‘ಆಯುಷ್ ವೈದ್ಯರಿಗೆ ಕೊಡುತ್ತಿರುವ ವೇತನ ತುಂಬಾ ಕಡಿಮೆಯಿದೆ. ವೇತನ ಜೀವನ ನಿರ್ವಹಣೆಗೂ ಸಾಲುತ್ತಿಲ್ಲ. ವೈದ್ಯರು ಸುಮಾರು 14 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಸೇವಾ ಭದ್ರತೆ ಇಲ್ಲವಾಗಿದೆ. ಸರ್ಕಾರ ಆಯುಷ್ ವೈದ್ಯರನ್ನು ನಿರ್ಲಕ್ಷಿಸಿದೆ’ ಎಂದು ಸಂಘಟನೆ ಸದಸ್ಯ ಡಾ.ರಾಜೇಂದ್ರ ಮೌನಿ ಹೇಳಿದರು.