<p><strong>ಕೆಜಿಎಫ್</strong>: ಅಸ್ವಿತ್ವದಲ್ಲಿಯೇ ಇಲ್ಲದ ಅಂಬೇಡ್ಕರ್ ಭವನ ಮತ್ತು ಅದರ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ನರೇಗಾ ಯೋಜನೆಯಡಿ ಹಣ ವಿನಿಯೋಗಿಸಿದ ಘಟನೆ ಮಾರಿಕುಪ್ಪಂನಲ್ಲಿ ನಡೆದಿದೆ.</p><p>ಮಾರಿಕುಪ್ಪಂ ಗ್ರಾಮ ಪಂಚಾ ಯಿತಿಯ ಜಲ್ದಿಗಾನಹಳ್ಳಿಯಲ್ಲಿ ಹಿಂದೆ ಅಂಬೇಡ್ಕರ್ ಭವನ ನಿರ್ಮಾಣವಾಗಿದೆ. ಅದಕ್ಕೆ ಐದು ವರ್ಷಗಳಿಂದ ಸಿ.ಸಿ ರಸ್ತೆ ಮತ್ತು ಕಾಂಪೌಂಡ್ ನಿರ್ಮಿಸಲಾಗಿದೆ. ಈ ಎಲ್ಲದಕ್ಕೂ ನರೇಗಾ ಯೋಜನೆಯಡಿ ಹಣ ವಿನಿಯೋಗಿಸಲಾಗಿದೆ. ಆದರೆ ವಾಸ್ತವವಾಗಿ ಭವನ ಇರುವ ಜಾಗದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇರುವ ಕಲ್ಲು ಇದೆ. ಅದಕ್ಕೆ ಸೂರು ಸಹ ಇಲ್ಲ. ಇದುವರೆವಿಗೆ ಕಾಂಪೌಂಡ್ ಅನ್ನೂ ಹಾಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p><p>2018–19ನೇ ಸಾಲಿನಲ್ಲಿ ಚಲ್ದಿಗಾನಹಳ್ಳಿಯ ಅಂಬೇಡ್ಕರ್ ಭವನದ ಕಾಂಪೌಂಡ್ ನಿರ್ಮಾಣಕ್ಕೆ ನರೇಗಾ ಅಡಿ ಹಣ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಚಲ್ದಿಗಾನಹಳ್ಳಿಯಲ್ಲಿ ₹5 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ, ಕಾಂಪೌಂಡ್ ಮತ್ತು ಸಿ.ಸಿ. ರಸ್ತೆ ನಿರ್ಮಿಸಿರುವುದಾಗಿ ಲೆಕ್ಕ ತೋರಿಸಲಾಗಿದೆ. ಹೀಗಾಗಿ, ಅಂಬೇಡ್ಕರ್ ಭವನದ ಹೆಸರಿನಲ್ಲಿ ಹಣ ದುರುಪಯೋಗವಾಗಿರುವ ಶಂಕೆ ಇದೆ ಎನ್ನುತ್ತಾರೆ ಗ್ರಾಮಸ್ಥರು. </p><p>ಅಂಬೇಡ್ಕರ್ ಭವನಕ್ಕಾಗಿ ಮಾರಿ ಕುಪ್ಪಂ ಪಂಚಾಯಿತಿಯ ಆಸ್ತಿ ಪಟ್ಟಿ ಯಲ್ಲಿ 50*80 ನಿವೇಶನ ನೀಡಲಾಗಿದೆ. ಆದರೆ ಈ ನಿವೇಶನದಲ್ಲಿ ಭವನವೇ ಇಲ್ಲ. ಈ ಜಾಗವೂ ಒತ್ತುವರಿಯಾಗಿದೆ. ಭವನಕ್ಕಾಗಿ ಮೀಸಲಾದ ಜಾಗದಲ್ಲಿ ನೀರಿನ ಟ್ಯಾಂಕ್ ಕೂಡ ಕಟ್ಟಲಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.</p>.<div><blockquote>ಅಂಬೇಡ್ಕರ್ ಭವನದ ಕುರಿತು ಬಂದ ದೂರು ಐದು ವರ್ಷದ ಹಿಂದಿನದ್ದಾಗಿದೆ. ಕಾಂಪೌಂಡ್ ನಿರ್ಮಾಣವಾಗಿದೆ ಎಂಬ ದಾಖಲೆ ನಮ್ಮಲ್ಲಿ ಇದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.