<p><strong>ಬೇತಮಂಗಲ</strong>: ಬಂಗಾರಪೇಟೆ ತಾಲ್ಲೂಕಿನ ಕಿಲುಕುಪ್ಪ ಗ್ರಾಮದ ನಾರಾಯಣಪ್ಪ ಹಾಗೂ ರತ್ನಮ್ಮ ಅವರ ಪುತ್ರಿ ಅಶ್ವಿನಿ ಅವರು ರಾಜ್ಯ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ 47ನೇ ರ್ಯಾಂಕ್ ಪಡೆದು ನ್ಯಾಯಾಧೀಶೆಯಾಗಿ ಆಯ್ಕೆಯಾದ ಹಿನ್ನೆಲೆ ಬೇತಮಂಗಲದ ರೇಣುಕಾ ಯಲ್ಲಮ್ಮ ಒಳಗದ ವತಿಯಿಂದ ಅಭಿನಂದಿಸಿದರು.</p>.<p>ಈ ವೇಳೆ ಅಶ್ವಿನಿ ಮಾತನಾಡಿ, ‘ನಿರಂತರ ಪರಿಶ್ರಮ ಮತ್ತು ಛಲವಿದ್ದರೆ ಎಂತಹ ಗುರಿಯನ್ನಾದರೂ ತಲುಪಬಹುದು. ನಾನು ಮೊದಲ ಪ್ರಯತ್ನದಲ್ಲೇ ಸೋಲೊಪ್ಪಿಕೊಳ್ಳಲಿಲ್ಲ. ಸತತ ಪ್ರಯತ್ನದಿಂದ ಎಂಟನೇ ಬಾರಿ ಬರೆದ ಪರೀಕ್ಷೆಯಲ್ಲಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದೇನೆ ಎಂದು ತಿಳಿಸಿದರು.</p>.<p>‘ಈ ಸಾಧನೆಯ ಹಿಂದೆ ನನ್ನ ಕುಟುಂಬದ ಪ್ರೋತ್ಸಾಹ ಮರೆಯಲಾಗದ್ದು. ಅವರ ಬೆಂಬಲವೇ ನಾನು ಇಂದು ಈ ಸ್ಥಾನಕ್ಕೇರಲು ಸಾಧ್ಯ’ ಎಂದರು.</p>.<p>ರೇಣುಕಾ ಯಲ್ಲಮ್ಮ ಒಳಗದ ಜಿಲ್ಲಾಧ್ಯಕ್ಷ ಬಂಡುರು ನಾರಾಯಣ ಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗುವುದು ಬಹಳ ಕಷ್ಟ. ಅಂತಹದರಲ್ಲಿ ಕುಟುಂಬದ ಕಷ್ಟಗಳನ್ನು ಮೀರಿ ಸತತ ಪ್ರಯತ್ನದಿಂದ ಪರೀಕ್ಷೆ ಎದುರಿಸಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಸಂತಸದ ವಿಷಯ ಎಂದರು.</p>.<p>ಎಪಿಎಂಸಿ ನಿರ್ದೇಶಕ ರಾಮಚಂದ್ರಪ್ಪ, ರಾಜ್ಯ ಪ್ರಶಸ್ತಿ ಪುರಸ್ಕೃತ ವೆಂಕಟರಮಣ, ಪ್ರವೀಣ್ ಕುಮಾರ್, ನಾರಾಯಣಸ್ವಾಮಿ, ವೆಂಕಟರಾಮ್, ಬಲ್ಲರಾಪ್ಪ, ವೆಂಕಟೇಶಯ್ಯ, ಕೃಷ್ಣಮೂರ್ತಿ, ಸುಬ್ಬರಾಯಪ್ಪ, ಮೂರ್ತಿ, ನಂದೀಶ್, ಜೆಸಿಬಿ ಮುನಿಯಪ್ಪ, ಕೆಂಚಪ್ಪ, ಅನಿಲ್, ಚಂದ್ರಪ್ಪ, ನತ್ತ ನಾಗರಾಜ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇತಮಂಗಲ</strong>: