<p><strong>ಬೇತಮಂಗಲ:</strong> ಬಡವರ ತಿರುಪತಿ ಎಂದೇ ಕರೆಯಲ್ಪಡುವ ಬಂಗಾರ ತಿರುಪತಿಯ ವೆಂಕಟರಮಣಸ್ವಾಮಿ ದೇವಾಲಯಕ್ಕೆ 40 ವರ್ಷಗಳ ಬಳಿಕ ಬಣ್ಣದ ಭಾಗ್ಯ ಒದಗಿಬಂದಿದ್ದು, ಎಲ್ಲಾ ಗೋಪುರಗಳಿಗೆ ಬಣ್ಣ ಬಳಿಯಲು ₹50 ಲಕ್ಷ ಅನುದಾನ ಒದಗಿ ಬಂದಿದೆ.</p>.<p>ಕೆಜಿಎಫ್ ತಾಲೂಕಿನ ಗುಟ್ಟಹಳ್ಳಿ (ಬಂಗಾರ ತಿರುಪತಿ)ಯ ಶ್ರೀವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿರುವ ಬೃಹತ್ ಗೋಪುರಗಳು ಮತ್ತು ದೇಗುಲದ ಮೇಲಿನ ಗೋಪುರಗಳನ್ನು ಒಳಗೊಂಡಂತೆ ಎಲ್ಲ ಗೋಪುರಗಳೂ ಹೊಸ ಬಣ್ಣಗಳಿಂದ ಕಂಗೊಳಿಸಲಿವೆ.</p>.<p>ದೇಗುಲದ ಆಡಳಿತ ಮಂಡಳಿಯು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸತತ ಐದಾರು ವರ್ಷಗಳಿಂದ ದೇವಾಲಯದ ಗೋಪುರಗಳಿಗೆ ಬಣ್ಣ ಮಾಡಿಸುವ ವಿಚಾರವಾಗಿ ಪತ್ರಗಳನ್ನು ಬರೆಯುತ್ತಲೇ ಇತ್ತು.</p>.<p>ದೇಗುಲದ ಗೋಪುರಗಳಿಗೆ ಬಣ್ಣ ಮಾಡಲು ವಿವಿಧ ಇಲಾಖೆಗಳಿಂದ ಅಂದಾಜು ಪಟ್ಟಿ ತಯಾರಿಸಲು ಸೂಚಿಸಲಾಗಿತ್ತು. ಕೊನೆಯದಾಗಿ ಪಂಚಾಯತ್ ರಾಜ್ ಇಲಾಖೆಯಿಂದ ₹50 ಲಕ್ಷ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲು ಗುತ್ತಿಗೆ ನೀಡಲಾಗಿದೆ.</p>.<p>ಕಾಮಗಾರಿಯ ಭಾಗವಾಗಿ ಈಗಾಗಲೇ ದೇವಾಲಯದ ಆವರಣದಲ್ಲಿನ ಕೊಳದಲ್ಲಿರುವ ಗೋಪುರಕ್ಕೆ ಬಣ್ಣ ಬಳಿಯಲಾಗಿದೆ. ಮುಂದೆ ಬೃಹತ್ ಗೋಪುರಗಳಿಗೆ ಬಣ್ಣ ಮಾಡಲು ಅಗತ್ಯ ತಯಾರಿ ನಡೆಸಲಾಗಿದೆ.</p>.<p>ದೇವರ ದರ್ಶನಕ್ಕೆ, ಭಕ್ತರಿಗೆ ಅಡೆತಡೆ ಇಲ್ಲ: ದೇವಾಲಯದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಅಡೆತಡೆಗಳು ಇಲ್ಲ. ಇದಕ್ಕಾಗಿ ವೆಂಕಟರಮಣಸ್ವಾಮಿ ಹಾಗೂ ಅಲವೇಲು ಮಂಗಮ್ಮ ಇಬ್ಬರಿಗೂ ಒಂದೇ ಕಡೆ ದರ್ಶನ ಭಾಗ್ಯವನ್ನು ಕಲ್ಪಿಸಲಾಗಿದೆ ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇತಮಂಗಲ:</strong> ಬಡವರ ತಿರುಪತಿ ಎಂದೇ ಕರೆಯಲ್ಪಡುವ ಬಂಗಾರ ತಿರುಪತಿಯ ವೆಂಕಟರಮಣಸ್ವಾಮಿ ದೇವಾಲಯಕ್ಕೆ 40 ವರ್ಷಗಳ ಬಳಿಕ ಬಣ್ಣದ ಭಾಗ್ಯ ಒದಗಿಬಂದಿದ್ದು, ಎಲ್ಲಾ ಗೋಪುರಗಳಿಗೆ ಬಣ್ಣ ಬಳಿಯಲು ₹50 ಲಕ್ಷ ಅನುದಾನ ಒದಗಿ ಬಂದಿದೆ.</p>.<p>ಕೆಜಿಎಫ್ ತಾಲೂಕಿನ ಗುಟ್ಟಹಳ್ಳಿ (ಬಂಗಾರ ತಿರುಪತಿ)ಯ ಶ್ರೀವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿರುವ ಬೃಹತ್ ಗೋಪುರಗಳು ಮತ್ತು ದೇಗುಲದ ಮೇಲಿನ ಗೋಪುರಗಳನ್ನು ಒಳಗೊಂಡಂತೆ ಎಲ್ಲ ಗೋಪುರಗಳೂ ಹೊಸ ಬಣ್ಣಗಳಿಂದ ಕಂಗೊಳಿಸಲಿವೆ.</p>.<p>ದೇಗುಲದ ಆಡಳಿತ ಮಂಡಳಿಯು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸತತ ಐದಾರು ವರ್ಷಗಳಿಂದ ದೇವಾಲಯದ ಗೋಪುರಗಳಿಗೆ ಬಣ್ಣ ಮಾಡಿಸುವ ವಿಚಾರವಾಗಿ ಪತ್ರಗಳನ್ನು ಬರೆಯುತ್ತಲೇ ಇತ್ತು.</p>.<p>ದೇಗುಲದ ಗೋಪುರಗಳಿಗೆ ಬಣ್ಣ ಮಾಡಲು ವಿವಿಧ ಇಲಾಖೆಗಳಿಂದ ಅಂದಾಜು ಪಟ್ಟಿ ತಯಾರಿಸಲು ಸೂಚಿಸಲಾಗಿತ್ತು. ಕೊನೆಯದಾಗಿ ಪಂಚಾಯತ್ ರಾಜ್ ಇಲಾಖೆಯಿಂದ ₹50 ಲಕ್ಷ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲು ಗುತ್ತಿಗೆ ನೀಡಲಾಗಿದೆ.</p>.<p>ಕಾಮಗಾರಿಯ ಭಾಗವಾಗಿ ಈಗಾಗಲೇ ದೇವಾಲಯದ ಆವರಣದಲ್ಲಿನ ಕೊಳದಲ್ಲಿರುವ ಗೋಪುರಕ್ಕೆ ಬಣ್ಣ ಬಳಿಯಲಾಗಿದೆ. ಮುಂದೆ ಬೃಹತ್ ಗೋಪುರಗಳಿಗೆ ಬಣ್ಣ ಮಾಡಲು ಅಗತ್ಯ ತಯಾರಿ ನಡೆಸಲಾಗಿದೆ.</p>.<p>ದೇವರ ದರ್ಶನಕ್ಕೆ, ಭಕ್ತರಿಗೆ ಅಡೆತಡೆ ಇಲ್ಲ: ದೇವಾಲಯದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಅಡೆತಡೆಗಳು ಇಲ್ಲ. ಇದಕ್ಕಾಗಿ ವೆಂಕಟರಮಣಸ್ವಾಮಿ ಹಾಗೂ ಅಲವೇಲು ಮಂಗಮ್ಮ ಇಬ್ಬರಿಗೂ ಒಂದೇ ಕಡೆ ದರ್ಶನ ಭಾಗ್ಯವನ್ನು ಕಲ್ಪಿಸಲಾಗಿದೆ ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>