ಕೋಲಾರ: ‘ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಯಾರನ್ನೇ ಅಭ್ಯರ್ಥಿ ಮಾಡಿದರೂ ಪಕ್ಷಕ್ಕೆ ದ್ರೋಹ ಬಗೆಯಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ರೆಸಾರ್ಟ್ವೊಂದರಲ್ಲಿ ಆಕಾಂಕ್ಷಿಗಳಿಂದ ‘ಕೋಲಾರಮ್ಮ’ ದೇವತೆ ಹೆಸರಲ್ಲಿ ಆಣೆ ಮಾಡಿಸಿದ್ದಾರೆ.