ಬಂಗಾರಪೇಟೆ ತಾಲ್ಲೂಕಿನ ಕಿಲುಕುಪ್ಪ ಗ್ರಾಮದ ನಾರಾಯಣಪ್ಪ ಹಾಗೂ ರತ್ನಮ್ಮ ಅವರ ಪುತ್ರಿ ಅಶ್ವಿನಿ ಅವರು ರಾಜ್ಯ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ 47ನೇ ರ್ಯಾಂಕ್ ಪಡೆದು ನ್ಯಾಯಾಧೀಶೆಯಾಗಿ ಆಯ್ಕೆಯಾದ ಹಿನ್ನೆಲೆ ಬೇತಮಂಗಲದ ರೇಣುಕಾ ಯಲ್ಲಮ್ಮ ಒಳಗದ ವತಿಯಿಂದ ಅಭಿನಂದಿಸಿದರು.</p>.<p>ಈ ವೇಳೆ ಅಶ್ವಿನಿ ಮಾತನಾಡಿ, ‘ನಿರಂತರ ಪರಿಶ್ರಮ ಮತ್ತು ಛಲವಿದ್ದರೆ ಎಂತಹ ಗುರಿಯನ್ನಾದರೂ ತಲುಪಬಹುದು. ನಾನು ಮೊದಲ ಪ್ರಯತ್ನದಲ್ಲೇ ಸೋಲೊಪ್ಪಿಕೊಳ್ಳಲಿಲ್ಲ. ಸತತ ಪ್ರಯತ್ನದಿಂದ ಎಂಟನೇ ಬಾರಿ ಬರೆದ ಪರೀಕ್ಷೆಯಲ್ಲಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದೇನೆ ಎಂದು ತಿಳಿಸಿದರು.</p>.<p>‘ಈ ಸಾಧನೆಯ ಹಿಂದೆ ನನ್ನ ಕುಟುಂಬದ ಪ್ರೋತ್ಸಾಹ ಮರೆಯಲಾಗದ್ದು. ಅವರ ಬೆಂಬಲವೇ ನಾನು ಇಂದು ಈ ಸ್ಥಾನಕ್ಕೇರಲು ಸಾಧ್ಯ’ ಎಂದರು.</p>.<p>ರೇಣುಕಾ ಯಲ್ಲಮ್ಮ ಒಳಗದ ಜಿಲ್ಲಾಧ್ಯಕ್ಷ ಬಂಡುರು ನಾರಾಯಣ ಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗುವುದು ಬಹಳ ಕಷ್ಟ. ಅಂತಹದರಲ್ಲಿ ಕುಟುಂಬದ ಕಷ್ಟಗಳನ್ನು ಮೀರಿ ಸತತ ಪ್ರಯತ್ನದಿಂದ ಪರೀಕ್ಷೆ ಎದುರಿಸಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಸಂತಸದ ವಿಷಯ ಎಂದರು.</p>.<p>ಎಪಿಎಂಸಿ ನಿರ್ದೇಶಕ ರಾಮಚಂದ್ರಪ್ಪ, ರಾಜ್ಯ ಪ್ರಶಸ್ತಿ ಪುರಸ್ಕೃತ ವೆಂಕಟರಮಣ, ಪ್ರವೀಣ್ ಕುಮಾರ್, ನಾರಾಯಣಸ್ವಾಮಿ, ವೆಂಕಟರಾಮ್, ಬಲ್ಲರಾಪ್ಪ, ವೆಂಕಟೇಶಯ್ಯ, ಕೃಷ್ಣಮೂರ್ತಿ, ಸುಬ್ಬರಾಯಪ್ಪ, ಮೂರ್ತಿ, ನಂದೀಶ್, ಜೆಸಿಬಿ ಮುನಿಯಪ್ಪ, ಕೆಂಚಪ್ಪ, ಅನಿಲ್, ಚಂದ್ರಪ್ಪ, ನತ್ತ ನಾಗರಾಜ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>