನಂತೆ ಗ್ರಾಮದಿಂದ ದೇವರಾಯ ಸಮುದ್ರದ ಕಾಲೇಜಿಗೆ ಹೋಗಲು ತನ್ನ ಇತರೆ ಗೆಳೆಯರ ದ್ವಿಚಕ್ರ ವಾಹನದಲ್ಲಿ ಕುಳಿತು ರಾಷ್ಟ್ರೀಯ ಹೆದ್ದಾರಿ 75 ರ ದೇವರಾಯ ಸಮುದ್ರ ವೃತ್ತದಲ್ಲಿ ಹೋಗುತ್ತಿದ್ದಾಗ ಮತ್ತೊಂದು ದ್ವಿಚಕ್ರ ವಾಹನ ಗುದ್ದಿದೆ. ಆಗ ದಿನೇಶ್ ವಾಹನ ಸಮೇತ ಕೆಳಗೆ ಬಿದ್ದಿದ್ದಾನೆ. ಅದೇ ಹೆದ್ದಾರಿಯಲ್ಲಿ ಹಿಂಬದಿಯಲ್ಲಿ ವೇಗವಾಗಿ ಬರುತ್ತಿದ್ದ ಟಾಟಾ ಏಸ್ ವಾಹನ ಕೆಳಗೆ ಬಿದ್ದಿದ್ದ ದಿನೇಶ್ ಮೇಲೆ ಹರಿದ ಪರಿಣಾಮ, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.