23ನೇ ವಾರ್ಡ್ನ ಬಡಾವಣೆಯೊಂದರಲ್ಲಿ ಯುಜಿಡಿ ಸಮಸ್ಯೆಯಾಗಿ ಕೊಳಚೆ ನೀರು ರಸ್ತೆಗೆ ಹರಿಯುತ್ತಿತ್ತು. ಈ ಸಂಬಂಧ ಸಾದಿಕ್ ಪಾಷಾ ನಗರಸಭೆಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಯುಜಿಡಿ ಸ್ವಚ್ಛತಾ ವಾಹನದಲ್ಲಿ ಇಬ್ಬರ ಸಹಾಯಕರೊಂದಿಗೆ ಸ್ಥಳಕ್ಕೆ ತೆರಳಿದ್ದ ಪೌರ ಕಾರ್ಮಿಕ ಮುನಿಯಪ್ಪ ಸ್ವಚ್ಛತಾ ಕೆಲಸ ಅರ್ಧಕ್ಕೆ ಸ್ಥಗಿತಗೊಳಿಸಿ ಬೇರೊಂದು ಬಡಾವಣೆಗೆ ಹೋಗಲು ಮುಂದಾಗಿದ್ದಾರೆ.