</blockquote><span class="attribution">ಜಗದೀಶ್, ಪಿಡಿಒ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್</strong>: ಅಸ್ವಿತ್ವದಲ್ಲಿಯೇ ಇಲ್ಲದ ಅಂಬೇಡ್ಕರ್ ಭವನ ಮತ್ತು ಅದರ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ನರೇಗಾ ಯೋಜನೆಯಡಿ ಹಣ ವಿನಿಯೋಗಿಸಿದ ಘಟನೆ ಮಾರಿಕುಪ್ಪಂನಲ್ಲಿ ನಡೆದಿದೆ.</p><p>ಮಾರಿಕುಪ್ಪಂ ಗ್ರಾಮ ಪಂಚಾ ಯಿತಿಯ ಜಲ್ದಿಗಾನಹಳ್ಳಿಯಲ್ಲಿ ಹಿಂದೆ ಅಂಬೇಡ್ಕರ್ ಭವನ ನಿರ್ಮಾಣವಾಗಿದೆ. ಅದಕ್ಕೆ ಐದು ವರ್ಷಗಳಿಂದ ಸಿ.ಸಿ ರಸ್ತೆ ಮತ್ತು ಕಾಂಪೌಂಡ್ ನಿರ್ಮಿಸಲಾಗಿದೆ. ಈ ಎಲ್ಲದಕ್ಕೂ ನರೇಗಾ ಯೋಜನೆಯಡಿ ಹಣ ವಿನಿಯೋಗಿಸಲಾಗಿದೆ. ಆದರೆ ವಾಸ್ತವವಾಗಿ ಭವನ ಇರುವ ಜಾಗದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇರುವ ಕಲ್ಲು ಇದೆ. ಅದಕ್ಕೆ ಸೂರು ಸಹ ಇಲ್ಲ. ಇದುವರೆವಿಗೆ ಕಾಂಪೌಂಡ್ ಅನ್ನೂ ಹಾಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p><p>2018–19ನೇ ಸಾಲಿನಲ್ಲಿ ಚಲ್ದಿಗಾನಹಳ್ಳಿಯ ಅಂಬೇಡ್ಕರ್ ಭವನದ ಕಾಂಪೌಂಡ್ ನಿರ್ಮಾಣಕ್ಕೆ ನರೇಗಾ ಅಡಿ ಹಣ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಚಲ್ದಿಗಾನಹಳ್ಳಿಯಲ್ಲಿ ₹5 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ, ಕಾಂಪೌಂಡ್ ಮತ್ತು ಸಿ.ಸಿ. ರಸ್ತೆ ನಿರ್ಮಿಸಿರುವುದಾಗಿ ಲೆಕ್ಕ ತೋರಿಸಲಾಗಿದೆ. ಹೀಗಾಗಿ, ಅಂಬೇಡ್ಕರ್ ಭವನದ ಹೆಸರಿನಲ್ಲಿ ಹಣ ದುರುಪಯೋಗವಾಗಿರುವ ಶಂಕೆ ಇದೆ ಎನ್ನುತ್ತಾರೆ ಗ್ರಾಮಸ್ಥರು. </p><p>ಅಂಬೇಡ್ಕರ್ ಭವನಕ್ಕಾಗಿ ಮಾರಿ ಕುಪ್ಪಂ ಪಂಚಾಯಿತಿಯ ಆಸ್ತಿ ಪಟ್ಟಿ ಯಲ್ಲಿ 50*80 ನಿವೇಶನ ನೀಡಲಾಗಿದೆ. ಆದರೆ ಈ ನಿವೇಶನದಲ್ಲಿ ಭವನವೇ ಇಲ್ಲ. ಈ ಜಾಗವೂ ಒತ್ತುವರಿಯಾಗಿದೆ. ಭವನಕ್ಕಾಗಿ ಮೀಸಲಾದ ಜಾಗದಲ್ಲಿ ನೀರಿನ ಟ್ಯಾಂಕ್ ಕೂಡ ಕಟ್ಟಲಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.</p>.<div><blockquote>ಅಂಬೇಡ್ಕರ್ ಭವನದ ಕುರಿತು ಬಂದ ದೂರು ಐದು ವರ್ಷದ ಹಿಂದಿನದ್ದಾಗಿದೆ. ಕಾಂಪೌಂಡ್ ನಿರ್ಮಾಣವಾಗಿದೆ ಎಂಬ ದಾಖಲೆ ನಮ್ಮಲ್ಲಿ ಇದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.</blockquote><span class="attribution">ಜಗದೀಶ್, ಪಿಡಿಒ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>